Get Updates
Get notified of breaking news, exclusive insights, and must-see stories!

Annamalai: ತಲೆಹರಟೆ ಮಾಡುತ್ತಿರುವ ಅಣ್ಣಾಮಲೈರನ್ನು ಗುಮ್ಮುತ್ತಿರುವ ತಮಿಳರು- ಮಾಜಿ ಅಧಿಕಾರಿಯಿಂದ ಬಿಜೆಪಿಗೆ ಸಂಕಷ್ಟ

ಬೆಂಗಳೂರು, ನವೆಂಬರ್‌ 10: ದ್ರಾವಿಡ ಚಳವಳಿಯ ಪಿತಾಮಹ 'ಪೆರಿಯಾರ್' ಕುರಿತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನೀಡಿರುವ ಹೇಳಿಕೆಯೊಂದು ತಮಿಳುನಾಡಿನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದೂ ದೇವಾಲಯಗಳ ಮುಂದಿರುವ ಪೆರಿಯಾರ್‌ ( ಇವಿ ರಾಮಸಾಮಿ ) ಪ್ರತಿಮೆಗಳನ್ನು ತೆಗೆದುಹಾಕುತ್ತೇವೆಂದು ಅಣ್ಣಾಮಲೈ ಹೇಳಿಕೆ ನೀಡಿದ್ದಾರೆ. ಇದಕ್ಕೆ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ರೊಚ್ಚಿಗೆದ್ದಿವೆ.

ಸೆಪ್ಟೆಂಬರ್‌ನಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ಆಡಳಿತಾರೂಢ ಡಿಎಂಕೆ ಮತ್ತು ಪ್ರತಿಪಕ್ಷ ಎಐಎಡಿಎಂಕೆ ಅಣ್ಣಾಮಲೈ ಹೇಳಿಕೆಯನ್ನು ಕಟುವಾಗಿ ಟೀಕಿಸಿವೆ.

Annamalais most controversial remark on Periyar creates ruckus in Tamil Nadu

'ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ನಾವು ಪ್ರಮುಖ ಕೆಲಸವೊಂದನ್ನು ಮಾಡುತ್ತೇವೆ. ದೇವರಿಲ್ಲ ಮತ್ತು ದೇವರನ್ನು ಪೂಜಿಸುವವರು ಮೂರ್ಖರು ಎಂದು ಹೇಳಿದ ವ್ಯಕ್ತಿಯ (ಪೆರಿಯಾರ್) ಪ್ರತಿಮೆಗಳನ್ನು ತೆಗೆದುಹಾಕುತ್ತೇವೆ. ಅದರಲ್ಲೂ ದೇವಾಲಯಗಳ ಮುಂದಿರುವ ಪ್ರತಿಮೆಗಳನ್ನು ರಾಜ್ಯದಾದ್ಯಂತ ತೆಗೆದುಹಾಕುತ್ತೇವೆ' ಎಂದು ಅಣ್ಣಾಮಲೈ ಹೇಳಿದ್ದಾರೆ.

ಮಂಗಳವಾರ ಸಂಜೆ ತಿರುಚ್ಚಿ ಜಿಲ್ಲೆಯ ಶ್ರೀರಂಗಂನಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿರುವ ಅವರು, ಸಂತ ತಿರುವಳ್ಳುವರ್ ಮತ್ತು ರಾಜ್ಯದ ಇತರ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ನಾವು ಸ್ಥಾಪಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಈ ರ್‍ಯಾಲಿಯು ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮತ್ತು ಪೆರಿಯಾರ್ ಪ್ರತಿಮೆ ನಡುವಿನ ಸ್ಥಳದಲ್ಲಿ ನಡೆದಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

Annamalais most controversial remark on Periyar creates ruckus in Tamil Nadu

1967ರಲ್ಲಿ ದ್ರಾವಿಡ ಕಳಗಂ (ಡಿಕೆ, ಡಿಎಂಕೆ ಮತ್ತು ಎಐಎಡಿಎಂಕೆಯ ಸೈದ್ಧಾಂತಿಕ ಪೋಷಕ) ಧ್ವಜವನ್ನು ದೇವಸ್ಥಾನದ ಮುಂಭಾಗದಲ್ಲಿ ಪ್ರತಿಮೆಯೊಂದಿಗೆ ಹಾರಿಸಲಾಗಿತ್ತು ಎಂದು ಅಣ್ಣಾಮಲೈ ಉಲ್ಲೇಖಿಸಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ನಾವು ಎಲ್ಲವನ್ನೂ ತೆಗೆದುಹಾಕುತ್ತೇವೆ. ಎಲ್ಲಾ ದೇವಸ್ಥಾನಗಳ ಮುಂದಿರುವ ಧ್ವಜ ಸ್ತಂಭಗಳು, ಸೂಚನಾ ಫಲಕಗಳು ಮತ್ತು ಪ್ರತಿಮೆಗಳನ್ನು ನಿರ್ಣಾಮ ಮಾಡುತ್ತೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.

Annamalais most controversial remark on Periyar creates ruckus in Tamil Nadu

ರಾಜ್ಯದಲ್ಲಿ ಸುಮಾರು 50,000 ದೇವಾಲಯಗಳನ್ನು ನಿರ್ವಹಿಸುತ್ತಿರುವ ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ದತ್ತಿ ಇಲಾಖೆಯನ್ನು ರದ್ದುಪಡಿಸುವ ಕುರಿತಾಗಿಯೂ ಅವರು ಮಾತನಾಡಿದ್ದಾರೆ. ಬಿಜೆಪಿ ಸರ್ಕಾರದ ಮೊದಲ ದಿನ ರಾಜ್ಯದಲ್ಲಿ ಮಾನವ ಸಂಪನ್ಮೂಲ ಮತ್ತು ಸಿಇ ಇಲಾಖೆಯ ಕೊನೆಯ ದಿನವಾಗಿರುತ್ತದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಅಣ್ಣಾಮಲೈ ಅವರ ಹೇಳಿಕೆಗೆ ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರು ತಿರುಗೇಟು ನೀಡಿದ್ದಾರೆ. ಪೂರ್ವದಲ್ಲಿ ಉದಯಿಸುವ ಸೂರ್ಯ ಪಶ್ಚಿಮದಲ್ಲಿಯೂ ಉದಯಿಸಬಹುದು. ಆದರೆ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮಾನವ ಸಂಪನ್ಮೂಲ ಮತ್ತು ಸಿಇ ಸಚಿವ ಶೇಕರ್ ಬಾಬು ಬುಧವಾರ ಹೇಳಿದ್ದಾರೆ.

'ತಮಿಳುನಾಡಿನ ಜನರು ಅಣ್ಣಾಮಲೈ ಅವರಂತಹ ವ್ಯಕ್ತಿಗೆ ಆಡಳಿತ ನಡೆಸಲು ಎಂದಿಗೂ ಅವಕಾಶ ನೀಡುವುದಿಲ್ಲ. ಏಕೆಂದರೆ ಹಿಂದೂ ಧರ್ಮ ಮತ್ತು ನಾಸ್ತಿಕತೆಯನ್ನು ಅನುಸರಿಸುವವರನ್ನು ಡಿಎಂಕೆ ಸ್ವಾಗತಿಸುತ್ತಿದೆ. ಅವರು (ಬಿಜೆಪಿ) ಏನನ್ನೂ ಮಾಡಲು ಸಾಧ್ಯವಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯೊಂದಿಗಿನ ಸುದೀರ್ಘ ಕಾಲದ ಮೈತ್ರಿಯನ್ನು ಎಐಎಡಿಎಂಕೆ ತೊರೆದಿದೆ. ಈ ಮೈತ್ರಿ ತೊರೆಯಲು ಅಣ್ಣಾಮಲೈ ಅವರೇ ಕಾರಣವೆಂದು ಪಕ್ಷದ ನಾಯಕರು ಹೇಳಿದ್ದಾರೆ.

ಪೆರಿಯಾರ್‌ ಕುರಿತು ಅಣ್ಣಾಮಲೈ ಹೇಳಿಕೆಯನ್ನು ಖಂಡಿಸಿರುವ ಎಐಎಡಿಎಂಕೆ ಮಾಜಿ ಸಚಿವ ಡಿ ಜಯಕುಮಾರ್, ಅಣ್ಣಾಮಲೈ ಅವರ ಈ ಹೇಳಿಕೆಗಳು ಬಿಜೆಪಿಗೆ ಹಿನ್ನೆಡೆಯನ್ನು ಉಂಟುಮಾಡುತ್ತವೆ. ಪೆರಿಯಾರ್‌ ಹಾಗೂ ಅಣ್ಣಾದೊರೈ ಸೇರಿದಂತೆ ಹಲವು ದ್ರಾವಿಡ ನಾಯಕರನ್ನು ಅಣ್ಣಾಮಲೈ ದೂಷಿಸುತ್ತಿದ್ದಾರೆ. ದಿವಂಗತ ನಾಯಕರಿಗೆ ಗೌರವ ತೋರಿಸುವುದು ಮಾತ್ರ ಸೌಜನ್ಯವಾಗಿದೆ. ಟೀಕೆಗಳು ಅವರ ಯೋಗ್ಯತೆಯನ್ನು ತೋರಿಸುತ್ತವೆ' ಎಂದು ಹೇಳಿದ್ದಾರೆ.

ಅಣ್ಣಾಮಲೈ ಸ್ಪಷ್ಟನೆ

ವಿವಾದದ ಕುರಿತು ಸ್ಪಷ್ಟನೆ ನೀಡಿರುವ ಅಣ್ಣಾಮಲೈ, 'ಪೆರಿಯಾರ್ ( ಇವಿ ರಾಮಸಾಮಿ ) ಅವರ ವಿರುದ್ಧ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯು 'ಪೆರಿಯಾರ್' ಇವಿ ರಾಮಸಾಮಿ ಅವರ ಎಲ್ಲಾ ಪ್ರತಿಮೆಗಳನ್ನು ಬಿಜೆಪಿ ತೆಗೆದುಹಾಕುತ್ತದೆ ಎಂದು ಹೇಳಿಕೆ ನೀಡಿದ ಒಂದು ದಿನದ ನಂತರ ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

'ದೇವಾಲಯಗಳ ಬಳಿ ಪೆರಿಯಾರ್ ಅವರ ನಾಸ್ತಿಕ ಘೋಷಣೆಗಳನ್ನು ತೆಗೆದುಹಾಕುವುದು ಎಂದಷ್ಟೇ ನಾನು ಹೇಳಿಕೆ ನೀಡಿದ್ದೆ' ಎಂದು ಅವರು ಹೇಳಿದ್ದಾರೆ.

ಚೆನ್ನೈನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, 'ಪೆರಿಯಾರ್ ಅವರನ್ನು ಬಿಜೆಪಿ ಅವಮಾನಿಸಿಲ್ಲ. ಬದಲಿಗೆ ದೇವಸ್ಥಾನಗಳ ಮುಂದೆ ಪೆರಿಯಾರ್ ಅವರ ನಾಸ್ತಿಕ ಘೋಷಣೆಗಳನ್ನು ತೆಗೆದು ಹಾಕುತ್ತೇವೆ ಎಂದು ಹೇಳಿದ್ದೆ. ಈ ಹೇಳಿಕೆಗಳು ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ. ಹೀಗಾಗಿ ಜನರ ಪರವಾಗಿ ನಾನು ಮಾತನಾಡಿದ್ದೇನೆ' ಎಂದು ಅಣ್ಣಾಮಲೈ ಹೇಳಿದ್ದಾರೆ.

ಈ ಘೋಷಣೆಗಳು ದೇವಸ್ಥಾನದ ಹೊರಗೆ ಇರಬಾರದು. ನಾವು ಜನರ ಪರವಾಗಿ ವಾದ ಮಂಡಿಸಿದ್ದೇವೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

'ಪೆರಿಯಾರ್ ಅವರ ಪ್ರತಿಮೆಯು ಎಲ್ಲಿ ಇರಬೇಕೋ ಅಲ್ಲಿಗೆ ಸೀಮಿತವಾಗಿ ಇರಬೇಕು. ದೇವಸ್ಥಾನಗಳ ಮುಂದೆ ಅಲ್ಲ. ದೇವಸ್ಥಾನಗಳಿಗೆ ಹೋಗುವುದನ್ನು ನಂಬುವ ಜನರ ಭಾವನೆಗಳನ್ನು ಏಕೆ ನೋಯಿಸುತ್ತೀರಿ?' ಎಂದು ಪ್ರಶ್ನಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+