Get Updates
Get notified of breaking news, exclusive insights, and must-see stories!

Annamalai: ಬಿಜೆಪಿ ಅಭ್ಯರ್ಥಿ ಅಣ್ಣಾಮಲೈಗೆ ತೀವ್ರ ಹಿನ್ನಡೆ; ಒಂದು ಬೂತ್‌ನಲ್ಲಿ ಕೇವಲ ಒಂದೇ ಮತ!

ಲೋಕಸಭಾ ಚುನಾವಣೆ 2024ರಲ್ಲಿ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ತಮಿಳುನಾಡಿನ ಕೊಯಮತ್ತೂರು ಕೂಡ ಒಂದು. ಬಿಜೆಪಿ ಗೆಲ್ಲುವ ಭರವಸೆ ಇಟ್ಟುಕೊಂಡಿದ್ದ ಕ್ಷೇತ್ರಗಳಲ್ಲಿ ಇದು ಒಂದಾಗಿದ್ದು, ಈಗ ಹಿನ್ನಡೆಯಾಗಿದೆ. ಅಣ್ಣಾಮಲೈ ಆರಂಭಿಕ ಹಂತದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಗೆಲ್ಲಿಸಲು ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರ ದಂಡು ಕೊಯಮತ್ತೂರಿನಲ್ಲಿ ಪ್ರಚಾರ ಮಾಡಿತ್ತು. ತಮಿಳುನಾಡಿನ ಮೇಲೆ ವಿಶೇಷ ಒಲವು ಹೊಂದಿರುವ ಮೋದಿಗೆ ಇಲ್ಲಿ ಬಿಜೆಪಿಯನ್ನು ಗೆಲ್ಲಿಸುವುದು ಕನಸಾಗಿತ್ತು.

Annamalai Trailing by 11 000 Votes in Coimbatore Receives Only One Vote in a Booth

ಕೊಯಮತ್ತೂರು ಲೋಕಸಭಾ ಚುನಾವಣೆ ಮತ ಎಣಿಕೆ ಬೆಳಗ್ಗೆಯೇ ಆರಂಭವಾಗಿದ್ದರೂ, ಸಾಕಷ್ಟು ಸಮಯದ ವರೆಗೆ ಮತ ಎಣಿಕೆ ವಿವರ ಬಹಿರಂಗವಾಗಿರಲಿಲ್ಲ. ತಡವಾಗಿ ಮತ ಎಣಿಕೆ ವಿವರವನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಮಧ್ಯಾಹ್ನ 12.20 ಗಂಟೆಗೆ ಬಂದಿರುವ ಮಾಹಿತಿಯ ಪ್ರಕಾರ ಅಣ್ಣಾಮಲೈ 11,909 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ. ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್‌ಕುಮಾರ್ 42798 ಮತ ಪಡೆದು ಮುನ್ನಡೆ ಪಡೆದುಕೊಂಡಿದ್ದಾರೆ.

ಒಂದು ಬೂತ್‌ನಲ್ಲಿ ಒಂದು ಮತ

ಬೂತ್‌ವಾರು ಮತ ಎಣಿಕೆಯಲ್ಲಿ ಅಣ್ಣಾಮಲೈ ಅವರಿಗೆ ಒಂದು ಬೂತ್‌ನಲ್ಲಿ ಒಂದೇ ಒಂದು ಮತ ಮಾತ್ರ ಸಿಕ್ಕಿದೆ. ಅವರಿಗೆ ಒಂದು ಮತ ಸಿಕ್ಕಿರುವ ಪತ್ರ ವೈರಲ್ ಆಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+