ರಾಜಸ್ಥಾನದಲ್ಲಿ ಭಾರತೀಯ ವಾಯುನೆಲೆಯ ವಿಮಾನ ಪತನ
ಜೈಪುರ, ಮಾರ್ಚ್ 15: ಭಾರತೀಯ ವಾಯು ನೆಲೆಗೆ ಸಂಬಂಧಿಸಿದ ಸುಖೋಯ್-30 ವಿಮಾನ ರಾಜಸ್ಥಾನದ ಬರ್ಮೆರ್ ಎಂಬಲ್ಲಿ ಪತನಗೊಂಡಿದೆ.
ದೇವಾನಿಯೋಂಕಿ ಧಾನಿ ಎಂಬ ಪ್ರದೇಶದಲ್ಲಿ ಇಳಿಯಬೇಕಿದ್ದ ವಿಮಾನ ತಾಂತ್ರಿಕ ದೋಷದಿಂದಾಗಿ ಮೊದಲೇ ಭೂಸ್ಪರ್ಶ ಮಾಡಿದ್ದರಿಂದ ಬರ್ಮೇರ್ ನ ನಾರಾಯಣ ರಾಮ್ ಎಂಬುವವರ ಗುಡಿಸಲಿಗೆ ತಾಕಿ ಗುಡಿಸಲಿನಲ್ಲಿದ್ದ ಮೂವರಿಗೆ ಸುಟ್ಟ ಗಾಯವಾಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲೆಟ್ ಅನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.

ಆರಕ್ಕಿಂತ ಹೆಚ್ಚು ಮನೆಗಳು ಸುಟ್ಟಿದ್ದಲ್ಲದೆ, ಎರಡು ಮೋಟಾರ್ ಸೈಕಲ್ ಸಹ ನಾಶವಾಗಿದೆ. ಘಟನೆಯಿಂದಾಗಿ ಒಂದು ಜಾನುವಾರು ಸಹ ಸಜೀವ ದಹನವಾಗಿದೆ.












Click it and Unblock the Notifications