Get Updates
Get notified of breaking news, exclusive insights, and must-see stories!

ಅಂಬೇಡ್ಕರ್ ಪ್ರತಿಮೆ ಅಪವಿತ್ರ: ಬಿಜೆಪಿ-ಕಾಂಗ್ರೆಸ್‌ನಿಂದ ಕೇಜ್ರಿವಾಲ್ ನಕಲಿ ದಲಿತ ಪ್ರೀತಿ, ಖಲಿಸ್ತಾನಿ ಸಂಪರ್ಕ ಆರೋಪ

ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಅಪವಿತ್ರ ಪ್ರಕರಣದಲ್ಲಿ ಪಂಜಾಬ್ ಸರ್ಕಾರ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಭಾರೀ ಟೀಕೆಯನ್ನು ಎದುರಿಸುತ್ತಿದೆ. ಘಟನೆ ನೆನಪಿಸಿಕೊಳ್ಳುವುದಾದರೆ ಪಂಜಾಬ್‌ನ ಅಮೃತಸರದಲ್ಲಿರುವ 33 ಅಡಿ ಎತ್ತರದ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಯನ್ನು ಜನವರಿ 26ರ ಗಣರಾಜ್ಯೋತ್ಸವದ ದಿನ ಹಗಲು ಹೊತ್ತಿನಲ್ಲಿಯೇ ಧ್ವಂಸಗೊಳಿಸಲಾಯಿತು. ಆಘಾತಕಾರಿ ಸಂಗತಿ ಎಂದರೆ ಈ ಘಟನೆ ನಡೆದಿದ್ದು ಪೊಲೀಸ್ ಠಾಣೆಯ ಸಮೀಪದಲ್ಲಿಯೇ, ಆಗಂತುಕರು ಸುತ್ತಿಗೆಗಳನ್ನು ಬಳಕೆ ಮಾಡಿಕೊಂಡು ಪ್ರತಿಮೆಗೆ ಹಾನಿ ಮಾಡಿದರು.

ಈ ಪ್ರತಿಮೆ ಅಪವಿತ್ರ ಪ್ರಕರಣವನ್ನು ವಿವಿಧ ರಾಜಕೀಯ ಪಕ್ಷಗಳು, ನಾಯಕರು ವ್ಯಾಪಕವಾಗಿ ಖಂಡಿಸಿದರು. ಭಾರತೀಯ ಜನತಾ ಪಕ್ಷ ಎಎಪಿ ಮುಖಸ್ಥ ಅರವಿಂದ ಕೇಜ್ರಿವಾಲ್ ವಿರುದ್ಧ ಆರೋಪಗಳನ್ನು ಮಾಡಿತು, ದಲಿತ ಸಮುದಾಯವನ್ನು ಅಗೌರವಿಸುತ್ತಿದ್ದಾರೆ ಎಂದು ಆರೋಪಿಸಿತು. ಬಿಜೆಪಿ ವಕ್ತಾರ ಸಂದೀಪ್ ಪಾತ್ರ ಈ ಘಟನೆಯನ್ನು 'ಹೃದಯ ವಿದ್ರಾವಕ' ಎಂದು ಕರೆದರು ಮತ್ತು ಕೇಜ್ರಿವಾಲ್ ನಾಯಕತ್ವದಲ್ಲಿ ಪಂಜಾಬ್ ಸರ್ಕಾರದ ನಿಷ್ಕ್ರೀಯತೆಯನ್ನು ಟೀಕಿಸಿದರು. ಮುಂದುವರೆದು ಅವರು ಕೇಜ್ರಿವಾಲ್‌ರನ್ನು 'ದಲಿತ ವಿರೋಧಿ' ಎಂದು ಆರೋಪಿಸಿದರು, ಹಿಂದಿನ ಸಂದರ್ಭಗಳನ್ನು ಉಲ್ಲೇಖಿಸಿ ಅವರು ದಲಿತ ಪ್ರತಿನಿಧಿಯನ್ನು ಉಳಿಸಲು ವಿಫಲರಾದರು ಎಂದು ದೂರಿದರು. ದಲಿತರನ್ನು ಬೆಂಬಲಿಸುವುದಾಗಿ ಹೇಳುವ ಎಎಪಿಯ ಘೋಷಣೆ, ನಕಲಿ ಎಂದು ಬಿಜೆಪಿ ಕರೆಯಿತು.

Ambedkar Statue Desecrated BJP Congress Slam Kejriwals Fake Dalit Love Accuse AAP Of Khalistani Links

ಈ ಬಳಿಕ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಪಕ್ಷದ ಇತರ ನಾಯಕರೊಂದಿಗೆ ದೆಹಲಿಯಲ್ಲಿ ಕೇಜ್ರಿವಾಲ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು, ಅವರು ರಾಜೀನಾಮೆ ನೀಡಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಬೇಡಿಕೆ ಇಟ್ಟರು. ಅಲ್ಲದೇ ಅವರು ಪೊಲೀಸರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು. ದೆಹಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಹಾನುಭೂತಿಯನ್ನು ಪಡೆಯಲು ಕೇಜ್ರಿವಾಲ್ ತಮ್ಮ ಮೇಲೆ ದಾಳಿ ಮಾಡುವ ಪ್ರಯತ್ನ ನಡೆದಿದೆ ಎನ್ನಬಹುದು ಎಂದು ಎಚ್ಚರಿಸಿದರು.

ಘಟನೆ ಕುರಿತು ಪಂಜಾಬ್‌ ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಸಹ ಕಟು ಟೀಕೆಗಳನ್ನು ಮಾಡಿದವು. ಸಂಸದ ಗುರ್ಜಿತ್‌ ಸಿಂಗ್ ಔಜ್ವಾಲ್ ಮತ್ತು ಹಿರಿಯ ನಾಯಕ ರಾಜ್ ಕುಮಾರ್ ವರ್ಕಾ ಪ್ರತಿಮೆ ಧ್ವಂಸಗೊಂಡ ಸ್ಥಳಕ್ಕೆ ಭೇಟಿ ನೀಡಿದರು ಮತ್ತು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ನ್ಯಾಯ ಮತ್ತು ಸಮಾನತೆಯ ತತ್ವವನ್ನು ಎತ್ತಿ ಹಿಡಿಯಬೇಕು ಎಂದು ಪ್ರತಿಪಾದಿಸಿದರು.

ಪಂಜಾಬ್‌ ಎಎಪಿ ಸರ್ಕಾರ ಎಲ್ಲಾ ಕಡೆಯಿಂದಲೂ ತೀವ್ರ ಟೀಕೆಗಳನ್ನು ಎದುರಿಸಿತು. ರಾಷ್ಟ್ರೀಯ ನೇತಾರರ ಪ್ರತಿಮೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾದ ಸರ್ಕಾರವನ್ನು ಪ್ರತಿಪಕ್ಷಗಳು ಟೀಕಿಸಿದವು, ದಲಿತ ಸಮುದಾಯದ ಬಗ್ಗೆ ಪಕ್ಷದ ಪ್ರಮಾಣಿಕತೆಯನ್ನು ಪ್ರಶ್ನಿಸಿದವು. ಈ ಆಕ್ರೋಶ ಹಲವು ದಲಿತ ಪರ ಸಂಘಟನೆಗಳ ಪ್ರತಿಭಟನೆಗೆ ಕಾರಣವಾಯಿತು, ರಾಜ್ಯದಲ್ಲಿರುವ ಎಲ್ಲಾ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಕಾಂಗ್ರೆಸ್ ಹಿರಿಯ ನಾಯಕ ಅಜಯ್ ಮಾಕೇನ್ ಕೇಜ್ರಿವಾಲ್ ವಿರುದ್ದ ಟೀಕೆಗಳನ್ನು ಮಾಡಿದರು ಮತ್ತು ಎಎಪಿ ಖಲಿಸ್ತಾನಿಗಳ ಜೊತೆ ಸಂಪರ್ಕ ಹೊಂದಿದೆ ಎಂದು ಆರೋಪಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+