ವಿರೂಪಗೊಂಡ ಭಾರತದ ಭೂಪಟ ಬಳಕೆ, ಅಮೆಜಾನ್ ಗೆ ಮತ್ತೆ ಸಂಕಷ್ಟ
ಅನ್ ಲೈನ್ ಮಾರಾಟ ಸಂಸ್ಥೆ ಅಮೆಜಾನ್ ಮತ್ತೊಮ್ಮೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ವಿರೂಪಗೊಂಡ ಭಾರತದ ಭೂಪಟ ಬಳಕೆ ಮಾಡಿರುವ ಅಮೆಜಾನ್ ವಿರುದ್ಧ ಬಿಜೆಪಿ ಮುಖಂಡರೊಬ್ಬರು ಕಿಡಿಕಾರಿದ್ದಾರೆ.
ನವದೆಹಲಿ, ಮೇ 09: ಡೋರ್ ಮ್ಯಾಟ್ ವಿವಾದದ ನಂತರ ಪಾಠ ಕಲಿಯದ ಆಮೆಜಾನ್ ಸಂಸ್ಥೆ ಈಗ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದೆ.
ವಿವಾದಿತ ಭೂಪ್ರದೇಶಗಳಿಲ್ಲದೆ ವಿರೂಪಗೊಂಡಿರುವ ಭಾರತದ ಭೂಪಟವನ್ನು ಬಳಕೆ ಮಾಡಿ ವಸ್ತುವೊಂದನ್ನು ಮಾರಾಟಕ್ಕಿಟ್ಟಿದೆ. ಅಮೆಜಾನ್ ಕೆನಡಾ ಪೇಜ್ ನಲ್ಲಿ ಕಂಡು ಬಂದ ಈ ಪ್ರಮಾದವನ್ನು ಖಂಡಿಸಿ, ಬಿಜೆಪಿ ದೆಹಲಿ ಘಟಕದ ಮುಖಂಡರೊಬ್ಬರು ತಿರುಗಿಬಿದ್ದಿದ್ದಾರೆ.

ತಪ್ಪು ತಿದ್ದುಕೊಂಡು ಸರಿಯಾದ ಭೂಪಟ ಬಳಸುವಂತೆ ಅಮೆಜಾನ್ ಸಂಸ್ಥೆಗೆ ಆಗ್ರಹಿಸಿ, ಬಿಜೆಪಿ ದೆಹಲಿ ಘಟಕದ ವಕ್ತಾರ ತಾಜಿಂದರ್ ಪಾಲ್ ಟ್ವೀಟ್ ಮಾಡಿದ್ದಾರೆ.
DIY ಥಿಂಕರ್ ಎಂಬ ಹೆಸರಿನ ವ್ಯಕ್ತಿಯ ಐಡಿಯಿಂದ ಈ ಪೋಸ್ಟ್ ಹಾಕಲಾಗಿದೆ. ಈ ವೆಬ್ ಸೈಟ್ನಲ್ಲಿ ಇತ್ತೀಚೆಗೆ ನೋಂದಣಿ ಮಾಡಿಕೊಂಡಿರುವ ಈ ಖಾತೆ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಈ ಭೂಪಟಕ್ಕೆ 25.35 ಡಾಲರ್ ಬೆಲೆ ನಮೂದಿಸಿದ್ದಾನೆ. ಇದು ಭೂಆಕಾಶ ಮಾಹಿತಿ ನಿಯಂತ್ರಣ ಕಾಯ್ದೆ 2016ರ ಉಲ್ಲಂಘನೆಯಾಗಿದೆ.
. @amazon @amazonca @AmazonHelp is selling distorted Map of India.Its unacceptable. Remove this from ur website & stop selling immediately pic.twitter.com/zpFm3xlTXC
— Tajinder Pal S Bagga (@TajinderBagga) May 6, 2017
ಈ ಕಾಯ್ದೆಯ ಪ್ರಕಾರ ಭಾರತದ ಯಾವುದೇ ಭೂಮಿ ಅಥವಾ ಆಕಾಶದ ಪ್ರದೇಶದ ಬಗ್ಗೆ ಲೇಖನ ಅಥವಾ ಚಿತ್ರ ಪ್ರಕಟಿಸುವ ಮುನ್ನ ಸರಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದನ್ನು ಉಲ್ಲಂಘಿಸಿದವರಿಗೆ 7 ವರ್ಷ ಜೈಲುಶಿಕ್ಷೆ ಅಥವಾ 1ರಿಂದ 100 ಕೋಟಿ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಭಾರತದ ನಕ್ಷೆ ಅಥವಾ ಧ್ವಜಕ್ಕೆ ಅವಮಾನವಾಗುವಂತೆ ವಿರೂಪಗೊಳಿಸಿರುವ ವಸ್ತುಗಳನ್ನು ಈ ಹಿಂದೆಯೂ ಹಲವು ಬಾರಿ ಅಮೆಜಾನ್ ಸಂಸ್ಥೆ ಮಾರಾಟ ಮಾಡಿ ವಿವಾದಕ್ಕೆ ಕಾರಣವಾಗಿತ್ತು.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications