Get Updates
Get notified of breaking news, exclusive insights, and must-see stories!

ಅಮರನಾಥ ಯಾತ್ರೆ: ಹಿಮಾಲಯದ ಪವಿತ್ರ ಗುಹೆ ದೇಗುಲಕ್ಕೆ ಯಾತ್ರೆ ಪ್ರಾರಂಭ

ಅಮರನಾಥ ಜೂನ್ 30: ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಪವಿತ್ರ ಗುಹಾ ದೇಗುಲಕ್ಕೆ 43 ದಿನಗಳ ಅಮರನಾಥ ಯಾತ್ರೆ ಇಂದು ಆರಂಭವಾಗಿದೆ. ಕಾಶ್ಮೀರ ಕಣಿವೆಯ ಬಾಲ್ಟಾಲ್ ಮತ್ತು ನುನ್ವಾನ್ ಬೇಸ್ ಕ್ಯಾಂಪ್‌ಗಳಿಂದ 'ಹರ್ ಹರ್ ಮಹಾದೇವ್' ಎಂಬ ಘೋಷಣೆಗಳ ನಡುವೆ ಭಕ್ತರು ಅಮರನಾಥ ಯಾತ್ರೆಯನ್ನು ಪ್ರಾರಂಭಿಸಿದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಅನಂತನಾಗ್ ಡಾ ಪಿಯೂಷ್ ಸಿಂಗ್ಲಾ ಅವರು ಪಹಲ್ಗಾಮ್‌ನ ನುನ್ವಾನ್ ಬೇಸ್ ಕ್ಯಾಂಪ್‌ನಿಂದ 2,800 ಯಾತ್ರಾರ್ಥಿಗಳ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದರು.

ಪಹಲ್ಗಾಮ್ ಅಮರನಾಥ ತೀರ್ಥಯಾತ್ರೆಗೆ ಸಾಂಪ್ರದಾಯಿಕ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಸಾಗುವ ಮೊದಲ ತಂಡ ನಾಳೆಯೊಳಗೆ ಪವಿತ್ರ ಗುಹಾಂತರ ದೇಗುಲವನ್ನು ತಲುಪುವ ನಿರೀಕ್ಷೆಯಿದೆ. ಮತ್ತೊಂದು ಬ್ಯಾಚ್ ಯಾತ್ರಿಕರು ಸೋನ್ಮಾರ್ಗ್‌ನ ಬೇಸ್ ಕ್ಯಾಂಪ್ ಬಾಲ್ಟಾಲ್‌ನಿಂದ ಪವಿತ್ರ ಗುಹೆಗೆ ತೆರಳಿದರು. ಬಾಲ್ಟಾಲ್‌ನಿಂದ ಹೊರಟ ಯಾತ್ರಾರ್ಥಿಗಳು ಇಂದು ಮಧ್ಯಾಹ್ನ ಪವಿತ್ರ ಗುಹೆಯನ್ನು ತಲುಪಲಿದ್ದಾರೆ ಮತ್ತು ಪವಿತ್ರ ಗುಹೆಗೆ ತಮ್ಮ ನಮನ ಸಲ್ಲಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇಂದು ಬೆಳಿಗ್ಗೆ ಪವಿತ್ರ ಗುಹೆಯಲ್ಲಿ ಮೊದಲ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಲಿದ್ದು, ನಂತರ ಪವಿತ್ರ ಗುಹೆಯ ದ್ವಾರಗಳನ್ನು ಯಾತ್ರಾರ್ಥಿಗಳಿಗಾಗಿ ತೆರೆಯಲಾಗುತ್ತದೆ. ಜೊತೆಗೆ ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

COVID-19 ಸಕಾರಣದಿಂದಾಗಿ 2020 ಮತ್ತು 2021 ರಲ್ಲಿ ತೀರ್ಥಯಾತ್ರೆ ನಡೆಯಲಿಲ್ಲ. ಮೂರು ವರ್ಷಗಳ ನಂತರ ಧಾರ್ಮಿಕ ಶ್ರದ್ಧೆಯೊಂದಿಗೆ ಯಾತ್ರೆ ಆರಂಭವಾಗಿದೆ. ಈ ವರ್ಷ ಮೂರು ವರ್ಷಗಳ ನಂತರ ಯಾತ್ರೆ ಪುನರಾರಂಭಗೊಳ್ಳುತ್ತಿರುವುದರಿಂದ ಯಾತ್ರಿಕರ ಹಾಜರಾತಿ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಯಾತ್ರಾರ್ಥಿಗಳಿಗೆ ಆಧಾರ್ ಕಾರ್ಡ್‌ ಕೊಂಡೊಯ್ಯಲು ಮನವಿ

ಯಾತ್ರಾರ್ಥಿಗಳಿಗೆ ಆಧಾರ್ ಕಾರ್ಡ್‌ ಕೊಂಡೊಯ್ಯಲು ಮನವಿ

ಯಾತ್ರೆಯು ಯಾವುದೇ ಅನಾಹುತ ರಹಿತವಾಗಿರಲು ಅಭೂತಪೂರ್ವ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಆಡಳಿತವು ಪವಿತ್ರ ಗುಹೆಗೆ ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳಲ್ಲಿ ಬಿಗಿ ಭದ್ರತೆಯನ್ನು ಒದಗಿಸುವ ಮೂಲಕ ದೇಗುಲ ಮಂಡಳಿಯ ಪ್ರಯತ್ನಗಳನ್ನು ಹೆಚ್ಚಿಸುತ್ತಿದೆ. ಯಾತ್ರೆಗೆ ಮೂರ್ನಾಲ್ಕು ಪಟ್ಟು ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ವಿಧ್ವಂಸಕ ಕೃತ್ಯಗಳು ತೀರ್ಥಯಾತ್ರೆಗೆ ಅಡ್ಡಿಪಡಿಸಲು ಸಾಧ್ಯವಾಗದಂತೆ ಹೊಸ ಭದ್ರತೆಗಳನ್ನು ಸ್ಥಾಪಿಸಲಾಗಿದೆ. ತೀರ್ಥಯಾತ್ರೆಯಲ್ಲಿ ಪ್ರಾಮಾಣಿಕ ಯಾತ್ರಾರ್ಥಿಗಳು ಮಾತ್ರ ಇರುವುದನ್ನು ಖಚಿತಪಡಿಸಿಕೊಳ್ಳಲು, ದೇಗುಲ ಮಂಡಳಿಯು ಎಲ್ಲಾ ಯಾತ್ರಾರ್ಥಿಗಳು ಆಧಾರ್ ಕಾರ್ಡ್‌ಗಳನ್ನು ಅಥವಾ ಯಾವುದೇ ಇತರ ಬಯೋಮೆಟ್ರಿಕ್ ಪರಿಶೀಲಿಸಿದ ದಾಖಲೆಯನ್ನು ತಮ್ಮೊಂದಿಗೆ ಕೊಂಡೊಯ್ಯುವಂತೆ ತಿಳಿಸಿದೆ.

ಆನ್‌ಲೈನ್ ದರ್ಶನದ ವ್ಯವಸ್ಥೆ

ಸಿಬ್ಬಂದಿ ಹೊರತಾಗಿ, ಡ್ರೋನ್ ಕಣ್ಗಾವಲು ಮತ್ತು RFID ತಂಡಗಳನ್ನು ನಿಯೋಜನೆ ಮಾಡಲಾಗಿದೆ. RFID ತಂಡ ಯಾತ್ರಾರ್ಥಿಗಳಿಗೆ ಮೂರು ಹಂತದ ಭದ್ರತಾ ವ್ಯವಸ್ಥೆಗಳ ಒಂದು ಭಾಗವಾಗಿದೆ. ಪಹಲ್ಗಾಮ್ ಮತ್ತು ಬಾಲ್ಟಾಲ್ ಎರಡೂ ಮಾರ್ಗಗಳಿಂದ ಪವಿತ್ರ ಗುಹೆಗೆ ಹೋಗುವ ಶಿಖರಗಳನ್ನು ಭದ್ರತಾ ಪಡೆಗಳು ಆವರಿಸಿವೆ. ಇಲ್ಲಿ ರಾತ್ರಿಯಿಡೀ ಕಟ್ಟೆಚ್ಚರ ವಹಿಸಲಾಗುತ್ತಿದೆ. ಎರಡೂ ಮಾರ್ಗಗಳಲ್ಲಿ ಸಿಸಿಟಿವಿಗಳು ಮತ್ತು ಡ್ರೋನ್‌ಗಳ ಸಹಾಯದಿಂದ ತೀರ್ಥಯಾತ್ರೆಯ ಮೇಲೆ ನಿಗಾ ಇಡಲಾಗಿದೆ.

ಶ್ರೀ ಅಮರನಾಥ ದೇಗುಲ ಮಂಡಳಿಯು ಭೌತಿಕವಾಗಿ ತೀರ್ಥಯಾತ್ರೆ ಕೈಗೊಳ್ಳಲು ಸಾಧ್ಯವಾಗದವರಿಗೆ ಆನ್‌ಲೈನ್ 'ದರ್ಶನ'ದ ಅವಕಾಶವನ್ನು ಸಹ ಮಾಡಿದೆ.

ಯಾತ್ರಾರ್ಥಿಗಳಿಗೆ ಆರೋಗ್ಯ ಸೌಲಭ್ಯ

ಬಾಲ್ಟಾಲ್ ಮೂಲ ಶಿಬಿರದಲ್ಲಿ, ಯಾತ್ರಾರ್ಥಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಾಗಿ 70 ಹಾಸಿಗೆಗಳ ಸಂಪೂರ್ಣ ಸುಸಜ್ಜಿತ DRDO ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅನುದಾನಿತ ಆಸ್ಪತ್ರೆಯು ಎಕ್ಸ್-ರೇ ಮತ್ತು ಅಲ್ಟ್ರಾಸೌಂಡ್ ಸೌಲಭ್ಯಗಳು, ಸಾಮಾನ್ಯ ಮತ್ತು ಆಮ್ಲಜನಕಯುಕ್ತ ವಾರ್ಡ್‌ಗಳು, OPD, ICU, ಔಷಧಾಲಯ ಮತ್ತು ಪ್ರಯೋಗಾಲಯವನ್ನು ಹೊಂದಿರುತ್ತದೆ. ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಇಲಾಖೆಯು ಯಾತ್ರಾರ್ಥಿಗಳಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಮಾತ್ರವಲ್ಲದೆ 109 ಆಂಬ್ಯುಲೆನ್ಸ್‌ಗಳನ್ನು ಮತ್ತು 26 ಮುಂಗಡ ಜೀವನ ಬೆಂಬಲ ನಿರ್ಣಾಯಕ ಆರೈಕೆ ಆಂಬ್ಯುಲೆನ್ಸ್‌ಗಳನ್ನು 55 ಸ್ಥಳಗಳಲ್ಲಿ ಕಾಜಿಗುಂಡ್‌ನಿಂದ ಬಾಲ್ಟಾಲ್ ಮತ್ತು ಚಂದನ್ವಾರಿ ಮಾರ್ಗದಲ್ಲಿ ಯಾತ್ರಾರ್ಥಿಗಳಿಗಾಗಿ ಇರಿಸಲಾಗಿದೆ.

ಮಾರ್ಗದುದ್ದಕ್ಕೂ ಶೌಚಾಲಯ ವ್ಯವಸ್ಥೆ

ಮಾರ್ಗದುದ್ದಕ್ಕೂ ಶೌಚಾಲಯ ವ್ಯವಸ್ಥೆ

ಈ ವರ್ಷ ಸ್ವಚ್ಛತೆಯತ್ತ ವಿಶೇಷ ಗಮನ ಹರಿಸಲಾಗಿದೆ ಮತ್ತು ಮಂಡಳಿಯು "ಸ್ವಚ್ಛ ಅಮರನಾಥ ಯಾತ್ರೆ"ಯ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಗದುದ್ದಕ್ಕೂ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಯಾತ್ರೆಯು ಆಗಸ್ಟ್ 11 ರಂದು 'ರಕ್ಷಾ ಬಂಧನ'ದೊಂದಿಗೆ ಸಮಾರೋಪಗೊಳ್ಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+