ಅಮರ್ ನಾಥ್ ಯಾತ್ರಾರ್ಥಿಗಳ ಬಗ್ಗೆ ವಿಚಾರಿಸಲು ಹೆಲ್ಪ್ ಲೈನ್ ಸಂಖ್ಯೆಗಳು
ಅಮರನಾಥ್ ಯಾತ್ರಾರ್ಥಿಗಳ ಮೇಲೆ ಉಗ್ರ ದಾಳಿ ನಡೆದಿದೆ. ರಾಜ್ಯದಿಂದ ಈ ಯಾತ್ರೆಗೆ ಹೋಗಿದ್ದವರ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳ ಬಯಸುವವರಿಗಾಗಿ ಹೆಲ್ಪ್ ಲೈನ್ ಸಂಖ್ಯೆಗಳನ್ನು ಇಲ್ಲಿ ಕೊಡಲಾಗಿದೆ.
ಶ್ರೀನಗರ, ಜುಲೈ 10: ಅಮರ್ ನಾಥ ಯಾತ್ರಾರ್ಥಿಗಳ ಮೇಲೆ ಸೋಮವಾರ ರಾತ್ರಿ ಉಗ್ರರ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಒಟ್ಟು 6 ಜನರು ಮೃತಪಟ್ಟು 9 ಜನರು ಗಾಯಗೊಂಡಿದ್ದಾರೆ.
ಈ ಬಾರಿಯ ಅಮರ್ ನಾಥ ಯಾತ್ರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದರು. ಅತಿ ಉತ್ಸಾಹದಿಂದ ತಂಡೋಪತಂಡವಾಗಿ ಯಾತ್ರಾರ್ಥಿಗಳು ಅಮರ್ ನಾಥ್ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಇಂಥ ಸಂದರ್ಭದಲ್ಲೇ ಉಗ್ರರು ತಮ್ಮ ಕುಕೃತ್ಯವನ್ನು ತೋರಿದ್ದಾರೆ.
ಕರ್ನಾಟಕದಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಈ ಯಾತ್ರೆಗೆ ಹೋಗಿದ್ದು, ಅವರ ಬಗ್ಗೆ ಮಾಹಿತಿ ಪಡೆಯಲಿಚ್ಛಿಸುವವರು ಈ ಕೆಳಕಂಡ ಸಂಖ್ಯೆಗಳಿಗೆ ಸಂಪರ್ಕಿಸಬಹುದು.
- ಶ್ರೀ ಅಮರ್ ನಾಥ್ ಜೀ ಶ್ರಿನ್ ಬೋರ್ಡ್ (91-194-2501679 ಮತ್ತು +91-9469722210)
- ಶ್ರೀ ಅಮರ್ ನಾಥ್ ಜೀ ಶ್ರಿನ್ ಬೋರ್ಡ್, ಶಿವ್ ಪೋರಾ (+91-194-2468250)
- ಶ್ರೀ ಅಮರ್ ನಾಥ್ ಜೀ ಶ್ರಿನ್ ಬೋರ್ಡ್, ತಾಲಾಬ್ ಟಿಲ್ಲೊ (+91-191-2555662)
#WATCH: Scenes from the hospital in J&K's Anantnag where injured #AmarnathYatra pilgrims have been admitted post terror attack pic.twitter.com/Kdn54adES5
— ANI (@ANI_news) July 10, 2017












Click it and Unblock the Notifications