ವಿಮಾನದಲ್ಲೇ ಮೂತ್ರ ವಿಸರ್ಜಿಸಿದ: ಪೊಲೀಸರ ಅತಿಥಿಯಾಗಿ ಜೈಲು ಸೇರಿದ!
ನವದೆಹಲಿ: ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅಶಿಸ್ತು ಹೆಚ್ಚಾಗಿದೆ. ಒಂದು ಕಾಲದಲ್ಲಿ ವಿಮಾನ ಪ್ರಯಾಣಿಕರು ಶಿಸ್ತಿಗೆ ಹೆಸರಾಗಿದ್ದರು, ಆದರೆ ಈಗೆಲ್ಲಾ ಅಲ್ಲಿ ಹುಡುಗಾಟಿಕೆ ಹೆಚ್ಚಾಗಿದೆ. ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯೋದು, ಸಹ ಪ್ರಯಾಣಿಕರ ಜೊತೆ ಕಿರಿಕ್ ಮಾಡೋದು. ಇದೆಲ್ಲಾ ಬಿಡಿ ಇಲ್ಲೊಬ್ಬ ಭೂಪ ವಿಮಾನದ ಸೀಟ್ ಪಕ್ಕದಲ್ಲೇ ಮಲ, ಮೂತ್ರ ವಿಸರ್ಜಿಸಿದ್ದಾನೆ!
ಹೌದು, ಇಂತಹ ವಿಚಿತ್ರ ಘಟನೆ ನಡೆದಿದ್ದು ಮುಂಬೈ ಹಾಗೂ ದೆಹಲಿ ನಡುವೆ ಸಂಚಾರ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ. ಮುಂಬೈ & ದೆಹಲಿ ಏರ್ ಇಂಡಿಯಾ ವಿಮಾನ ಹಾರಾಟದಲ್ಲಿ ಇರುವಾಗಲೇ ನೆಲಹಾಸಿನ ಮೇಲೆ ಮಲ, ಮೂತ್ರ ವಿಸರ್ಜಿಸಿದ ಆರೋಪದಡಿ ಪ್ರಯಾಣಿಕನನ್ನ ಈಗ ಪೊಲೀಸರು ಬಂಧಿಸಿದ್ದಾರೆ. ಹಾಗಾದ್ರೆ ಈ ಘಟನೆ ನಡೆದಿದ್ದು ಹೇಗೆ? ಹೀಗೆಲ್ಲಾ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ತನಾಗಿದ್ನಾ? ಆತ ಹೀಗೆ ಮಾಡಿದ್ದಾದರೂ ಏಕೆ? ಅದರ ಸಂಪೂರ್ಣ ಮಾಹಿತಿ ಮುಂದೆ ಇದೆ ಓದಿ.

ಏನಿದು ವಿಮಾನದಲ್ಲಿ ಕಿರಿಕ್?
ಅಂದಹಾಗೆ ಈ ಘಟನೆ ನಡೆದಿದ್ದು ಜೂನ್ 24ರಂದು ಎಐಸಿ-866 ವಿಮಾನದಲ್ಲಿ. ಬಂಧಿತ ಆರೋಪಿಯ ಹೆಸರನ್ನು ರಾಮ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ನೆಲದ ಮೇಲೆಯೇ ಮಲ, ಮೂತ್ರ ವಿಸರ್ಜನೆ ಮಾಡಿದ್ದೂ ಅಲ್ಲದೆ, ಜೊತೆಗೆ ಅದೇ ವಿಮಾನದ 9ನೇ ಸಂಖ್ಯೆಯ ಸಾಲಿನ ಸೀಟಿನ ಮೇಲೆ ಗಲೀಜು ಹಾಕಿದ್ದ. ವಿಮಾನದಲ್ಲಿ ಇದ್ದ ಸಿಬ್ಬಂದಿ ಈತನ ಹುಚ್ಚಾಟ ನೋಡಿ ಮೊದಲಿಗೆ ಎಚ್ಚರಿಕೆ ನೀಡಿದ್ದರು. ಆದರೂ ಆತ ಅವರ ಮಾತನ್ನು ಕೇಳದೆ ತನ್ನ ಹುಚ್ಚಾಟ ಮುಂದುವರಿಸಿದ್ದ ಎನ್ನಲಾಗಿದೆ. ಹೀಗಾಗಿ ಮೂತ್ರ, ಮಲ ವಿಸರ್ಜನೆ ಮಾಡಿದ ಆರೋಪಿ ಪ್ರಯಾಣಿಕನನ್ನು ಸೂಕ್ತ ಸ್ಥಳಕ್ಕೆ ಕಳುಹಿಸಲಾಗಿದೆ.
ಇನ್ನು ವಿಮಾನದಲ್ಲಿ ನಡೆದ ಘಟನೆ ಬಗ್ಗೆ ಕಂಪನಿಗೆ ಪೈಲಟ್ ಮಾಹಿತಿ ನೀಡಿದ್ರು. ವಿಮಾನ ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಆತನನ್ನ ಸ್ಥಳೀಯ ಠಾಣೆಗೆ ಕರೆದೊಯ್ದಿದ್ದು, ಅಲ್ಲದೆ ಆತನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಈಗ ಬಂಧಿತ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಅಂದರೆ ಐಪಿಸಿ ಸೆಕ್ಷನ್ 294ರ ಪ್ರಕಾರ ಅಸಭ್ಯ ವರ್ತನೆ ಹಾಗೂ ಸೆಕ್ಷನ್ 510ರ ಪ್ರಕಾರ ಸಾರ್ವಜನಿಕವಾಗಿ ದುರ್ನಡತೆ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸ್ ಪಡೆ ಈಗ ತಮ್ಮ ಭಾಷೆಯಲ್ಲಿ ಆತನ ಬಾಯಿ ಬಿಡಿಸುತ್ತಿದೆ. ಹಾಗಾದರೆ ಈ ರೀತಿ ಘಟನೆ ನಡೆದಿದ್ದು ಇದೇ ಮೊದಲಿಗಾ? ಇಲ್ಲ ಇಲ್ಲ ಇಂತಹ ಹಲವು ಘಟನೆಗಳು ನಡೆದಿವೆ, ಅದರ ಮಾಹಿತಿ ಮುಂದೆ ಇದೆ.
ಕಳೆದ ವರ್ಷವೂ ಹೀಗೆ ಆಗಿತ್ತು
ಇನ್ನು ಈ ಹಿಂದೆ 2022ರ ನವೆಂಬರ್ 26ರಂದು ನ್ಯೂಯಾರ್ಕ್ ಮೂಲಕ ದೆಹಲಿಗೆ ಆಗಮಿಸಿದ್ದ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿತ್ತು. ಈ ಘಟನೆ ಕೂಡ ದೊಡ್ಡ ಸದ್ದು ಮಾಡಿತ್ತು. ಇನ್ನು ಇದು ಮಾಸುವ ಮೊದಲೇ, ಅಂದರೆ ಅದೇ ವರ್ಷದ ಡಿಸೆಂಬರ್ 6ರಂದು ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಪ್ಯಾರಿಸ್ ಮೂಲಕ ದೆಹಲಿ ಕಡೆಗೆ ಬರುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿತ್ತು.
ಇದೀಗ ಅದಕ್ಕಿಂತಲೂ ಘೋರವಾದ ಮತ್ತು ಸಹಿಸಲು ಸಾಧ್ಯವಾಗದ ಘಟನೆ ವಿಮಾನದಲ್ಲಿ ನಡೆದಿದೆ. ಹಾಗೇ ವಿಮಾನ ಪ್ರಯಾಣಿಕರ ಶಿಸ್ತಿನ ಬಗ್ಗೆ ಚರ್ಚೆಗಳು ಕೂಡ ಶುರುವಾಗಿವೆ. ಕೆಲವು ವರ್ಷಗಳಿಂದ ಇಂತಹ ಅಶಿಸ್ತಿನ ಪ್ರಕರಣಗಳ ಜೊತೆಗೆ ವಿಮಾನದಲ್ಲಿ ಧೂಮಪಾನ ಮಾಡುವುದು, ಸಿಬ್ಬಂದಿ ಜೊತೆ ಜಗಳ ಮಾಡುವುದು ಸೇರಿದಂತೆ ಎಷ್ಟೋ ಕಡೆ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯುವ ಪ್ರಯತ್ನಗಳೂ ನಡೆದಿವೆ. ಈ ಮೂಲಕ ಕೆಲವು ಪ್ರಯಾಣಿಕರ ಹುಚ್ಚಾಟ ನೂರಾರು ಜನರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications