ಬಂತು.. ಬಂತು.. 20 ವರ್ಷಗಳ ನಂತರ ಭಾರತಕ್ಕೆ ಬಂತು ಒಲಿಂಪಿಕ್ ಸಮಾನವಾದ ಜಾಗತಿಕ ಕ್ರೀಡಾಕೂಟ!
ಭಾರತ ಬೆಳೆಯುತ್ತಿದೆ, ಹಾಗೇ ಭಾರತದ ಕ್ರೀಡಾ ಲೋಕ ಕೂಡ ಜಾಗತಿಕ ಮಟ್ಟದಲ್ಲಿ ಮಿರಮಿರ ಮಿಂಚಲು ಶುರು ಮಾಡಿದೆ. ಕ್ರಿಕೆಟ್ ಮಾತ್ರವಲ್ಲದೆ ಭಾರತದಲ್ಲಿ ಪ್ರತಿಯೊಂದು ಕ್ರೀಡೆಗೂ ಇದೀಗ ಮಹತ್ವ ನೀಡುತ್ತಿರುವ ಕಾರಣಕ್ಕೆ ಎಲ್ಲಾ ವಿಭಾಗದಲ್ಲೂ ಭಾರತದ ಕ್ರೀಡಾಪಟುಗಳು ಸಾಧನೆಯ ಹಾದಿ ತಲುಪಿದ್ದಾರೆ. ಅದರಲ್ಲೂ ಒಲಿಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ದೇಶದ ಸಾಧಕರು ಈಗ ಮಾಡುತ್ತಿರುವ ಸಾಧನೆ ಹೆಮ್ಮೆಯನ್ನೇ ತಂದಿದೆ. ಇಂತಹ ಸಮಯದಲ್ಲೇ, 20 ವರ್ಷಗಳ ನಂತರ ಭಾರತಕ್ಕೆ ಬಂತು ಒಲಿಂಪಿಕ್ ಸಮಾನವಾದ ಜಾಗತಿಕ ಕ್ರೀಡಾಕೂಟ!
ಭಾರತದಲ್ಲಿ ಕ್ರೀಡೆಗೆ ಸಾಕಷ್ಟು ಮಹತ್ವ ಸಿಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ರೀತಿಯ & ಸಮಾನವಾದ ಕ್ರೀಡಾ ಆಸಕ್ತಿ ಬೆಳೆಯುತ್ತಿದೆ. ಇದರಿಂದ ಭಾರತದಲ್ಲಿ ಕ್ರೀಡೆಗೆ ದೊಡ್ಡ ಮಟ್ಟದ ಪ್ರೋತ್ಸಾಹ ಸಿಕ್ಕಂತೆ ಆಗುತ್ತಿದೆ. ಇಂತಹ ಖುಷಿ ಖುಷಿಯಾದ ಸಮಯದಲ್ಲೇ ಭಾರತಕ್ಕೆ ಬರೋಬ್ಬರಿ 20 ವರ್ಷಗಳ ನಂತರ ಒಲಿಂಪಿಕ್ ಸಮಾನವಾದ ಜಾಗತಿಕ ಕ್ರೀಡಾಕೂಟ ಎಂಟ್ರಿ ಕೊಡುತ್ತಿದೆ. ಈ ಕ್ರೀಡಾಕೂಟ ಬೇರೆ ಯಾವುದೂ ಅಲ್ಲ, ಕಾಮನ್ವೆಲ್ತ್ ಗೇಮ್ಸ್ ಆಗಿದೆ. ಅಂದಹಾಗೆ ಈಗ 2030ರ ಕಾಮನ್ವೆಲ್ತ್ ಗೇಮ್ಸ್ ಆಯೋಜನೆ ಮಾಡುವ ಹಕ್ಕು ಅಹ್ಮದಾಬಾದ್ ಪಾಲಾಗಿದೆ. ಈ ಮೂಲಕ ಹೊಸ ಇತಿಹಾಸವೇ ನಿರ್ಮಾಣವಾಗಿದೆ.

ಕಾಮನ್ವೆಲ್ತ್ ಸಭೆಯಲ್ಲಿ ಮಹತ್ವದ ನಿರ್ಧಾರ
ಭಾರತ 2010 ಕಾಮನ್ವೆಲ್ತ್ ಗೇಮ್ಸ್ ಆಯೋಜನೆ ಮಾಡಿತ್ತು ಅಲ್ಲದೆ ಈ ಕ್ರೀಡಾಕೂಟದಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿ ಗಮನ ಕೂಡ ಸೆಳೆದಿದ್ದರು. ಹೀಗಿದ್ದಾಗ ಮತ್ತೊಮ್ಮೆ ಭಾರತಕ್ಕೆ ಕಾಮನ್ವೆಲ್ತ್ ಗೇಮ್ಸ್ ಎಂಟ್ರಿ ಕೊಟ್ಟಿರುವುದು ಭಾರಿ ಕೂತೂಹಲ ಕೆರಳಿಸಿದೆ. ಅಲ್ಲದೇ ಈ ಕ್ರೀಡಾಕೂಟ ಆಯೋಜನೆ ಭಾರತದ ಶಕ್ತಿಯನ್ನು ಮತ್ತೊಮ್ಮೆ ಇಡೀ ಪ್ರಪಂಚಕ್ಕೆ ಮನವರಿಕೆ ಕೂಡ ಮಾಡಿಕೊಡಲು ವೇದಿಕೆ ಕಲ್ಪಿಸಲಿದೆ. ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಮಹತ್ವದ ನಿರ್ಧಾರವನ್ನ ಕೈಗೊಳ್ಳಲಾಗಿದ್ದು, 2030ರ ಕ್ರೀಡಾಕೂಟ ಆಯೋಜನೆ ಹಕ್ಕನ್ನು ಭಾರತಕ್ಕೆ ನೀಡಲಾಗಿದೆ.
ಒಟ್ನಲ್ಲಿ ಭಾರತ ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಈ ಸಮಯದಲ್ಲೇ, ಭಾರಿ ಮಹತ್ವದ ಕ್ರೀಡಾಕೂಟ ಕೂಡ ಭಾರತಕ್ಕೆ ಎಂಟ್ರಿ ಆಗುತ್ತಿದೆ. ಅಲ್ಲದೆ ಜಾಗತಿಕವಾಗಿ ಭಾರತ ತನ್ನ ಶಕ್ತಿ & ಸಾಮರ್ಥ್ಯ ತೋರಿಸಲು ಹೊಸ ವೇದಿಕೆ ಸೃಷ್ಟಿಯಾಗುತ್ತಿದೆ. ಹೀಗೆ ಭಾರತಕ್ಕೆ 2030ರ ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜನೆ ಹಕ್ಕು ಸಿಕ್ಕಿರುವುದು ಮಿತ್ರ ರಾಷ್ಟ್ರಗಳಿಗೆ ಖುಷಿ ಕೊಟ್ಟಿದ್ದು, ಭಾರತಕ್ಕೆ ಶುಭ ಹಾರೈಸಿವೆ.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications