ಕಾಂಗ್ರೆಸ್ ಹಿರಿಯ ನಾಯಕನ ಹೆಸರು ಉಲ್ಲೇಖಿಸಿದ ಅಗಸ್ಟಾ ಆರೋಪಿ ಮೈಕಲ್
ನವದೆಹಲಿ, ಏಪ್ರಿಲ್ 5: ಅಗಸ್ಟಾ ವೆಸ್ಟ್ಲ್ಯಾಂಡ್ ಐಷಾರಾಮಿ ಹೆಲಿಕಾಪ್ಟರ್ ಖರೀದಿ ಹಗರಣದ ಮಧ್ಯವರ್ತಿಯಾಗಿದ್ದ ಬ್ರಿಟನ್ ಮೂಲದ ಆರೋಪಿ ಕ್ರಿಶ್ಚಿಯನ್ ಮೈಕಲ್ನ ವಿರುದ್ಧ ಜಾರಿ ನಿರ್ದೇಶನಾಲಯ ಉಪ ಆರೋಪಪಟ್ಟಿ ಸಲ್ಲಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಿಕ್ಬ್ಯಾಕ್ನ ವಿವರಗಳನ್ನು ಮೈಕಲ್ ಸಂಕ್ಷಿಪ್ತ ಸಂಕೇತಗಳಲ್ಲಿ ತನ್ನ 'ಬಜೆಟ್ ಶೀಟ್'ನಲ್ಲಿ ಬರೆದಿಟ್ಟಿದ್ದಾನೆ. ಇದರಲ್ಲಿ 'ಎಪಿ' ಎಂದು ಬರೆಯಲಾಗಿದ್ದು, ಇದು ಕಾಂಗ್ರೆಸ್ನ ಪ್ರಮುಖ ನಾಯಕನ ಹೆಸರಾಗಿದೆ ಎಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ನಾಲ್ಕನೆಯ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಮೈಕಲ್ ಪ್ರಕಾರ 'Fam' ಎಂದರೆ ಫ್ಯಾಮಿಲಿ. ಈ ಸಂಕೇತಾಕ್ಷರಗಳು 'ವಾಯು ಪಡೆ ಅಧಿಕಾರಿಗಳು', 'ಅಧಿಕಾರಿಗಳು', 'ರಕ್ಷಣಾ ಸಚಿವಾಲಯದ ಅಧಿಕಾರಿಗಳು' ಮತ್ತು 'ಆಡಳಿತಾರೂಢ ಪಕ್ಷದ ಪ್ರಮುಖ ರಾಜಕೀಯ ನಾಯಕ'ರಿಗೆ 30 ಮಿಲಿಯನ್ ಯುರೋ ಕಿಕ್ ಬ್ಯಾಕ್ ನೀಡಲಾಗಿರುವುದನ್ನು ಸೂಚಿಸುತ್ತವೆ ಎನ್ನಲಾಗಿದೆ.

ಸಂಕೀರ್ಣವಾದ ವ್ಯವಸ್ಥೆಯ ಮೂಲಕ ಹಣದ ಪಾವತಿಯನ್ನು ಮಾಡಲಾಗಿದ್ದು, ಹವಾಲಾ ಮೂಲಕ ನಗದನ್ನು ಪಡೆದುಕೊಳ್ಳಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಐಎಎಫ್ನ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿ ಅವರೂ ಇಲ್ಲಿ ಆರೋಪಿಯಾಗಿರುವುದರಿಂದ ಇದರ ಬಗ್ಗೆ ಇ.ಡಿ. ಮತ್ತು ಸಿಬಿಐ ಪರಿಶೀಲನೆ ನಡೆಸುತ್ತಿವೆ.
ಕ್ರಿಶ್ಚಿಯನ್ ಮೈಕಲ್ ಉಲ್ಲೇಖಿಸಿರುವ 'ಎಪಿ' ಸಂಕೇತಾಕ್ಷರದ ಪೂರ್ಣ ವಿವರವನ್ನು ಆರೋಪಪಟ್ಟಿಯಲ್ಲಿ ನೀಡಲಾಗಿದೆ. ಆದರೆ, ಅದನ್ನು ಬಹಿರಂಗಪಡಿಸಲಾಗಿಲ್ಲ. 3,000ಕ್ಕೂ ಹೆಚ್ಚು ಪುಟಗಳ ಹೆಚ್ಚುವರಿ ದಾಖಲೆಗಳ ಜತೆಗೆ 52 ಪುಟಗಳ ಹೊಸ ಉಪ ಆರೋಪಪಟ್ಟಿಯನ್ನು ಒದಗಿಸಲಾಗಿದೆ. ಅದರಲ್ಲಿ ಮೂರು ಹೊಸ ಹೆಸರುಗಳಿವೆ. ಮೈಕಲ್ನ ವ್ಯವಹಾರ ಪಾಲುದಾರ ಡೇವಿಡ್ ಸಿಮ್ಸ್ ಮತ್ತು ಎರಡು ಕಂಪೆನಿಗಳಾದ ಯುಎಇ, ಎಫ್ಝೆಡ್ಇ ಹಾಗೂ ಗ್ಲೋಬಲ್ ಟ್ರೇಡ್ ಆಂಡ್ ಕಾಮರ್ಸ್ ಲಿಮಿಟೆಡ್. ಇದಕ್ಕೂ ಮುನ್ನ 38 ಕಂಪೆನಿಗಳು ಮತ್ತು ವ್ಯಕ್ತಿಗಳ ಹೆಸರನ್ನು ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿತ್ತು.
ಇಬ್ಬರು ಮಧ್ಯವರ್ತಿಗಳಾದ ಮೈಕಲ್ ಮತ್ತು ಗ್ಯುಡೊ ಹಷ್ಕೆ ಅವರ ಮೂಲಕ ಒಟ್ಟು 70 ಮಿಲಿಯನ್ ಯುರೋ ಮೊತ್ತವನ್ನು ಪಾವತಿಸಲಾಗಿದೆ ಎಂದು ಇ.ಡಿ ಪುನರುಚ್ಚರಿಸಿದೆ. ಇದರಲ್ಲಿ 42 ಮಿಲಿಯನ್ ಯುರೋ ಹಣವು ಮೈಕಲ್ನ ಗ್ಲೋಬಲ್ ಸರ್ವೀಸಸ್ ಎಫ್ಝೆಡ್ಇ, ಯುಎಇ ಮತ್ತು ಗ್ಲೋಬಲ್ ಟ್ರೇಡ್ ಆಂಡ್ ಕಾಮರ್ಸ್ ಲಿಮಿಟೆಡ್ನ ಬ್ಯಾಂಕ್ ಖಾತೆಗಳಿಗೆ ಪಾವತಿಯಾಗಿದೆ. ಉಳಿದ 28 ಮಿಲಿಯನ್ ಯುರೋ ಹಣವು ಹಷ್ಕೆ ಮಾಲೀಕತ್ವದ ಐಡಿಎಸ್ ಟ್ಯುನಿಷಿಯಾದ ಬ್ಯಾಂಕ್ ಖಾತೆಗೆ ಜಮಾವಣೆಯಾಗಿದೆ ಎಂದು ಆರೋಪಿಸಿದೆ.
-
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್












Click it and Unblock the Notifications