ಹೌದು, ನಾನು ಹಿಂದೂ ಎಂದಿದ್ದಕ್ಕೆ ಆತ ತೆತ್ತ ಬೆಲೆ ಏನು?
ಪುಣೆ, ಜನವರಿ, 22: ದೇಶದೆಲ್ಲೆಡೇ ಹೈದ್ರಾಬಾದಿನ ರೋಹಿತ್ ವೇಮುಲ ಆತ್ಮಹತ್ಯೆಯದ್ದೇ ಚರ್ಚೆ. ಜಾತೀಯತೆ, ಕೋಮವಾದ, ಅಸಹಿಷ್ಣುತೆ ಹೀಗೆ ನೂರಾರು ಮಾತುಗಳು. ಇದೆಲ್ಲವನ್ನು ಒತ್ತಟ್ಟಿಗೆ ಇಡದಿದ್ದರೆ ನಮಗೆ ಮತ್ತೊಂದು ಸಾವಿನ ನಿಜನಾದ ಸುದ್ದಿ ನಮಗೆ ತಿಳಿಯದೇ ಹೋಗಬಹುದು.
ಕಳೆದ ಶುಕ್ರವಾರ ಪುಣೆಯಲ್ಲಿ ನಡೆದ ಯುವಕನ ಹತ್ಯೆ ಕತೆಯನ್ನು ನಾವು ಕೇಳಲೇಬೇಕಿದೆ. ಸವನ್ ರಾಥೋಡ್ ಎಂಬ ಯುವಕನ ಹತ್ಯೆ ರೋಹಿತ್ ಸಾವಿನಷ್ಟು ದೊಡ್ಡ ಸುದ್ದಿಯಾಗಲೇ ಇಲ್ಲ. ಇದೀಗ ಆತ ಸಾವಿನ ವೇಳೆ ಹೇಳಿದ್ದ ಮಾತುಗಳು ನಿಜಕ್ಕೂ ಬೇರೆಯದೇ ಕತೆ ಹೇಳುತ್ತಿವೆ. ಆತನನ್ನು ಸುಟ್ಟು ಹಾಕಿದ್ದ ಘಟನಾವಳಿಗಳ ಚಿತ್ರಣವನ್ನು ಅನವದೇ ಬಾಯಿಂದ ಕೇಳಿ...(ಸವನ್ ರಾಥೋಡ್ ಅವರು ಆಸ್ಪತ್ರೆಯಲ್ಲಿದ್ದಾಗ ವಕೀಲರೊಬ್ಬರು ಆತನ ಕೊನೆ ಮಾತುಗಳನ್ನು ವಿಡಿಯೋ ಮಾಡಿದ್ದಾರೆ)[ಬೂದಿಮುಚ್ಚಿದ್ದ 'ಅಸಹಿಷ್ಣುತೆ' ಕೆಂಡ ಕೆದಕಿದ ಕರಣ್ ಜೋಹರ್!]

ಆತನ ಮಾತಿನಲ್ಲೇ ಸಾವಿನ ಕ್ಷಣಗಳನ್ನು ಕೇಳೋಣ....
"ಪಂಧನ್ ಪುರದಲ್ಲಿ ನಾನು ನನ್ನ ಕುಟುಂಬದೊಂದಿಗೆ ವಾಸವಾಗಿದ್ದೆ. ಕೆಲಸ ಅರಸಿ ಪುಣೆ ಮಹಾನಗರಕ್ಕೆ ಕಾಲಿಟ್ಟಿದ್ದೆ. ನಾನು ನಡೆದುಕೊಂಡು ತೆರಳುತ್ತಿದ್ದಾಗ, ಅಡ್ಡ ಹಾಕಿದ ಮೂರು ಜನರ ಗುಂಪು 'ನಿನ್ನ ಹೆಸರೇನು?' ಎಂದು ಪ್ರಶ್ನೆ ಮಾಡಿತು. ನಾನು ಸವನ್ ರಾಥೋಡ್ ಎಂದು ಹೇಳಿದೆ. "ನೀನು ಹಿಂದೂನಾ?" ಎಂದು ಗುಂಪು ತಿರುಗಿ ಪ್ರಶ್ನೆ ಮಾಡಿತು. ಅದಕ್ಕೆ ನಾನು "ಹೌದು" ಎಂದೆ. ಇದಾದ ಮೇಲೆ ಏಕಾಏಕಿ ನನ್ನ ಮೇಲೆ ದಾಳಿ ನಡೆಸಿದ ಗುಂಪು ಕ್ಯಾನ್ ವೊಂದನ್ನು ತೆಗೆದು ನನ್ನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಇಟ್ಟಿತು. ಈ ಹೇಳಿಕೆಗಳು ವಿಡಿಯೊದಲ್ಲಿ ದಾಖಲಾಗಿದೆ.
ನನ್ನ ಮಗ ಹಿಂದೂ ಎಂಬ ಏಕೈಕ ಕಾರಣಕ್ಕೆ ಆತನನನ್ನು ಸಟ್ಟು ಹಾಕಲಾಯಿತು ಎಂದು ಯುವಕನ ತಂದೆ ಆರೋಪ ಮಾಡಿದ್ದು ಸುದ್ದಿಯಾಗಲೇ ಇಲ್ಲ. ಇದಾದ ಮೇಲೆ ಪೊಲೀಸರು ಇಮ್ರಾನ್, ಜುಬೇರ್, ಇಬ್ರಾಹಿಂ ಶೇಖ್ ಎಂಬುವರನ್ನು ಬಂಧಿಸಿದ್ದರು.[ಹೈದ್ರಾಬಾದ್ ವಿವಿಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ?]
ನಾವು ಆಸ್ಪತ್ರೆಗೆ ತೆರಳಿದಾಗ ಸವನ್ ಸ್ಥಿತಿ ಚಿಂತಾಜನಕವಾಗಿತ್ತು. ಆತ ಸಾಯುವ ಮುನ್ನ ಹೇಳಿಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ಕೇಳಿಕೊಂಡೆವು. ಆದರೆ ಪೊಲೀಸರು ಇದನ್ನು ವಿರೋಧಿಸಿದರು. ಹಾಗಾಗಿ ನಾನೇ ಆತನ ಕೊನೆ ಹೇಳಿಕೆಯನ್ನು ಅವನ ತಂದೆ ಮತ್ತು ಸ್ನೇಹಿತರ ಎದುರೇ ರೇಕಾರ್ಡ್ ಮಾಡಿಕೊಂಡೆ. ಆತ ಕಳ್ಳತನ ಮಾಡಲು ನನ್ನ ಮೇಲೆ ದಾಳಿ ಮಾಡಿದರು ಎಂದು ಎಲ್ಲಿಯೂ ಹೇಳಲಿಲ್ಲ. ಇದು ಕೋಮು ಕಾರಣಕ್ಕೆ ನಡೆದ ಸಾವು ಎಂಬುವುದು ಸ್ಪಷ್ಟ ಎಂದು ವಕೀಲ ರಮೇಶ್ ರಾಥೋಡ್ ತಿಳಿಸಿದ್ದಾರೆ.
ಆದರೆ ಡಿಸಿಪಿ ತುಷಾರ್ ದೋಷಿ ಇದು ಕೋಮು ಕಾರಣಕ್ಕೆ ನಡೆದ ಸಾವಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆರೋಪಿಗಳು ಸವನ್ ಬಳಿ ಬ್ಯಾಟರಿ ಕಳ್ಳತನದ ಬಗ್ಗೆ ಕೇಳಿದ್ದಾರೆ. ಕ್ರೀಡಾಂಗಣದ ಬ್ಯಾಟರಿಯನ್ನು ಸವನ್ ಕದ್ದಿದ್ದಾನೆ ಎಂಬ ಅನುಮಾನದ ಮೇಲೆ ಪ್ರಶ್ನೆ ಮಾಡಿದ್ದಾರೆ. ಆದರೆ ಇದಕ್ಕೆ ಸವನ್ ಸರಿಯಾದ ಉತ್ತರ ನೀಡಿಲ್ಲ. ಇದಾದ ಮೇಲೆ ತಾಳ್ಮೆ ಕಳೆದುಕೊಂಡ ಆಕ್ರಮಣಕಾರರು ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಇದು ಡಿಸಿಪಿ ತುಷಾರ್ ದೋಷಿ ನೀಡಿರುವ ಹೇಳಿಕೆ. ಇದರಂತೆಯೇ ಎಫ್ ಐ ಆರ್ ಸಹ ದಾಖಲಾಗಿದೆ.
ಒಟ್ಟಿನಲ್ಲಿ ಯುವಕನ ಸಾವಿನ ಬಗೆಗಿನ ಅನುಮಾನ ಮಾತ್ರ ಬಗೆಹರಿದಿಲ್ಲ. ಮಾಧ್ಯಮಗಳು ಸಹ ಈತನ ಸಾವಿನ ಬಗ್ಗೆ ಚರ್ಚೆ ಮಾಡಲು ಸಮಯವಿಲ್ಲ!
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications