ಮಣಿಪುರ ವಿಧಾನಸಭೆ ಅಧಿವೇಶನ ಆರಂಭವಾದ ಕೂಡಲೇ ಮುಂದೂಡಿಕೆ: ಹೆಚ್ಚಿನ ಕುಕಿ ಶಾಸಕರು ಗೈರು!
ಮಣಿಪುರ ವಿಧಾನಸಭೆ ಅಧಿವೇಶನ ಆರಂಭವಾದ ಕೂಡಲೇ ಮುಂದೂಡಲ್ಪಟ್ಟ ಘಟನೆ ಕಳೆದ ದಿನ ನಡೆದಿದೆ. ಮೇ ತಿಂಗಳಲ್ಲಿ ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಮೊದಲನೆಯ ಅಧಿವೇಶನ ಕಳೆದ ದಿನ ನಡೆಯಿತು. ಆದರೆ ಹಿಂಸಾಚಾರದ ಬಗ್ಗೆ ಗದ್ದಲದ ಸೃಷ್ಟಿಯಾದ ಬೆನ್ನಲ್ಲೆ ಅಧಿವೇಶನ ಆರಂಭವಾದ ಕೂಡಲೇ ಮುಂದೂಡಲ್ಪಟ್ಟಿದೆ.
ಬಹುನಿರೀಕ್ಷಿತ ಅಧಿವೇಶನವು ಸುಮಾರು ನಾಲ್ಕು ತಿಂಗಳ ಕಾಲ ನಡೆದ ಹಿಂಸಾಚಾರದ ಬಗ್ಗೆ ಚರ್ಚಿಸುವುದಾಗಿತ್ತು. ಹೆಚ್ಚಿನ ಕುಕಿ ಶಾಸಕರು ಪಕ್ಷ ಭೇದವಿಲ್ಲದೆ ಸುರಕ್ಷತೆಯ ಕಾರಣದಿಂದ ಅಧಿವೇಶನಕ್ಕೆ ಹಾಜರಾಗಲಿಲ್ಲ. ಕುಕಿ ಪ್ರಾಬಲ್ಯದ ಪ್ರದೇಶಗಳ 10 ಶಾಸಕರ ಪೈಕಿ ಆರು ಮಂದಿ ವಿಧಾನಸಭೆಯ ಸ್ಪೀಕರ್ಗೆ ಗೈರುಹಾಜರಿ ಕೋರಿದ್ದರು ಎಂದು ವರದಿಯಾಗಿದೆ.

ಕುಕಿ ಶಾಸಕರು ಅಧಿವೇಶನಕ್ಕೆ ಗೈರು
ಐವರು ಶಾಸಕರು ಸೋಮವಾರ ಆಗಸ್ಟ್ 28 ರಂದು ಸ್ಪೀಕರ್ಗೆ ಗೈರುಹಾಜರಿಗಾಗಿ ಅರ್ಜಿ ಸಲ್ಲಿಸಿದ್ದರೆ, ಸಮಾಜ ಕಲ್ಯಾಣ ಮತ್ತು ಸಹಕಾರ ಸಚಿವ ನೆಮ್ಚಾ ಕಿಪ್ಗೆನ್, ಕಾಂಗ್ಪೋಪಿಯ ಶಾಸಕರು ಆಗಸ್ಟ್ 26 ರ ಶನಿವಾರದಂದು ತಮ್ಮ ಅರ್ಜಿಯನ್ನು ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ದಿ ಟೆಲಿಗ್ರಾಫ್ಗೆ ತಿಳಿಸಿದ್ದಾರೆ.
ಸೋಮವಾರ ರಜೆ ಕೋರಿದ ಶಾಸಕರು ಅಂದರೆ- ಬುಡಕಟ್ಟು ಮತ್ತು ಗುಡ್ಡಗಾಡು ವ್ಯವಹಾರಗಳ ಸಚಿವ ಲೆಟ್ಪಾವೊ ಹಾಕಿಪ್ (ತೆಂಗ್ನೌಪಾಲ್), ಚುರಾಚಂದ್ಪುರ ಶಾಸಕ ಖೌಟೆ, ಸೈಕುಲ್ನ ಕಿಮ್ನಿಯೊ ಹ್ಯಾಂಗ್ಶಿಂಗ್, ಸೈಟುವಿನ ಹಾಕ್ಹೋಲೆಟ್ ಕಿಪ್ಗೆನ್ ಮತ್ತು ಹೆಂಗ್ಲೆಪ್ ಶಾಸಕ ಲೆಟ್ಜಮಾಂಗ್ ಹಾಕಿಪ್.
ಕಳೆದ ತಿಂಗಳು ರಾಜ್ಯ ಸರ್ಕಾರವು ಆಗಸ್ಟ್ 21 ರೊಳಗೆ ಅಧಿವೇಶನ ನಡೆಸಲು ಶಿಫಾರಸು ಮಾಡಿತ್ತು. ಆದರೆ ನಂತರ ರಾಜಭವನದಿಂದ ಹಸಿರು ನಿಶಾನೆ ಸಿಗದ ಹಿನ್ನೆಲೆಯಲ್ಲಿ ಅದನ್ನು ಆಗಸ್ಟ್ 28 ಕ್ಕೆ ಪರಿಷ್ಕರಿಸಿತು. ಆಗಸ್ಟ್ 29 ರಂದು ವಿಧಾನಸಭೆ ಪುನರಾರಂಭವಾಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಕಳೆದ ವಾರ ಪ್ರಕಟಿಸಿತ್ತು.

ಬುಡಕಟ್ಟು ಏಕತೆಯ ಸಮಿತಿ (CoTU) ಮತ್ತು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ಇತ್ತೀಚೆಗೆ ಅಧಿವೇಶನವನ್ನು ಕರೆಯುವುದನ್ನು ಖಂಡಿಸಿತ್ತು, ಪ್ರಸ್ತುತ ಪರಿಸ್ಥಿತಿಯು ಕುಕಿ-ಜೋ ಶಾಸಕರು ಹಾಜರಾಗಲು ಸೂಕ್ತವಲ್ಲ ಎಂದು ಅವರು ಹೇಳಿದರು.
'ಅಸೆಂಬ್ಲಿ ಸೆಷನ್ ಮತ್ತು ಐ ವಾಶ್'
ಮಣಿಪುರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಓಕ್ರಾಮ್ ಇಬೋಬಿ ಸಿಂಗ್ ಅವರು ಆಗಸ್ಟ್ 26 ರಂದು, ಅಸೆಂಬ್ಲಿ ಅಧಿವೇಶನವು ಸಾರ್ವಜನಿಕ ಹಿತಾಸಕ್ತಿಗಾಗಿ ಅಲ್ಲ, ಕಣ್ಣೋರೆಸುವ ಅಧಿವೇಶನವಾಗಿದೆ ಎಂದು ದೂರಿದರು.

ಮಣಿಪುರ ವಿಧಾನಸಭೆಯು ಕೊನೆಯ ಬಾರಿಗೆ ಫೆಬ್ರವರಿ-ಮಾರ್ಚ್ನಲ್ಲಿ ಬಜೆಟ್ ಅಧಿವೇಶನಕ್ಕಾಗಿ ಕರೆದಿತ್ತು ಮತ್ತು ಮೇ 3 ರಂದು ಭುಗಿಲೆದ್ದ ಘರ್ಷಣೆಗಳು ಮುಂಗಾರು ಅಧಿವೇಶನವನ್ನು ಹಿಂದಕ್ಕೆ ತಳ್ಳಿದವು. ಸದ್ಯ ಮಣಿಪುರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಸಚಿವ ಬಿಎಲ್ ವರ್ಮಾ ಸೋಮವಾರ ಹೇಳಿದ್ದಾರೆ.
-
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು












Click it and Unblock the Notifications