Adani Group: ಇಂಡಿಯಾ ಮ್ಯಾರಿಟೈಮ್ ವೀಕ್ 2025: ಅದಾನಿ ಪೋರ್ಟ್ಸ್ ಭಾರತದ ಮ್ಯಾರಿಟೈಮ್ನಲ್ಲಿ ಮುಂಚೂಣಿ
Adani Group: ಇಂಡಿಯಾ ಮೆರಿಟೈಮ್ ವೀಕ್ (IMW) 2025 ಅಕ್ಟೋಬರ್ 27ರಿಂದ 31ರವರೆಗೆ ಮುಂಬೈಯ ಬಾಂಬೆ ಎಕ್ಸಿಬಿಷನ್ ಸೆಂಟರ್ನಲ್ಲಿ ನಡೆಯಲಿದೆ. ಇದು ಕೇವಲ ನೀತಿ ವೇದಿಕೆ ಮಾತ್ರವಲ್ಲ, ಭಾರತದ ಕಡಲ ಪುನರುಜ್ಜೀವನದ ದೃಷ್ಟಿಕೋನವಾಗಿದೆ. ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಬಂದರು ಸಂಘ (IPA) ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಮಹತ್ವಾಕಾಂಕ್ಷಿ ಕಾರ್ಯಕ್ರಮಲ್ಲಿ 1,00,000ಕ್ಕೂ ಹೆಚ್ಚು ಪ್ರತಿನಿಧಿಗಳು, 500ಕ್ಕೂ ಹೆಚ್ಚು ಪ್ರದರ್ಶಕರು, 200ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು ಹಾಗೂ 100ಕ್ಕೂ ಹೆಚ್ಚು ದೇಶಗಳಿಂದ ಭಾಗವಹಿಸುವವರನ್ನು ಒಟ್ಟುಗೂಡಿಸುತ್ತದೆ.
ಈ ಜಾಗತಿಕ ಸಮ್ಮೇಳನದ ಹೃದಯಭಾಗದಲ್ಲಿ ಭಾರತದ ಅತಿ ದೊಡ್ಡ ಬಂದರು ಅಭಿವೃದ್ಧಿ ಮತ್ತು ನಿರ್ವಹಣಾ ಸಂಸ್ಥೆಯಾದ ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (APSEZ) ನಿಂತಿದೆ. ದೇಶದ "ಬ್ಲೂ ಎಕಾನಮಿ" ರೂಪಿಸುವಲ್ಲಿ ತನ್ನ ಪ್ರಮುಖ ಪಾತ್ರವನ್ನು ಇದು ಪ್ರದರ್ಶಿಸುತ್ತದೆ. ತಮ್ಮ ಪೆವಿಲಿಯನ್ ಮುಖಾಂತರ, ಎಪಿಎಸ್ಇಝೆಡ್ ತಂತ್ರಜ್ಞಾನ, ಒಳಗೊಳ್ಳುವಿಕೆ (ಇನ್ಕ್ಲೂಷನ್), ಮೇಕ್-ಇನ್-ಇಂಡಿಯಾ ಆವಿಷ್ಕಾರದ ಮೂಲಕ ಭಾರತದ ಕಡಲ ಬೆಳವಣಿಗೆಯ ಕಥೆಯನ್ನು ಹೇಗೆ ಹೊಸದಾಗಿಮರು ವ್ಯಾಖ್ಯಾನಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಅಕ್ಟೋಬರ್ 29 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹಾಜರಾತಿ, ನಂತರ ಗ್ಲೋಬಲ್ ಮ್ಯಾರಿಟೈಮ್ ಸಿಇಒ ವೇದಿಕೆ, ಕಡಲ ಜಗತ್ತನ್ನು ಮುನ್ನಡೆಸುವ ಭಾರತದ ಮಹತ್ವಾಕಾಂಕ್ಷೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಕಳೆದ ದಶಕದಲ್ಲಿ ಭಾರತದ ಕಡಲ ನೀತಿ ಭೂದೃಶ್ಯವು "ಸಾಗರಮಾಲಾ" ಮತ್ತು "ಮೆರಿಟೈಮ್ ವಿಷನ್ 2030" ಎಂಬ ಎರಡು ಪ್ರಮುಖ ಚಟುವಟಿಕೆ ರೂಪುರೇಷೆಗಳಡಿ ವೇಗವಾಗಿ ವಿಕಸನಗೊಂಡಿದೆ. ಬಂದರುಗಳು, ನೌಕಾಸಾರಿಗೆ ಮತ್ತು ಆಂತರಿಕ ಜಲಮಾರ್ಗಗಳಿಗೆ ಸಂಬಂಧಿಸಿದ 150ಕ್ಕೂ ಹೆಚ್ಚು ಯೋಜನೆಗಳನ್ನು ಇದು ಒಳಗೊಂಡಿದೆ.
ಈ ಪ್ರಮುಖ ಕಾರ್ಯಕ್ರಮಗಳ ಉದ್ದೇಶ ಬಂದರು ಆಧಾರಿತ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆಗೊಳಿಸುವ ಮೂಲಕ ಹಾಗೂ ಕರಾವಳಿ ಮೂಲಸೌಕರ್ಯವನ್ನು ಉತ್ತೇಜಿಸುವ ಮೂಲಕ ಭಾರತವನ್ನು ಜಾಗತಿಕ ಕಡಲ ಕೇಂದ್ರವಾಗಿ ಸ್ಥಾಪಿಸುವುದಾಗಿದೆ. ಇವು "ಆತ್ಮನಿರ್ಭರ ಭಾರತ"ದ ಪ್ರಮುಖ ಆಧಾರಸ್ತಂಭಗಳಾಗಿವೆ.
ಈ ಬದಲಾವಣೆಯ ಮಧ್ಯೆ ವೈವಿಧ್ಯಮಯ ಅದಾಣಿ ಗ್ರೂಪ್ನ ಭಾಗವಾಗಿರುವ ಎಪಿಎಸ್ಇಝೆಡ್ ಭಾರತದಲ್ಲಿ ಬಂದರು ಆಧಾರಿತ ಅಭಿವೃದ್ಧಿಯ ಮೂಲಾಧಾರವಾಗಿ ಹೊರಹೊಮ್ಮಿದೆ. 1990ರ ದಶಕದ ಕೊನೆಯಲ್ಲಿ ಗುಜರಾತ್ನ ಮುಂದ್ರಾದಲ್ಲಿ ಒಂದೇ ಬಂದರಿನಿಂದ ಆರಂಭಗೊಂಡ ಎಪಿಎಸ್ಇಝೆಡ್ ಇಂದಿಗೆ ಭಾರತದಲ್ಲಿ 15 ಬಂದರುಗಳನ್ನು ಹಾಗೂ ವಿದೇಶಗಳಲ್ಲಿ 4 ಬಂದರುಗಳನ್ನು ನಿರ್ವಹಿಸುತ್ತಿದೆ. ಇದನ್ನು 12 ಬಹುಮಾದರಿ ಲಾಜಿಸ್ಟಿಕ್ಸ್ ಪಾರ್ಕ್ಗಳು, 132 ರೇಕ್ಗಳು ಮತ್ತು 5,000ಕ್ಕೂ ಹೆಚ್ಚು ವಾಹನ ಫ್ಲೀಟ್ಗಳಿಂದ ಬೆಂಬಲಿಸುತ್ತಿವೆ. ಭಾರತದ ಒಟ್ಟು ಸರಕು ಸಾಗಣೆಯ ಸುಮಾರು ಒಂದು ನಾಲ್ಕನೇ ಭಾಗವನ್ನು ನಿರ್ವಹಿಸುವ ಎಪಿಎಸ್ಇಝೆಡ್ ಇಂದು ದೇಶದ ಅತಿದೊಡ್ಡ ಸಮಗ್ರ ಸಾರಿಗೆ ಉಪಯುಕ್ತತೆ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
IMW 2025ರಲ್ಲಿ ಎಪಿಎಸ್ಇಝೆಡ್ ಪೆವಿಲಿಯನ್ ಅನ್ನು ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ನಿರ್ಮಿತವಾಗಿದೆ. ಆತ್ಮನಿರ್ಭರ ಭಾರತ, ಮಹಿಳಾ ಸಬಲೀಕರಣ, ಕೃತಕ ಬುದ್ಧಿಮತ್ತೆ (AI) ಆಧಾರಿತ ಲಾಜಿಸ್ಟಿಕ್ಸ್ ಮತ್ತು ಇಂಪ್ಯಾಕ್ಟ್. ಈ ವರ್ಷದ ಪ್ರಮುಖ ಕೇಂದ್ರಬಿಂದು ಎಂದರೆ, ಮೇಕ್-ಇನ್-ಇಂಡಿಯಾ ಯೋಜನೆಯಡಿ ಭಾರತದ ಬಂದರು, ಹೂಳೆತ್ತುವಿಕೆ ಹಾಗೂ ಬಂದರು ನಿರ್ವಹಣಾ ಸಾಮರ್ಥ್ಯಗಳನ್ನು ಉತ್ತೇಜಿಸಲು ಸಹಕಾರ ಒಪ್ಪಂದಗಳಿಗೆ ಸಹಿ ಮಾಡಲಾಗುವುದು ಎಂಬುದು.
ಎಪಿಎಸ್ಇಝೆಡ್ ಕಡಲ ಸೇವೆಗಳಲ್ಲಿ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವ ಬಹು ದೀರ್ಘಕಾಲೀನ ಒಪ್ಪಂದಗಳಿಗೆ ಸಹಿ ಹಾಕಲಿದೆ.
* ಮುಂಬೈ ಬಂದರು ಪ್ರಾಧಿಕಾರದೊಂದಿಗೆ ಆರು ASTDS ಟಗ್ಬೋಟ್ಗಳನ್ನು ಏಳು ವರ್ಷಗಳವರೆಗೆ ಮತ್ತು ಒಂದು ಗ್ರೀನ್ ಟಗ್ಬೋಟ್ ಅನ್ನು 15 ವರ್ಷಗಳವರೆಗೆ ಸರಬರಾಜು ಮತ್ತು ಚಾರ್ಟರ್ ಬಾಡಿಗೆಗೆ ನೀಡಲಾಗುತ್ತದೆ.
* ತಮಿಳುನಾಡಿನ ಟುಟಿಕೋರಿನ್ನಲ್ಲಿರುವ ವಿ.ಒ.ಚಿದಂಬರನಾರ್ ಬಂದರು ಪ್ರಾಧಿಕಾರದೊಂದಿಗೆ ಏಳು ವರ್ಷಗಳ ಅವಧಿಗೆ ಎರಡು ಬಂದರು ಟಗ್ಗಳ ಚಾರ್ಟರ್ ಬಾಡಿಗೆಗೆ ಒಪ್ಪಂದ ಮಾಡಲಾಗುತ್ತಿದೆ.
* ಚೆನ್ನೈ ಬಂದರು ಪ್ರಾಧಿಕಾರ (ChPA)ದೊಂದಿಗೆ ಒಂದು 60 ಟಿಬಿಪಿ ಎಸ್ಕೋರ್ಟ್ ಟಗ್ ವೆಸಲ್ (ETV)ನ ಚಾರ್ಟರ್ ಬಾಡಿಗೆಗೆ ಒಪ್ಪಂದ ಮಾಡಲಾಗುತ್ತಿದೆ.
* ಶಿಪ್ಪಿಂಗ್ ಮಹಾನಿರ್ದೇಶನಾಲಯ (DGS)ನೊಂದಿಗೆ ಹನ್ನೆರಡು ಟಗ್ಬೋಟ್ಗಳ ನಿರ್ಮಾಣಕ್ಕಾಗಿ ಒಪ್ಪಂದಕ್ಕೆ ಅಕ್ಟೋಬರ್ 29ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸಹಿ ಹಾಕಲಾಗುವುದು.
ಡ್ರೆಡ್ಜಿಂಗ್ ವಿಭಾಗದಲ್ಲಿ, ಎಪಿಎಸ್ಇಝೆಡ್ ಸ್ವಯಂ ಚಾಲಿತ ಗ್ರ್ಯಾಬ್ ಡ್ರೆಡ್ಜರ್ ನಿರ್ಮಾಣಕ್ಕಾಗಿ ಒಪ್ಪಂದ ಪತ್ರಕ್ಕೆ ಸಹಿ ಹಾಕಲಿದೆ. ಇದು ಸ್ಥಳೀಯ ಕಡಲ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ.
ಎಪಿಎಸ್ಇಝೆಡ್ ವಧವನ್ ಬಂದರು, ಹಾಲ್ದಿಯಾ ಬಂದರು, ವಿಸಿನ್ಜಮ್ ಎಲ್ಎನ್ಜಿ ಬಂಕರಿಂಗ್ ಮತ್ತು ದಿಘಿ ಬಂದರುಗಳಲ್ಲಿ ಹೊಸ ಹಾಗೂ ಕಾರ್ಯತಂತ್ರದ ಅಭಿವೃದ್ಧಿ ಯೋಜನೆಗಳಿಗಾಗಿ ಒಪ್ಪಂದ ಪತ್ರಗಳಿಗೆ ಸಹಿ ಹಾಕಲಿದೆ. ಇದರಿಂದ ಸಾಮರ್ಥ್ಯ ವೃದ್ಧಿ ಮತ್ತು ಮೂಲಸೌಕರ್ಯ ನಿರ್ಮಾಣದತ್ತ ಸಂಸ್ಥೆಯ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.
ಎಪಿಎಸ್ಇಝೆಡ್ ಪ್ರದರ್ಶನದ ಪ್ರಮುಖ ಆಕರ್ಷಣೆಯೆಂದರೆ ಭಾರತದ ಮೊದಲ ಟ್ರೈಲಿಂಗ್ ಸಕ್ಷನ್ ಹಾಪರ್ ಡ್ರೆಡ್ಜರ್ ಸಿಮ್ಯುಲೇಟರ್ ಆಗಿದೆ. ಇದು ಮೇಕ್-ಇನ್-ಇಂಡಿಯಾ ಯೋಜನೆಯಡಿ ಎಪಿಎಸ್ಇಝೆಡ್ಗಾಗಿ ಎಆರ್ಐ ಸಿಮ್ಯುಲೇಶನ್ ಸಂಸ್ಥೆಯ ಮೂಲಕ ಸ್ವದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಭಾರತದ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಬಲಪಡಿಸುವುದರ ಜೊತೆಗೆ, ದೇಶೀಯ ಉತ್ಪಾದನೆಯ ಮೂಲಕ ಬಂದರು ಸಾಮರ್ಥ್ಯ ವಿಸ್ತರಣೆ ಮಾಡುವ "ಸಾಗರಮಾಲಾ" ಯೋಜನೆಯ ಗುರಿಯನ್ನು ಸಹ ಬೆಂಬಲಿಸುತ್ತದೆ.
ಇನ್ಕ್ಲೂಸಿವಿಟಿ ಕೂಡ ಎಪಿಎಸ್ಇಝೆಡ್ ಕಥೆಯ ಪ್ರಮುಖ ಅಂಶವಾಗಿದೆ. ಕೇರಳದ ವಿಸಿನ್ಜಮ್ ಬಂದರಿನಲ್ಲಿ ಭಾರತದ ಮೊದಲ ಟ್ರಾನ್ಸ್ಶಿಪ್ಮೆಂಟ್ ಹಬ್ನಲ್ಲಿಎಪಿಎಸ್ಇಝೆಡ್ ದೇಶದ ಮೊದಲ ಮಹಿಳಾ ಕ್ವೇ ಕ್ರೇನ್ ಆಪರೇಟರ್ಗಳನ್ನು ತರಬೇತಿ ನೀಡಿ ನಿಯೋಜಿಸಿದೆ. ಇದರಿಂದ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಮೂಲಕ ಕಡಲ ಕಾರ್ಯಾಚರಣೆಗಳಲ್ಲಿ ಸಮಾನ ಅವಕಾಶಗಳನ್ನು ಹೇಗೆ ಸೃಷ್ಟಿಸಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
ಇದರ ಝೀರೋ ಟಚ್ ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪ್ಲಾಟ್ಫಾರ್ಮ್ (Zero Touch Multi-Modal Logistics Platform) ಕೃತಕ ಬುದ್ಧಿಮತ್ತೆ (AI) ಆಧಾರಿತ ಮುನ್ಸೂಚಕ ವಿಶ್ಲೇಷಣೆಯನ್ನು ಬಳಸಿಕೊಂಡು ಬಂದರುಗಳು, ರೈಲು, ರಸ್ತೆ ಮತ್ತು ಒಳನಾಡಿನ ಜಲಮಾರ್ಗಗಳನ್ನು ಸಂಯೋಜಿಸುತ್ತದೆ. ಇದು ನೇರವಾಗಿ ಲಾಜಿಸ್ಟಿಕ್ಸ್ ವೆಚ್ಚಗಳನ್ನು ಕಡಿಮೆ ಮಾಡಲು ಹಾಗೂ ಸುಧಾರಿತ ದಕ್ಷತೆಗೆ ನೇರವಾಗಿ ಕೊಡುಗೆ ನೀಡುತ್ತದೆ. ಅಲ್ಲದೆ, ಭಾರತದ ವಾಣಿಜ್ಯ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಪ್ರಮುಖ ಪಾತ್ರವಹಿಸುತ್ತದೆ.
ಅದಾನಿ ಕೌಶಲ್ಯ ಮತ್ತು ಶಿಕ್ಷಣ (ASE) ಮುಖಾಂತರ, ಎಪಿಎಸ್ಇಝೆಡ್ (APSEZ) ಕಳೆದ ಎರಡು ವರ್ಷಗಳಲ್ಲಿ ಬಂದರು ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ 8,000 ಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಿದ್ದು, 100% ಉದ್ಯೋಗಾವಕಾಶ ಸಾಧನೆ ಮಾಡಿದೆ. ಇದರ ಪ್ರಮುಖ "ಕರ್ಮ ಶಿಕ್ಷಣ" (Karma Shiksha) ಕಾರ್ಯಕ್ರಮ ಭಾರತದ ಮೊದಲ NCVET ಮಾನ್ಯತೆ ಪಡೆದ ಬಂದರು ಮತ್ತು ಲಾಜಿಸ್ಟಿಕ್ಸ್ ಡಿಪ್ಲೊಮಾ ತರಗತಿ ಕಲಿಕೆಯನ್ನು ಪ್ರಾಯೋಗಿಕ ಅನುಭವದೊಂದಿಗೆ ಸಂಯೋಜಿಸುತ್ತದೆ.
ಎಪಿಎಸ್ಇಝೆಡ್ ನೆಟ್ವರ್ಕ್ನಾದ್ಯಂತ 53,000ಕ್ಕೂ ಹೆಚ್ಚು ಜನರು ಸುರಕ್ಷತಾ ತರಬೇತಿಯನ್ನು ಪಡೆದಿದ್ದಾರೆ ಹಾಗೂ ಆಂಧ್ರಪ್ರದೇಶದ ಅದಾನಿ ಕೃಷ್ಣಪಟ್ನಂ ಬಂದರಿನಲ್ಲಿ ಮಾತ್ರ 7,000 ಯುವಕರು ಮತ್ತು ಮಹಿಳೆಯರು ಕೌಶಲ್ಯಾಭಿವೃದ್ಧಿ ತರಬೇತಿ ಪಡೆದಿದ್ದಾರೆ.
ಭಾರತದ "ಬ್ಲೂ ಎಕಾನಮಿ" ಸದ್ಯ ದೇಶದ ಜಿಡಿಪಿಗೆ ಸುಮಾರು 4% ($13.2 ಬಿಲಿಯನ್) ಕೊಡುಗೆ ನೀಡುತ್ತಿದ್ದು, ಮೀನುಗಾರಿಕೆ, ನವೀಕರಿಸಬಹುದಾದ ಇಂಧನ, ಕರಾವಳಿ ಪ್ರವಾಸೋದ್ಯಮ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಹಲವು ಬೆಳವಣಿಗೆಯ ಗಡಿಯಾಗಿ ವೇಗವಾಗಿ ಬೆಳೆಯುತ್ತಿದೆ. ಬಂದರು ಮೂಲಸೌಕರ್ಯದಲ್ಲಿ ಶೇಕಡ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಅನುಮತಿ ದೊರೆತಿರುವುದರ ಜೊತೆಗೆ, ಹಸಿರು ಟಗ್ ಪರಿವರ್ತನಾ ಯೋಜನೆ (Green Tug Transition Programme - GTTP) ಹಾಗೂ ಸಾಗರ್ ಮಾರ್ಗಸೂಚಿಗಳಂತಹ ಹಸಿರು ಯೋಜನೆಗಳ ಮೂಲಕ ಶಾಶ್ವತತೆ ಮತ್ತು ಆತ್ಮನಿರ್ಭರತೆ ಎರಡೂ ಒಂದುಗೂಡುತ್ತಿವೆ. ಎಪಿಎಸ್ಇಝೆಡ್ ನವೀಕರಿಸಬಹುದಾದ ಇಂಧನ ಬಳಕೆ, ವಿದ್ಯುತ್ ಕ್ರೇನ್ಗಳು, ತ್ಯಾಜ್ಯನೀರಿನ ಮರುಬಳಕೆ ಹಾಗೂ ಕಾರ್ಬನ್-ನ್ಯೂಟ್ರಲ್ ಟರ್ಮಿನಲ್ಗಳ ಮೂಲಕ ಈ ರಾಷ್ಟ್ರೀಯ ಗುರಿಗಳನ್ನು ಪೂರೈಸುತ್ತಿದೆ.
ಇಸ್ರೇಲ್ನ ಹೈಫಾ, ಶ್ರೀಲಂಕಾದ ಕೊಲಂಬೊ, ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ಮತ್ತು ಟಾಂಜಾನಿಯಾದ ದಾರ್ ಎಸ್ ಸಲಾಮ್ ಸೇರಿದಂತೆ ಜಾಗತಿಕ ಹೆಜ್ಜೆಗುರುತನ್ನು ಹೊಂದಿರುವ ಎಪಿಎಸ್ಇಝೆಡ್, ಭಾರತದ "SAGAR" ಮಿಷನ್ ಅನ್ನು ಬಲಪಡಿಸುತ್ತದೆ. ಇದು ಪ್ರಾದೇಶಿಕ ಸಹಕಾರವನ್ನು ವೃದ್ಧಿಸುವುದರ ಜೊತೆಗೆ ವಾಣಿಜ್ಯ ಕ್ಷೇತ್ರದ ಸ್ಥೈರ್ಯ ಮತ್ತು ಸಹಿಷ್ಣುತೆಯನ್ನು ಮತ್ತಷ್ಟು ಬಲಪಡಿಸುತ್ತದೆ.
ಭಾರತವು ಕ Decade of the Seas ಯುಗವನ್ನು ಮುನ್ನಡೆಸುತ್ತಿರುವ ಈ ಸಮಯದಲ್ಲಿ, ಎಪಿಎಸ್ಇಝೆಡ್ (APSEZ)ನ ನಾಯಕತ್ವವು ಮೇಕ್-ಇನ್-ಇಂಡಿಯಾ ಆವಿಷ್ಕಾರ, ಡಿಜಿಟಲ್ ಪರಿವರ್ತನೆ ಮತ್ತು ಒಳಗೊಂಡ ಬೆಳವಣಿಗೆ ಎಂಬ ಮೂರು ಆಧಾರಗಳ ಮೇಲೆ ನಿಂತಿದೆ. ಇದು ಭಾರತದ ಸಮುದ್ರೋದ್ಯಮದ ಮಹತ್ವಾಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ. ಈ ಮೂಲಕ ಆತ್ಮನಿರ್ಭರ, ಶಾಶ್ವತ ಹಾಗೂ ಗ್ಲೋಬಲ್ ಸೌತ್ನ ಮುಂಚೂಣಿಯಲ್ಲಿ ನಿಲ್ಲಲು ಭಾರತ ಸಿದ್ಧವಾಗಿದೆ.
ಇಂಡಿಯಾ ಮೆರಿಟೈಮ್ ವೀಕ್ 2025ರಲ್ಲಿ ಅದಾಣಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (APSEZ) ಭಾರತದ ಸಮುದ್ರೋದ್ಯಮ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಪ್ರಮುಖ ಸಹಕಾರ ಒಪ್ಪಂದಗಳಿಗೆ ಮೇಲೆ ಹಾಕಲಿದೆ. ತಮ್ಮ ಹಾರ್ಬರ್ ವ್ಯವಹಾರದಡಿ, ಎಪಿಎಸ್ಇಝೆಡ್ ಮುಂಬೈ ಪೋರ್ಟ್ ಅಥಾರಿಟಿ (MBPA), ವಿ.ಓ. ಚಿದಂಬರನಾರ್ ಪೋರ್ಟ್ ಅಥಾರಿಟಿ ಮತ್ತು ಚೆನ್ನೈ ಪೋರ್ಟ್ ಅಥಾರಿಟಿಗಳೊಂದಿಗೆ ಟಗ್ಗಳ ಪೂರೈಕೆ ಹಾಗೂ ಚಾರ್ಟರ್ ಬಾಡಿಗೆಗಾಗಿ ಸಹಕರಿಸಲಿದ್ದು, ಶಿಪ್ಪಿಂಗ್ ಮಹಾನಿರ್ದೇಶನಾಲಯ (DGS)ದೊಂದಿಗೆ ಮೇಕ್-ಇನ್-ಇಂಡಿಯಾ ಯೋಜನೆಯಡಿ 12 ಟಗ್ಬೋಟ್ಗಳ ನಿರ್ಮಾಣಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಲಿಎ.
ಡ್ರೆಜಿಂಗ್ ವಿಭಾಗದಲ್ಲಿ ಸ್ವಯಂ ಚಾಲಿತ ಗ್ರ್ಯಾಬ್ ಡ್ರೆಡ್ಜರ್ ನಿರ್ಮಿಸಲು ಯೋಜನೆ ಇದೆ. ಬಂದರು ವಿಭಾಗದಲ್ಲಿ ವಧವನ್, ಹಾಲ್ದಿಯಾ, ದಿಘಿ ಹಾಗೂ ವಿಸಿನ್ಜಮ್ ಎಲ್ಎನ್ಜಿ ಬಂಕರಿಂಗ್ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಒಪ್ಪಂದಗಳು ನಡೆಯಲಿವೆ. ಈ ಎಲ್ಲ ತಂತ್ರಾತ್ಮಕ ಸಹಭಾಗಿತ್ವಗಳು ಶಾಶ್ವತ ಬಂದರು ಮೂಲಸೌಕರ್ಯ, ಸ್ವದೇಶಿ ನೌಕಾ ನಿರ್ಮಾಣ ಹಾಗೂ ಬ್ಲೂ ಎಕಾನಮಿ ವೃದ್ಧಿಯಲ್ಲಿ ಎಪಿಎಸ್ಇಝೆಡ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸುತ್ತವೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications