Get Updates
Get notified of breaking news, exclusive insights, and must-see stories!

Adani Vizhinjam Port: ಅದಾನಿ ವಿಝಿಂಜಂ ಬಂದರು ಫೇಸ್‌–2: ಕೇರಳದಲ್ಲಿ ₹30,000 ಕೋಟಿ ಹೂಡಿಕೆ: ಕರಣ್ ಅದಾನಿ

Adani Vizhinjam Port: ಶುಕ್ರವಾರ ವಿಝಿಂಜಂ ಅಂತಾರಾಷ್ಟ್ರೀಯ ಬಂದರಿನ ಎರಡನೇ ಹಂತದ (ಫೇಸ್‌-2) ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ಕೇರಳದ ಕಡಲ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಈ ಯೋಜನೆಯನ್ನು ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ ಅಭಿವೃದ್ಧಿಪಡಿಸುತ್ತಿದ್ದು, ಹೆಚ್ಚುವರಿ 16,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಹೇಳಿದೆ. ಇದರಿಂದಾಗಿ ಯೋಜನೆಗೆ ಒಟ್ಟು ಹೂಡಿಕೆ ಮೊತ್ತವು 30,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ APSEZ ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ, ಈ ದಿನವನ್ನು ಕೇರಳ ಹಾಗೂ ಭಾರತದ ಸಾಗರೋದ್ಯಮ ಭವಿಷ್ಯಕ್ಕೆ ಐತಿಹಾಸಿಕ ದಿನವೆಂದು ವಿವರಿಸಿದರು. ವಿಝಿಂಜಂ ಬಂದರು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಟ್ರಾನ್ಸ್‌ಶಿಪ್‌ಮೆಂಟ್ ಹಬ್ ಆಗಿ ಹೊರಹೊಮ್ಮಲಿದೆ ಮತ್ತು ಭಾರತದ ಬಂದರು ಆಧಾರಿತ ಅಭಿವೃದ್ಧಿ ತಂತ್ರದಲ್ಲಿ ಪ್ರಮುಖ ಆಧಾರಸ್ತಂಭವಾಗಲಿದೆ ಎಂದು ಅವರು ಹೇಳಿದರು.

Adani Launches Vizhinjam Port Phase 2 Strengthening Kerala s Position as Global Transshipment Hub

ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಸಂಸತ್ ಸದಸ್ಯರು, ಕೇಂದ್ರ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳು ಮತ್ತು ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಿದ್ದರು.

ಕರಣ್ ಅದಾನಿ ಅವರು ವಿಝಿಂಜಾಂ ಯೋಜನೆ ಸರ್ಕಾರಗಳು ಬದಲಾಗಿದ್ದರೂ ಮುಂದುವರೆದ ರಾಜಕೀಯ ದೃಷ್ಟಿಕೋನದ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ಯೋಜನೆಗೆ ಆರಂಭದಲ್ಲಿ ಮಂಜೂರು ಮಾಡಿದ್ದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಾಯಕತ್ವದ ಪ್ರಮುಖ ಪಾತ್ರವನ್ನು ಅವರು ಶ್ಲಾಘಿಸಿದರು. ಜೊತೆಗೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನೀಡಿದ ನಿರಂತರ ಬೆಂಬಲವನ್ನು ಪ್ರಶಂಸಿಸಿದ ಕರಣ್ ಅದಾನಿ, ದೊಡ್ಡ ಗ್ರೀನ್‌ಫೀಲ್ಡ್ ಮೂಲಸೌಕರ್ಯ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೇರಳ ರಾಜಕೀಯ ನಾಯಕರ ಸ್ಪಷ್ಟತೆ ಮತ್ತು ಆಡಳಿತಾತ್ಮಕ ಸಹಕಾರ ಅತ್ಯಂತ ಅಗತ್ಯವೆಂದು ಹೇಳಿದರು.

ಇದೇ ವೇಳೆ, ಹಲವು ರಾಜಕೀಯ ನಾಯಕರಿಂದ ಸಿಕ್ಕ ದ್ವಿಪಕ್ಷೀಯ ಬೆಂಬಲಕ್ಕೂ ಅವರು ಕೃತಜ್ಞತೆ ಸಲ್ಲಿಸಿ, ಇಂತಹ ಸಹಕಾರವು ಕೇರಳದ ದೀರ್ಘಕಾಲೀನ ಆರ್ಥಿಕ ಆದ್ಯತೆಗಳ ಕುರಿತು ಹೂಡಿಕೆದಾರರಿಗೆ ಬಲವಾದ ಸಂದೇಶವನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಬಂದರಿನ ಕಾರ್ಯಕ್ಷಮತೆ ಕುರಿತು ಮಾತನಾಡಿದ ಅದಾನಿ, ವಿಝಿಂಜಂ ಬಂದರು ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದ ಕೇವಲ 15 ತಿಂಗಳಲ್ಲೇ ಒಂದು ಮಿಲಿಯನ್ ಟಿಇಯುಗಳನ್ನು ನಿರ್ವಹಿಸುವ ಸಾಧನೆ ಮಾಡಿದ ಭಾರತದ ಅತ್ಯಂತ ವೇಗದ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಯ ಮೂಲಕ ಕೇರಳವನ್ನು ಜಾಗತಿಕ ಹಡಗು ನಕ್ಷೆಯಲ್ಲಿ ದೃಢವಾಗಿ ಇರಿಸಿದೆ ಎಂದು ಹೇಳಿದರು.

ಎರಡನೇ ಹಂತದ ಅಭಿವೃದ್ಧಿಯೊಂದಿಗೆ ವಿಝಿಂಜಂ ಬಂದರಿನ ಸಾಮರ್ಥ್ಯವು ಪ್ರಸ್ತುತ 1 ಮಿಲಿಯನ್ ಟಿಇಯುಗಳಿಂದ 2029ರ ವೇಳೆಗೆ 5.7 ಮಿಲಿಯನ್ ಟಿಇಯುಗಳಿಗೆ ವಿಸ್ತರಿಸಲಿದೆ. ಯೋಜನೆ ಸಂಪೂರ್ಣಗೊಂಡ ನಂತರ, ಈ ಬಂದರು ಭಾರತೀಯ ಉಪಖಂಡದಲ್ಲಿನ ಅತಿದೊಡ್ಡ ಟ್ರಾನ್ಸ್‌ಶಿಪ್‌ಮೆಂಟ್ ಬಂದರಾಗಲಿದೆ ಮತ್ತು ದೇಶದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಪ್ರಮುಖ ಬಂದರಗಳಲ್ಲಿ ಒಂದಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ.

ಈ ಯೋಜನೆ ಕೇವಲ ಬಂದರು ಮೂಲಸೌಕರ್ಯದ ವಿಸ್ತರಣೆ ಮಾತ್ರವಲ್ಲ, ದೇಶದ ಸಾಮರ್ಥ್ಯದ ವಿಸ್ತರಣೆಯಾಗಿದೆ. ತಂತ್ರಜ್ಞಾನ, ಕಾರ್ಯಕ್ಷಮತೆ ಹಾಗೂ ಪ್ರಮಾಣದ ದೃಷ್ಟಿಯಿಂದ ವಿಝಿಂಜಾಂ ಬಂದರು ಮುಂದಿನ ದಿನಗಳಲ್ಲಿ ಭಾರತದ ಇತರೆ ಬಂದರುಗಳಿಗೆ ಮಾದರಿಯಾಗಲಿದೆ ಎಂದು ಅದಾನಿ ಅವರು ಹೇಳಿದರು. ಇದೇ ವೇಳೆ, ಈ ಯೋಜನೆ ಸಹಕಾರಿ ಫೆಡರಲಿಸಂನಗೆ ಬಲವಾದ ಉದಾಹರಣೆಯಾಗಿ ಪರಿಗಣಿಸಲಾಗುತ್ತಿದೆ. ಬಂದರು ಆಧಾರಿತ ಆರ್ಥಿಕ ಬೆಳವಣಿಗೆಯು ಕೇಂದ್ರ ಸರ್ಕಾರದ ದೃಷ್ಟಿಕೋನಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಕರಣ್ ಅದಾನಿ ಅವರು ಕೇರಳ ಸರ್ಕಾರ, ಕೇಂದ್ರ ಸರ್ಕಾರ, ರಾಜಕೀಯ ಪಕ್ಷಗಳು, ತಿರುವನಂತಪುರಂ ಮತ್ತು ಕೇರಳದ ಜನತೆಗೆ ಅವರ ನಿರಂತರ ನಂಬಿಕೆಯಿಗಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ ಮತ್ತು ಅದಾನಿ ಗ್ರೂಪ್ ತಮ್ಮ ಬದ್ಧತೆಗಳನ್ನು ಯಶಸ್ವಿಯಾಗಿ ನೆರವೇರಿಸುವುದಾಗಿ ಭರವಸೆ ನೀಡಿದರು. https://www.youtube.com/watch?v=ZRl_g_MOogs

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+