Get Updates
Get notified of breaking news, exclusive insights, and must-see stories!

ಬೌದ್ಧ ಧರ್ಮಕ್ಕೆ ಮತಾಂತರದ ವೇಳೆ ಹಿಂದೂ ದೇವರ ಖಂಡನೆ ಆರೋಪ

ನವದೆಹಲಿ, ಅಕ್ಟೋಬರ್ 7: ದೆಹಲಿಯ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಸುಮಾರು 10 ಸಾವಿರ ಜನರು ಜಮಾಯಿಸಿ ಅಶೋಕ್ ವಿಜಯದಶಮಿಯನ್ನು ಆಚರಿಸುವ ಸಂದರ್ಭದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ದೀಕ್ಷೆ ಪಡೆದುಕೊಂಡರು. ಈ ವೇಳೆ ಹಿಂದೂ ದೇವರುಗಳನ್ನು ಖಂಡಿಸುವ ವಿಡಿಯೋ ವೈರಲ್‌ ಆಗಿದೆ.

ಈ ವೇಳೆ ಆಮ್‌ ಆದ್ಮಿ ಪಾರ್ಟಿಯ ರಾಜೇಂದ್ರ ಪಾಲ್ ಗೌತಮ್, ದೆಹಲಿಯ ಸಮಾಜ ಕಲ್ಯಾಣ ಸಚಿವ, ಭಾರತೀಯ ಬೋಧ ಮಹಾಸಭಾ ಮತ್ತು ಬೌದ್ಧ ಸಮಾಜ ಆಫ್ ಇಂಡಿಯಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಡಾ.ಬಿ.ಆರ್.ರವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ಅವರೊಂದಿಗೆ ಅನೇಕ ಬೌದ್ಧ ಸನ್ಯಾಸಿಗಳು ಭಾಗವಹಿಸಿದ್ದರು.

ನವದೆಹಲಿ ಸರ್ಕಾರದ ಸಚಿವ ಹಾಗೂ ಮಿಷನ್ ಜೈ ಭೀಮ್‌ನ ಸಂಸ್ಥಾಪಕರಾಗಿರುವ ರಾಜೇಂದ್ರ ಪಾಲ್ ಗೌತಮ್ ಅವರು ಈ ಕಾರ್ಯಕ್ರಮದ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಬುದ್ಧನ ಕಡೆಗೆ ಹೊರಟು ಜೈ ಭೀಮ್ ಎಂದು ಕರೆಯೋಣ. ಇಂದು ಮಿಷನ್ ಜೈ ಭೀಮ್ ಅಡಿಯಲ್ಲಿ, ಅಶೋಕ ವಿಜಯದಶಮಿಯಂದು, 10,000 ಕ್ಕೂ ಹೆಚ್ಚು ಬುದ್ಧಿಜೀವಿಗಳು ಡಾ. ಅಂಬೇಡ್ಕರ್ ಭವನ ರಾಣಿ ಝಾನ್ಸಿ, ರಸ್ತೆಯಲ್ಲಿರುವ ತಥಾಗತ ಗೌತಮ ಬುದ್ಧನ ಧಮ್ಮಕ್ಕೆ ಮರಳುವ ಮೂಲಕ ಜಾತಿ ಮುಕ್ತ ಮತ್ತು ಅಸ್ಪೃಶ್ಯ ಭಾರತವನ್ನು ಮಾಡುವ ಪ್ರತಿಜ್ಞೆ ಮಾಡಿದರು ಎಂದು ಟ್ವೀಟ್‌ ಮಾಡಿದ್ದಾರೆ.

Accused of blaspheming Hindu gods while converting to Buddhism in Delhi

ಈವೆಂಟ್ ಮತ್ತು ದೀಕ್ಷೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಪ್ರಾರಂಭಿಸಿದ್ದು, ವಿಡಿಯೋದ ಒಂದು ಕ್ಲಿಪ್ ಅಲ್ಲಿ ಜನರು ಹಿಂದೂ ದೇವರು ಮತ್ತು ದೇವತೆಗಳನ್ನು ಪೂಜಿಸುವುದಿಲ್ಲ ಅಥವಾ ಹಿಂದೂ ಆಚರಣೆಗಳನ್ನು ಅನುಸರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಹೇಳಲಾಯಿತು. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿ ವಕ್ತಾರ ಹರೀಶ್ ಖುರಾನಾ ಅವರು ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಇದು ಎಎಪಿ ಪಕ್ಷದ ದ್ವಂದ್ವವನ್ನು ತೋರಿಸುತ್ತದೆ, ಅವರು ಚುನಾವಣೆಯ ಸಮಯದಲ್ಲಿ ಅವರಿಗೆ ಪ್ರಾರ್ಥಿಸುತ್ತಾರೆ ಎಂದು ಆರೋಪಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಮತ್ತು ಅವರ ಹಿಂಬಾಲಕರು ಜೈ ಶ್ರೀ ರಾಮ್ ಮತ್ತು ಜೈ ಶ್ರೀ ಕೃಷ್ಣ ಎಂದು ಹೇಳಲು ಹಿಂಜರಿಯುವುದಿಲ್ಲ. ಅವರ ಮಂತ್ರಿಗಳು (ನೀವೇ ಆಲಿಸಿ) ನಮ್ಮ ಮೆಚ್ಚಿನ ದೇವತೆಗಳನ್ನು ಹೇಗೆ ಅವಮಾನಿಸುತ್ತಾರೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅವರು ಈ ಬಗ್ಗೆ ಪೊಲೀಸ್ ದೂರು ದಾಖಲಿಸಲಿದ್ದಾರೆ.

ಸಾರ್ವಜನಿಕ ಸಾಮೂಹಿಕ ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಆಪ್ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರ ವಿಡಿಯೋ ಕ್ಲಿಪ್ ವೈರಲ್ ಆದ ನಂತರ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಹೊಸ ಗಲಾಟೆ ನಡೆದಿದೆ. ಕ್ಲಿಪ್‌ನಲ್ಲಿ, ಸಾವಿರಾರು ಹಿಂದೂ ದೇವರುಗಳನ್ನು ಅವಮಾನಿಸುವಂತೆ ಪ್ರಮಾಣವಚನ ಕೇಳಿಬಂದಿದೆ.

ಧಮ್ಮ ಚಕ್ರ ಪ್ರವರ್ತನ್ ದಿನ್ ಕಾರ್ಯಕ್ರಮ ಡಾ. ಬಿ.ಆರ್. ಅಂಬೇಡ್ಕರ್ ಅವರು ಅಕ್ಟೋಬರ್ 1956 ರಲ್ಲಿ ಲಕ್ಷಗಟ್ಟಲೆ ಅನುಯಾಯಿಗಳೊಂದಿಗೆ ಭಗವಾನ್ ಬುದ್ಧನ ನಂಬಿಕೆಗೆ ಮತಾಂತರಗೊಂಡಿದ್ದನ್ನು ಗುರುತಿಸುವ ವಾರ್ಷಿಕ ಕಾರ್ಯಕ್ರಮವಾಗಿದೆ. ಡಾ ಅಂಬೇಡ್ಕರ್ ಅವರು 22 ಪ್ರತಿಜ್ಞೆಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿ ಹಿಂದೂ ದೇವರುಗಳ ವಿಮರ್ಶೆಯು ಸೇರಿದ್ದು, ಈಗ ಪ್ರಸ್ತುತ ನಡೆದ ಸಾಮೂಹಿಕ ಮತಾಂತರದ ಕಾರ್ಯಕ್ರಮದಲ್ಲಿ ಪುನರಾವರ್ತನೆಯಾಗಿದೆ.

Accused of blaspheming Hindu gods while converting to Buddhism in Delhi

ಸಮಾರಂಭದಲ್ಲಿ ಆಮ್ ಆದ್ಮಿ ಸರ್ಕಾರದ ಸಚಿವರು, ಇತರ ಸಾವಿರ ಜನರ ನಡುವೆ, ನನಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ನಂಬಿಕೆ ಇಲ್ಲ, ಅಥವಾ ನಾನು ಅವರನ್ನು ಪೂಜಿಸುವುದಿಲ್ಲ ಎಂದು ಪ್ರಮಾಣವಚನ ಸ್ವೀಕರಿಸುವುದಾಗಿ ವಿಡಿಯೋದಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+