ರಕ್ಷಾಬಂಧನಕ್ಕೆ ತನ್ನ ಸಹೋದರನಿಗೆ ಕಿಡ್ನಿಯನ್ನೇ ಕೊಟ್ಟ ಸಹೋದರಿ, ಎಲ್ಲಿ ಗೊತ್ತಾ?
ಜೈಪುರ, ಆಗಸ್ಟ್ 30: ಇಂದು ರಕ್ಷಾಬಂಧನ, ಎಲ್ಲ ಸಹೋದರರಿಗೆ ಅವರ ಸಹೋದರಿಯರು ರಾಖಿ ಕಟ್ಟು ಶುಭ ಹಾರೈಸಿ ಸಿಹಿ ಕೊಟ್ಟರೆ ರಾಜಸ್ತಾನದ ಸಹೋದರಿಯು ತಮ್ಮ ಸಹೋದರನಿಗೆ ತಮ್ಮ ಅಮೂಲ್ಯವಾದ ಕಿಡ್ನಿಯನ್ನೇ ನೀಡಿ ಜೀವದಾನ ಮಾಡಿದ್ದಾರೆ.
ರಕ್ಷಾ ಬಂಧನದ ಸಂದರ್ಭದಲ್ಲಿ ರಾಜಸ್ಥಾನದಾದ್ಯಂತ ತಮ್ಮ ಕಿಡ್ನಿಗಳನ್ನು ದಾನ ಮಾಡುವ ಮೂಲಕ ಹಲವಾರು ಸಹೋದರಿಯು ತಮ್ಮ ಸಹೋದರನ ಜೀವವನ್ನು ಉಳಿಸಿದ್ದಾರೆ. ಮೂತ್ರಪಿಂಡ ವೈಫಲ್ಯದ ವಿರುದ್ಧ ಹೋರಾಡುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬನಿಗೆ ಆತನ ಸಹೋದರಿಯು ಜೀವದ ಉಡುಗೊರೆಯನ್ನು ನೀಡಿದ್ದಾಳೆ. ಬದುಕಲು ಮೂತ್ರಪಿಂಡ ಕಸಿ ಅಗತ್ಯ ಎಂದು ವೈದ್ಯರು ಹೇಳಿದಾಗ, ಅವರ ಸಹೋದರಿ ಅವರ ಜೀವ ರಕ್ಷಕಿಯಾಗಿ ಕಿಡ್ನಿದಾನ ಮಾಡಿದ್ದಾರೆ.

ರಕ್ಷಾ ಬಂಧನದ ಮುನ್ನಾ ದಿನವಾದ ಮಂಗಳವಾರ ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ಸಹೋದರಿ ತನ್ನ ಕಿಡ್ನಿಯನ್ನು ದಾನ ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ಸೂರಜ್ ಗೋಡಾರ ಮಾತನಾಡಿ, ಒಡಹುಟ್ಟಿದವರ ನಡುವೆ ವಿಶೇಷವಾದ ಬಾಂಧವ್ಯವಿದೆ. ರಕ್ಷಾ ಬಂಧನದಂದು, ಸಹೋದರರು ಮತ್ತು ಸಹೋದರಿಯರು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ, ಆದರೆ ಇದು ಸಹೋದರಿ ತನ್ನ ಸಹೋದರನಿಗೆ ನೀಡಿದ ಜೀವನದ ಉಡುಗೊರೆಯಾಗಿದೆ ಎಂದು ತಿಳಿಸಿದರು.
ಇಲ್ಲಿ ಹಲವಾರು ಸಹೋದರಿಯರು ತಮ್ಮ ಸಹೋದರರಿಗೆ ಮೂತ್ರಪಿಂಡಗಳನ್ನು ದಾನ ಮಾಡುತ್ತಾರೆ ಎಂದು ವೈದ್ಯರು ಸೇರಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಕಿಡ್ನಿ ದಾನಿಗಳು ಸಹೋದರಿಯರಾದ ಕನಿಷ್ಠ ಮೂರು ಆಪರೇಷನ್ಗಳನ್ನು ಮಾಡಿದ್ದೇವೆ ಎಂದು ಅವರು ಹೇಳಿದರು.
ಬಂಡಿ ಎಂಬಲ್ಲಿ ಒಬ್ಬ ರೈತನ ಮೂವರು ಸಹೋದರಿಯರು ಅವರ ಜೀವ ಉಳಿಸಲು ತಮ್ಮ ಮೂತ್ರಪಿಂಡಗಳನ್ನು ದಾನ ಮಾಡಲು ಮುಂದಾದರು. ರೈತನಿಗೆ ನಿಯಮಿತವಾಗಿ ಡಯಾಲಿಸಿಸ್ ಮಾಡುತ್ತಿದ್ದರು. ಮೂತ್ರಪಿಂಡ ಕಸಿ ಮಾಡಬೇಕಾಗಿತ್ತು. ಕಿಡ್ನಿ ಹೊಂದಾಣಿಕೆಯಾದ ಸಹೋದರಿ ಸೂಕ್ತ ದಾನಿ ಎಂದು ತಿಳಿದುಬಂದಿತು. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ನಂತರ ರೋಗಿಯನ್ನು ಬಾಡಿಗೆ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಸಹೋದರಿ ತನ್ನ ಕಿಡ್ನಿಯನ್ನು ತನ್ನ ಸಹೋದರಿಗೆ ದಾನ ಮಾಡಿದ ಮತ್ತೊಂದು ನಿದರ್ಶನವು ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ವರದಿಯಾಗಿದೆ. ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ ಹಿರಿಯ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥ ಡಾ.ಧನಂಜಯ್ ಅಗರ್ವಾಲ್ ಮಾತನಾಡಿ, 'ಕಿಡ್ನಿ ದಾನದಲ್ಲಿ ಶೇ.85 ರಷ್ಟು ಮಹಿಳೆಯರೇ ಕುಟುಂಬದ ಪುರುಷರಿಗೆ ಕಿಡ್ನಿ ದಾನ ಮಾಡುತ್ತಾರೆ. ಹೆಚ್ಚಿನ ಕಿಡ್ನಿ ಕಸಿಗಳು ಸಹೋದರಿಯರು, ಹೆಂಡತಿಯರು ಮತ್ತು ತಾಯಂದಿರಿಂದ ನಡೆಯುತ್ತಿವೆ ಎಂದು ತಿಳಿಸಿದರು.












Click it and Unblock the Notifications