ಅತ್ಯಾಚಾರದ ದೂರು ಹಿಂಪಡೆದರೆ ಜಮೀನು ಮನೆ: ಕ್ರೈಸ್ತ ಸನ್ಯಾಸಿನಿಗೆ ಆಮಿಷ
ತಿರುವನಂತಪುರಂ, ಜುಲೈ 30: ಬಿಷಪ್ ವಿರುದ್ಧದ ಅತ್ಯಾಚಾರದ ದೂರನ್ನು ಹಿಂಪಡೆದರೆ ಜಮೀನು, ಕಟ್ಟಡ ಮತ್ತು ಸುರಕ್ಷತೆ ಒದಗಿಸುವುದಾಗಿ ಪಾದ್ರಿಯೊಬ್ಬರು ಆಮಿಷವೊಡ್ಡುತ್ತಿದ್ದಾರೆ ಎಂದು ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯ ಕುಟುಂಬ ಆರೋಪಿಸಿದೆ.
ಅತ್ಯಾಚಾರ ಸಂತ್ರಸ್ತೆ ಸನ್ಯಾಸಿನಿಗೆ ಬಂದಿದ್ದ ಫೋನ್ ಕರೆಯ ಆಡಿಯೊ ಮುದ್ರಣವು ಸೋರಿಕೆಯಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಜಲಂಧರ್ನ ಬಿಷಪ್ ಫ್ರಾಂಕೊ ಮುಲ್ಲ್ಯಾಕಲ್ ಅವರು 2014-2016ರವರೆಗೆ ತಮ್ಮ ಮೇಲೆ 13 ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 46 ವರ್ಷದ ಸನ್ಯಾಸಿನಿ ಆರೋಪಿಸಿದ್ದಾರೆ.
ತನ್ನನ್ನು ಬೆದರಿಸಿ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಸನ್ಯಾಸಿನಿ ಹಾಗೂ ಇತರೆ ಐವರ ವಿರುದ್ಧ ಬಿಷಪ್ ದೂರು ನೀಡಿದ ಬಳಿಕ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಅತ್ಯಾಚಾರ ಪ್ರಕರಣದಲ್ಲಿ ಕೇರಳ ಪೊಲೀಸರಿಂದ ಬಿಷಪ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತಾವು ಅಮಾಯಕ ಎಂದು ಪ್ರತಿಪಾದಿಸಿದ್ದಾರೆ. ಸನ್ಯಾಸಿನಿ ವಿರುದ್ಧ ಶಿಸ್ತುಕ್ರಮ ಕೈಗೊಂಡ ಕಾರಣಕ್ಕೆ ನಡೆಸಿದ ಸಂಚಿನ ಬಲಿಪಶು ಆಗಿರುವುದಾಗಿ ಬಿಷಪ್ ಹೇಳಿಕೊಂಡಿದ್ದಾರೆ.
ಸೋರಿಕೆಯಾದ ದೂರವಾಣಿ ಕರೆಯಲ್ಲಿ ಸಂತ್ರಸ್ತೆಯ ಪರ ನಿಂತಿರುವ ಸನ್ಯಾಸಿನಿಯೊಬ್ಬರ ಜತೆ ಮಾತನಾಡಿದ್ದ ಪಾದ್ರಿಯೊಬ್ಬರು, ನಾವು ಕೆಲವು ಭೂಮಿ ಖರೀದಿಸಿ, ಅಲ್ಲಿ ಕಟ್ಟಡ ಕಟ್ಟಿ ನಿಮ್ಮೆಲ್ಲರನ್ನೂ ಅಲ್ಲಿ ಸುರಕ್ಷಿತವಾಗಿ ಇರಿಸಬಹುದು. ಅವೆಲ್ಲವೂ ತಕ್ಷಣವೇ ನಡೆಯುವುದಿಲ್ಲ. ಎಲ್ಲದಕ್ಕೂ ಸಮಯ ಬೇಕು. ನಾವು ಅದರ ಬಗ್ಗೆ ಚರ್ಚಿಸಬೇಕು' ಎಂದು ಹೇಳಿದ್ದಾರೆ.
'ನೀವು ನಿಮ್ಮ ದೂರನ್ನು ಹಿಂದಕ್ಕೆ ಪಡೆದುಕೊಳ್ಳದೇ ಇದ್ದರೆ ಇವು ಸಾಧ್ಯವಾಗುವುದಿಲ್ಲ. ದೂರು ವಾಪಸ್ ಪಡೆದು ಒಡಿಶಾ, ಆಂಧ್ರದ ನಿಮ್ಮ ಕಾನ್ವೆಂಟ್ಗಳಿಗೆ ಹೋದರೆ ಬೆದರಿಕೆಗಳು ಬರಬಹುದು.
ಆದರೆ ನೀವು ಸ್ವತಂತ್ರವಾಗಿ ಮುಂದುವರಿದು ಬೇರೆ ಬಿಷಪ್ ಬಳಿ ಹೋದರೆ ಯಾವ ಬೆದರಿಕೆಯೂ ಬರುವುದಿಲ್ಲ. ನೀವು ಇದರ ಬಗ್ಗೆ ಯೋಚಿಸಿ ಸಕಾರಾತ್ಮಕವಾಗಿ ನಿರ್ಧಾರ ಕೈಗೊಂಡರೆ, ಯಾವುದೇ ರೀತಿಯಲ್ಲಾದರೂ ನಾನು ಸಹಾಯ ಮಾಡಬಲ್ಲೆ' ಎಂದಿದ್ದಾರೆ.
ಆದರೆ, ದೂರು ಹಿಂಪಡೆಯಲು ನಿರಾಕರಿಸಿದ ಸನ್ಯಾಸಿನಿ, 'ನಮಗೆ ನ್ಯಾಯ ಬೇಕು. ನಾವು ಯಾವುದೇ ಬದುಕನ್ನು ಅಥವಾ ನಮ್ಮ ಘನತೆಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಹುದ್ದೆ ತ್ಯಜಿಸಲು ಪಾದ್ರಿಗೆ ಸೂಚನೆ
ಸನ್ಯಾಸಿನಿಗೆ ಬೆದರಿಕೆ ಕರೆ ಮಾಡಿದ ಆರೋಪ ಎದುರಿಸುತ್ತಿರುವ ಫಾದರ್ ಜೇಮ್ಸ್ ಅವರಿಗೆ ಪದತ್ಯಾಗ ಮಾಡುವಂತೆ ಸೂಚಿಸಲಾಗಿದೆ.
ಈ ಘಟನೆಯನ್ನು ದುರದೃಷ್ಟಕರ ಎಂದು ಹೇಳಿರುವ ಕ್ಯಾರ್ಮೆಲಿಟೀಸ್ ಆಫ್ ಮೆರಿ ಇಮ್ಯಾಕ್ಯುಲೇಟ್ (ಸಿಎಂಐ), ಸನ್ಯಾಸಿನಿಯರಿಗೆ ಭೂಮಿ, ಕಟ್ಟಡ ಒದಗಿಸುತ್ತೇವೆಂಬ ಪಾದ್ರಿಯ ಹೇಳಿಕೆಗೂ ತಮಗೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಸ್ಥಾನದಿಂದ ಕೆಳಕ್ಕಿಳಿಯುವಂತೆ ಫಾದರ್ ಜೇಮ್ಸ್ ಅವರಿಗೆ ಸೂಚಿಸಲಾಗಿದೆ. ಈ ಸಂಬಂಧ ವಿಚಾರಣೆ ಆರಂಭಿಸಲಾಗಿದೆ ಎಂದು ಸಿಎಂಐ ಹೇಳಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications