ಮೀಸಲಾತಿಗಾಗಿ ಪಟೇಲ್ ಸಮುದಾಯದ ಉಗ್ರ ಹೋರಾಟ
ಅಹಮದಾಬಾದ್, ಆಗಸ್ಟ್, 25 : ನಾಲ್ಕು ದಶಕಗಳ ಕಾಲ ಸುಮ್ಮನಿದ್ದ ಬಹುಸಂಖ್ಯಾತ ಪಟೇಲ್ ಜನಾಂಗ ಇದೀಗ ನಮಗೂ ಮೀಸಲಾತಿ ಬೇಕು ಎಂದು ಭಾರೀ ಹೋರಾಟ ಕೈಗೊಂಡಿದೆ.
ಸಾಮಾಜಿಕ ಹಾಗೂ ರಾಜಕೀಯವಾಗಿ ಅತ್ಯಂತ ಪ್ರಭಾವಶಾಲಿಯಾಗಿರುವ ಪಟೇಲ್ ಸಮುದಾಯ ತನ್ನನ್ನು ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿಸಿ ಎಂದು ಪಟ್ಟುಹಿಡಿದು ಕೂತಿದೆ. ಗಾಂಧಿನಗರದಲ್ಲಿ ಕಳೆದವಾರ 30,000 ಪಟೇಲರು ಸೇರಿಕೊಂಡು ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದು, ಇಂದಿಗೂ ಹೋರಾಟದ ಕಾವು ಉಲ್ಬಣಗೊಳ್ಳುತ್ತಲೇ ಇದೆ.[ಕಳಸಾ -ಬಂಡೂರಿ ಯೋಜನೆ : ನವಲಗುಂದ ಉದ್ವಿಗ್ನ]
ಅಹಮದಾಬಾದಿನಲ್ಲಿ ದಿನದಿಂದ ದಿನಕ್ಕೆ ಉಗ್ರ ರೂಪ ತಳೆಯುತ್ತಿರುವ ಪಟೇಲ್ ಜನಾಂಗದ ಪ್ರತಿಭಟನಾ ಸ್ವರೂಪವನ್ನು ಇಲ್ಲಿರುವ ಪಿಟಿಐ ಚಿತ್ರಗಳಲ್ಲಿ ನೋಡಿ

ಇದು ಪಟೇಲ್ ಸಮುದಾಯದ ನಾಯಕ
ನೇಗಿಲು ಹಿಡಿದ ಈ ಮೂರ್ತಿಯು ಪಟೇಲ್ ಸಮುದಾಯವನ್ನು ಸಂಕೇತಿಸಲಿದ್ದು, ಇದು ಪಟೇಲ್ ಸಮುದಾಯದ ನಾಯಕನಂತೆ. ನಾಯಕನ ದೊಡ್ಡ ಮೂರ್ತಿ ನಿರ್ಮಿಸಿಕೊಂಡು ಪ್ರತಿಭಟನೆ ಕೈಗೊಂಡ ಪಟೇಲರು.

Say no to caste based reservation
ಇರುವೇಯೋ ಜನರೋ ಎಂದು ಬೆಚ್ಚಿ ಬೀಳದಿರಿ ಪ್ಲೆ ಕಾರ್ಡ್ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನರು ಮೀಸಲಾತಿ ನೀಡುವುದಿಲ್ಲ ಎಂದು ಹೇಳಬೇಡಿ, ನಮಗೆ ಮೀಸಲಾತಿ ಬೇಕು ಎಂದು ಕೇಳುತ್ತಿದ್ದಾರೆ.

ನಮ್ಮ ಹೋರಾಟ ಗೆದ್ದೇ ಗೆಲ್ಲುತ್ತದೆ.
ಪ್ರತಿಭಟನೆಯಲ್ಲಿ ತೊಡಗಿದ ಪಟೇಲ್ ಸಮುದಾಯದ ಯುವತಿಯರು ನಮ್ಮ ಹೋರಾಟ ಗೆದ್ದೇ ಗೆಲ್ಲುತ್ತದೆ ಎಂದು ಬಹಳ ನಂಬಿಕೆಯಿಂದ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿರುವುದು.

ಶಂಖ ಊದಲು ಬಿಟ್ಟಿದ್ದೀರಿ, ಹೋರಾಟ ತೀವ್ರಗೊಳ್ಳಲು ಬಿಡದಿರಿ
ಹೋರಾಟದ ಅವಧಿಯಲ್ಲಿ ಶಂಖು ಊದುವುದರ ಮೂಲಕ ಪ್ರತಿಭಟನೆ ಮತ್ತಷ್ಟು ಉಗ್ರರೂಪ ತಾಳುವ ಮೊದಲು ಮೀಸಲಾತಿ ನೀಡಲು ಮನಸ್ಸು ಮಾಡಿ ಎಂದು ಅಹಮದ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದು ನಮ್ಮ ಹೋರಾಟ, ಇದು ಆರಂಭವಷ್ಟೇ
ಮೀಸಲಾತಿ ನೀಡುವವರೆಗೂ ನಮ್ಮ ಹೋರಾಟ ನಿರಂತರ. ಇದು ಆರಂಭವಷ್ಟೇ, ಹೋರಾಟದ ಕಿಚ್ಚು ಹೆಚ್ಚಾಗಲು ಬಿಡಬೇಡಿ. ನಮಗೆ ಮೀಸಲಾತಿ ಕೊಟ್ಟು, ಕ್ರಾಂತಿಕಾರತ್ವ ಮನಸ್ಸನ್ನು ಶಾಂತಿಗೊಳಿಸಿ.












Click it and Unblock the Notifications