ಕೇರಳದ ವಯನಾಡಿನ ಬಸ್ ನಿಲ್ದಾಣದಲ್ಲಿ ಜನ ಬೆಚ್ಚಿದ್ದೇಕೆ?
ವಯನಾಡು, ಜೂ.18: ದೇವರ ನಾಡು ಕೇರಳ ವಯನಾಡು ಜಿಲ್ಲೆಯ ಪುಟ್ಟ ಊರು ಕಲ್ಪೆಟ್ಟದ ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳ್ಳಗೆ ಪ್ರಸಾರವಾದ ಸಿನಿಮಾ ನೋಡಿ ಅಲ್ಲಿದ್ದ ಮಹಿಳೆಯರು ಬೆಚ್ಚಿ ಓಟಕಿತ್ತಿದ್ದಾರೆ, ಪುರುಷರು ಕಂಗಾಲಾಗಿ ಅತ್ತಿಂದಿತ್ತ ನೋಡಿದ್ದಾರೆ, ಮಕ್ಕಳು ಕುತೂಹಲದಿಂದ ಟಿವಿ ಕಡೆಗೆ ನೋಡತೊಡಿಗಿದ್ದಾರೆ. ಇಷ್ಟಕ್ಕೂ ಸಾರ್ವಜನಿಕರಿಗೆ ಇಷ್ಟೆಲ್ಲ ಸಮಸ್ಯೆ ಏಕೆ ಉಂಟಾಯಿತು? ಇಲ್ಲಿದೆ ಉತ್ತರ.
ಕಲ್ಪೆಟ್ಟದಲ್ಲಿ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್ ಗಾಗಿ ಕಾದಿದ್ದ ಜನರಿಗೆ ಬಸ್ ನಿಲ್ದಾಣದಲ್ಲಿದ್ದ ಟಿವಿಗಳು ಶಾಕ್ ನೀಡಿವೆ. ಎರಡು ದಿನಗಳ ಹಿಂದೆ ಎರಡು ಟಿವಿಗಳಲ್ಲಿ ಬೆಳಗ್ಗೆ 10.30ರ ಸುಮಾರಿಗೆ ವಯಸ್ಕರ ಸಿನಿಮಾವನ್ನು ಪ್ರಸಾರ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಇಂಥ ಪ್ರಮಾದವಾದರೂ ಎಚ್ಚೆತ್ತುಕೊಳ್ಳದ ಆಡಳಿತ ಅಧಿಕಾರಿಗಳು ಸುಮಾರು 30 ನಿಮಿಷಗಳ ಕಾಲ ಚಿತ್ರ ಓಡಲು ಬಿಟ್ಟಿದ್ದಾರೆ.

ಬಸ್ ನಿಲ್ದಾಣದಲ್ಲಿದ್ದ ಜನರು ಭಾರಿ ಮುಜುಗರ ಅನುಭವಿಸಿದ್ದಾರೆ. ಕೆಲವರು ಟಿವಿ ಪರದೆ ಮುಚ್ಚಲು ಯತ್ನಿಸಿದರು. ಟಿವಿ ಆಪರೇಟರ್ ರೂಮ್ ಲಾಕ್ ಆಗಿತ್ತು. ಟಿವಿ ಸ್ವಿಚ್ ಸಿಗುತ್ತಿರಲಿಲ್ಲ. ಕೊನೆಗೆ ಕೇಬಲ್ ಕಟ್ ಮಾಡಬೇಕಾಯಿತು. ಮಹಿಳೆಯರಂತೂ ಬಸ್ ಮರೆತು ನಿಲ್ದಾಣದಿಂದ ಕಾಲ್ಕಿತ್ತರು ಎಂದು ಪ್ರತ್ಯಕ್ಷ ದರ್ಶಿಗಳು ತಮ್ಮ ಅನುಭವವನ್ನು ಗುರುವಾರ ಹೇಳಿಕೊಂಡಿದ್ದಾರೆ.
ಕೊನೆಗೂ ಬಸ್ ನಿಲ್ದಾಣದ ನಿರ್ವಾಹಕರು ಎಚ್ಚೆತ್ತುಕೊಂಡು, ಕೇಬಲ್ ಆಪರೇಟರ್ ನನ್ನು ಕಂಡು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳೀಯ ಕೇಬಲ್ ಆಪರೇಟರ್ 38 ವರ್ಷ ವಯಸ್ಸಿನ ಮನ್ಜೂರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಐಪಿಸಿ ಸೆಕ್ಷನ್ 292, ಮಹಿಳೆಯರನ್ನು ಕೆಟ್ಟದಾಗಿ ಪ್ರತಿನಿಧಿಸುವ ನಿಯಂತ್ರಣ ಕಾಯ್ದೆ, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಉಲ್ಲಂಘನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪ ಸಾಬೀತಾದರೆ ಕನಿಷ್ಠ 2 ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.
ವಿಚಾರಣೆ ವೇಳೆ ಈ ಬಗ್ಗೆ ಮಾತನಾಡಿದ ಮನ್ಜೂರ್, ಅವಸರದಲ್ಲಿ ಯಾವುದೋ ಪೆನ್ ಡ್ರೈವ್ ಹಾಕಿಬಿಟ್ಟೆ ಅನ್ಸುತ್ತೆ, ನಾನು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ ಎಂದಿದ್ದಾನೆ.
-
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
ಲವ್ ಮಾಕ್ಟೇಲ್ 3 ವಿವಾದ: ನನ್ನ ಕಥೆಯ ದ್ವಿತೀಯಾರ್ಧ ನಕಲು: ಸಿನಿಮಾ ಬರಹಗಾರರೇ ಎಚ್ಚರ ಎಂದ ನಿರ್ದೇಶಕ ರಾಘವೇಂದ್ರ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications