7 ಗಂಡು ಮಕ್ಕಳ ಪಾಲಕರಿಗೆ ಒಬ್ಬ ಹೆಣ್ಣು ಮಗು ಸಿಕ್ಕರೂ, ಸಾಕುವ ಭಾಗ್ಯವಿಲ್ಲ!
ಧೋಲ್ಪುರ್, ಸೆಪ್ಟೆಂಬರ್ 26: ಹೊಲದಲ್ಲಿ ಬಿಸಾಡಿದ್ದ ಹೆಣ್ಣು ಮಗುವನ್ನು ರಕ್ಷಿಸಿದ ಮಾನವೀಯ ಅಂತಃಕರಣದ ದಂಪತಿ ಇದೀಗ ಕಾನೂನಿನ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇನು? ಮಗುವನ್ನು ರಕ್ಷಿಸುವುದೂ ಅಪರಾಧವೇ?
ಬಿಸಾಡಲ್ಪಟ್ಟ ಹೆಣ್ಣು ಮಗುವನ್ನು ರಕ್ಷಿಸುವುದು ಅಪರಾಧವಲ್ಲ, ಆದರೆ ಕಾನೂನು ಪ್ರಕಾರ ದತ್ತುಪಡೆಯದೆ ಅದನ್ನು ತಾನೇ ಸಾಕುವ ನಿರ್ಧಾರ ಕೈಗೊಳ್ಳುವುದು ಅಪರಾಧ ಎನ್ನುತ್ತದೆ ಕಾನೂನು.
ರಾಜಸ್ಥಾನದ ಧೋಲ್ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನೆಲೆಸಿರುವ ಲೀಲಾಧರ್ ಕುಶ್ವಾಹ ಮತ್ತು ಆತನ ಪತ್ನಿ ಸುಖ್ ದೇವಿ ದಂಪತಿಗೆ ಹೆಣ್ಣು ಮಕ್ಕಳೆಂದರೆ ಪಂಚಪ್ರಾಣ. ಆದರೆ ಅವರಿಗೆ ಜನರಿಸಿದ ಏಳೂ ಮಕ್ಕಳೂ ಗಂಡು ಮಕ್ಕಳೇ. ಇತ್ತೀಚೆಗೆ ಲೀಲಾಧರ್ ಹೊಲಕ್ಕೆ ತೆರಳಿದ್ದ ಸಮಯದಲ್ಲಿ ನವಜಾತ ಶಿಶುವೊಂದು ಅಳುತ್ತಿರುವುದು ಕೇಳಿಸಿದೆ. ಹತ್ತಿರ ಹೋಗಿ ನೋಡಿದರೆ ಹೆಣ್ಣು ಮಗುವೆಂಬ ಕಾರಣಕ್ಕೋ ಏನೋ, ಯಾರೋ ಕಟುಕರು ನವಜಾತ ಶಿಶುವನ್ನು ಬಿಸಾಡಿ ಹೋಗಿರುವುದು ಗಮನಕ್ಕೆ ಬಂದಿದೆ. ಹೆಣ್ಣು ಮಕ್ಕಳಿಗಾಗಿ ಪರಿತಪಿಸುತ್ತಿದ್ದ ದಂಪತಿಗಳಿ ಈ ಮಗುವನ್ನೆ ತಮ್ಮ ಮಗಳಂತೇ ಸಾಕುವುದಾಗಿ ಹೇಳಿ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದಾರೆ.
India. The land of ironies and capital of bureaucracy at its best: https://t.co/7jRgjfTlB9 SVP #BetiBachao via @htTweets
— Siddharth V Patankar (@sidpatankar) September 26, 2017
ಸದ್ಯ ದೇವರು ಕಣ್ಣುಬಿಟ್ಟ ಎಂದುಕೊಳ್ಳುವ ಹೊತ್ತಿಗೆ, ಇವರ ಸಂತೋಷವನ್ನು ನೋಡಲಾಗದವರ್ಯಾರೋ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಈ ಕುರಿತು ದೂರು ನೀಡದಿದ್ದಾರೆ.
ಮಗುವನ್ನು ಕಾನೂನು ಪ್ರಕಾರ ದತ್ತುಪಡೆಯದೆ, ಸುಮ್ಮನೆ ಇರಿಸಿಕೊಳ್ಳುವುದು ಅಪರಾಧ, ಬೇಕಿದ್ದರೆ ಕಾನೂನು ಪ್ರಕಾರ ಮಗುವನ್ನು ದತ್ತುಪಡೆಯಿರಿ, ಇಲ್ಲ, ಅದನ್ನು ಪೊಲೀಸರಿಗೆ ಹಿಂದಿರುಗಿಸಿ ಎಂದು ಮಕ್ಕಳ ಕಲ್ಯಾಣ ಇಲಾಖೆ ಹೇಳಿದೆ. ಅಕಸ್ಮಾತ್ ಕಾನೂನು ಪ್ರಕಾರ ದತ್ತು ಪಡೆಯುವುದಕ್ಕೆ ಹೋದರೂ ಮಗು ಇವರಿಗೆ ಸಿಕ್ಕೇ ಬಿಡುತ್ತದೆ ಎಂಬ ಖಾತ್ರಿ ಇಲ್ಲ. ಏಕೆಂದರೆ ಈಗಾಗಲೇ ಹೆಣ್ಣು ಮಗುವನ್ನು ದತ್ತುಪಡೆಯಲು ಸಾಕಷ್ಟು ದಂಪತಿಗಳು ಸಾಲಿನಲ್ಲಿದ್ದಾರೆ. ಮೊದಲೇ ಬೇಡಿಕೆ ಇಟ್ಟಿದ್ದವರಿಗೆ ಮಗುವನ್ನು ದತ್ತುಪಡೆಯುವ ಅವಕಾಶ ಸಿಗಬಹುದು. ಅಲ್ಲದೆ, ಮಗು ಸಿಕ್ಕ ದಿನದಿಂದ 2 ತಿಂಗಳವರೆಗೆ ದತ್ತುಪಡೆಯುವಂತಿಲ್ಲ. ಮಗುವಿನ ನಿಜವಾದ ಪಾಲಕರನ್ನು ಅದುವರೆಗೆ ಹುಡುಕಲಾಗುತ್ತದೆ ಮತ್ತು ಮಗುವಿಗೆ ಯಾವುದೇ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಇತ್ತೀಚೆಗೆ ತಾನೇ ಒಬ್ಬ ಗಂಡು ಮಗುವಿಗೆ ಜನ್ಮ ನೀಡಿರುವ ಸುಖ್ ದೇವಿ ಅವರು ಹೊಲದಲ್ಲಿ ಸಿಕ್ಕ ಹೆಣ್ಣು ಮಗುವಿಗೂ ಎದೆಹಾಲು ನೀಡಿ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಾರೆ. ಆದರೆ ಕಾನೂನಿನ ಸಂಕೀರ್ಣ ನಿಯಮಗಳು ಈ ತಾಯಿ-ಮಗಳ ನಿಷ್ಕಲ್ಮಶ ಪ್ರೇಮಕ್ಕೆ ತಿಲಾಂಜಲಿ ಇಟ್ಟುಬಿಡುತ್ತದೆಯಾ ಎಂಬುದನ್ನು ಕಾದು ನೋಡಬೇಕು!
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications