ಒಂದು ಸಿದ್ಧಾಂತ, ಒಬ್ಬ ವ್ಯಕ್ತಿ ದೇಶ ಕಟ್ಟಲು ಇಲ್ಲ ಒಡೆಯಲಾಗಲ್ಲ: ಭಾಗವತ್
ಒಬ್ಬ ವ್ಯಕ್ತಿ, ಒಂದು ಆಲೋಚನೆ, ಒಂದು ಗುಂಪು, ಒಂದು ಸಿದ್ಧಾಂತವು ದೇಶವನ್ನು ಮಾಡಲು ಅಥವಾ ಒಡೆಯಲು ಸಾಧ್ಯವಿಲ್ಲ ಎಂದು ಮೋಹನ್ ಭಾಗವತ್ ಹೇಳದ್ದಾರೆ.
ನಾಗಪುರ, ಫೆಬ್ರವರಿ 15: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಉತ್ತಮ ದೇಶಗಳು ಪ್ರಪಂಚದ ಅನೇಕ ವಿಚಾರಗಳನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಒಂದು ಸಿದ್ಧಾಂತ ಅಥವಾ ಒಬ್ಬ ವ್ಯಕ್ತಿ ದೇಶವನ್ನು ಕಟ್ಟಲು ಅಥವಾ ಒಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಾಗಪುರದಲ್ಲಿ ರಾಜರತ್ನ ಪುರಸ್ಕಾರ ಸಮಿತಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಒಬ್ಬ ವ್ಯಕ್ತಿ, ಒಂದು ಆಲೋಚನೆ, ಒಂದು ಗುಂಪು, ಒಂದು ಸಿದ್ಧಾಂತವು ದೇಶವನ್ನು ಮಾಡಲು ಅಥವಾ ಒಡೆಯಲು ಸಾಧ್ಯವಿಲ್ಲ. ಪ್ರಪಂಚದ ಉತ್ತಮ ದೇಶಗಳು ಎಲ್ಲಾ ರೀತಿಯ ಆಲೋಚನೆಗಳನ್ನು ಹೊಂದಿವೆ. ಅವುಗಳು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಹೊಂದಿವೆ ಮತ್ತು ಅವರು ಈ ಬಹುಸಂಖ್ಯೆಯ ವ್ಯವಸ್ಥೆಗಳೊಂದಿಗೆ ಬೆಳೆಯುತ್ತಿದ್ದಾರೆ ಎಂದು ಅವರು ಹೇಳಿದರು.
ನಾಗ್ಪುರದ ಮಾಜಿ ರಾಜಮನೆತನದ ಭೋಂಸ್ಲೆ ಕುಟುಂಬದ ಬಗ್ಗೆ ಮಾತನಾಡಿದ ಅವರು, ಸಂಘದ ಸಂಸ್ಥಾಪಕ ಕೆ ಬಿ ಹೆಡ್ಗೆವಾರ್ ಅವರ ಕಾಲದಿಂದಲೂ ಇದು ಆರ್ಎಸ್ಎಸ್ನೊಂದಿಗೆ ಸಂಪರ್ಕ ಹೊಂದಿದೆ. ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯ' (ಸಾರ್ವಭೌಮ ರಾಜ್ಯ) ಸ್ಥಾಪಿಸಿದರು ಮತ್ತು ಅವರ ಕಾಲದಲ್ಲಿ ದಕ್ಷಿಣ ಭಾರತವು ದುಷ್ಕೃತ್ಯಗಳಿಂದ ಮುಕ್ತವಾಗಿದ್ದರೆ, ಪೂರ್ವ ಮತ್ತು ಉತ್ತರ ಭಾರತವು ನಾಗ್ಪುರ ಭೋನ್ಸ್ಲೆ ಕುಟುಂಬದ ಆಳ್ವಿಕೆಯಲ್ಲಿ ದೌರ್ಜನ್ಯಗಳಿಂದ ಮುಕ್ತವಾಯಿತು ಎಂದು ಅವರು ಹೇಳಿದರು.

ಇತ್ತೀಚೆಗೆ ಇದೇ ಆರ್ಎಸ್ಎಸ್ನಿಂದ ಬಂದಿದ್ದ ಪ್ರಧಾನಿ ನರೇಂದ್ರ ಅವರ ಸಿದ್ಧಾಂತದಂತೆ ಮಾತನಾಡಿತ್ತಿದ್ದ ಮೋಹನ್ ಭಾಗವತ್ ಈಗ ಸ್ವಲ್ಪ ವಿಭಿನ್ನವಾಗಿ ಮಾತನಾಡುತ್ತಿದ್ದಾರೆ. ಅವರು ಇತ್ತೀಚೆಗೆ ಬ್ರಾಹ್ಮಣರ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿದ್ದರು. ಈ ಸಂಬಂಧ ದೂರು ಕೂಡ ದಾಖಲಾಗಿತ್ತು. ಆ ವೇಳೆ ದೂರು ನೀಡಿದ್ದ ದೂರುದಾರ ಮಯಾಂಕ್ ಪಾಠಕ್, "ಮೋಹನ್ ಭಾಗವತ್ ಜಿ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಾರೆ. ಜಾತಿ ವ್ಯವಸ್ಥೆಯನ್ನು ಪಂಡಿತರು ಸೃಷ್ಟಿಸಿದ್ದಾರೆ, ದೇವರಲ್ಲ ಎಂದಿದ್ದಾರೆ. ಇದು ಬ್ರಾಹ್ಮಣ ಸಮುದಾಯ ಅಪಮಾನವಾಗಿದ್ದು, ಈ ಪದಗಳು ಧಾರ್ಮಿಕ ಅಸಹಿಷ್ಣುತೆ ಮತ್ತು ಜಾತಿ ಪ್ರತ್ಯೇಕತೆಯನ್ನು ಹರಡುವ ಮೂಲಕ ರಾಜಕೀಯ ಲಾಭ ಪಡೆಯುವ ಪ್ರಯತ್ನವಾಗಿದೆ" ಎಂದು ಹೇಳಿದ್ದರು.












Click it and Unblock the Notifications