ದಸರಾಗೆ ಉದ್ಯೋಗಿಗಳಿಗೆ ಬೆಂಜ್ ಕಾರು, ಬೈಕ್ ಗಿಫ್ಟ್! ಎಷ್ಟು ಜನಕ್ಕೆ ಗೊತ್ತಾ?
ಸಾಮಾನ್ಯವಾಗಿ ದಸರಾ ಹಬ್ಬಕ್ಕೆ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಒಂದು ದಿನ ರಜೆ ಕೊಟ್ಟು, ಕೈಯಲ್ಲಿ ಒಂದು ಸ್ವೀಟ್ ಬಾಕ್ಸ್ ಇಡೋದು ಪದ್ಧತಿ ಪಾಲಿಸಿಕೊಂಡು ಬಂದಿವೆ. ಆದರೆ ಕಂಪನಿಯೊಂದು ಈ ದಸರಾಗೆ ಬೈಕ್ ಹಾಗೂ ದುಬಾರಿ ಕಾರುಗಳನ್ನೇ ಉದ್ಯೋಗಿಗಳಿಗೆ ಗಿಫ್ಟ್ ಆಗಿ ಕೊಟ್ಟಿದೆಯಂತೆ.
ಹೌದು, ಚೆನ್ನೈ ಮೂಲದ ಟೀಮ್ ಡಿಟೇಲಿಂಗ್ ಸೊಲೂಷನ್ಸ್ (Team Detailing Solutions) ಎನ್ನುವ ಖಾಸಗಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ದಸರಾ ಉಡುಗೊರೆಯಾಗಿ ವಿವಿಧ ಮಾದರಿಯ ಕಾರುಗಳನ್ನು ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದರಲ್ಲಿ ಒಂದೇ ಮಾದರಿಯ ಕಾರುಗಳಿಲ್ಲ. ಸಣ್ಣ ಕಾರಿನಿಂದ ಹಿಡಿದು ಬೆಂಜ್ ಕಾರು ಕೂಡ ಇದೆ ಎನ್ನಲಾಗಿದೆ.

ತನ್ನ ಕಂಪನಿಯಲ್ಲಿ ಬೆಸ್ಟ್ ಪರ್ಫಾರ್ಮೆನ್ಸ್ ತೋರಿದ ಉದ್ಯೋಗಿಗಳನ್ನು ಆಯ್ಕೆ ಮಾಡಿ, ಒಟ್ಟು 28 ಕಾರು ಹಾಗೂ 29 ಬೈಕ್ಗಳನ್ನು ಹಬ್ಬದ ದಿನವೇ ಗಿಫ್ಟ್ ಆಗಿ ಕೊಟ್ಟಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದು, ಈ ವಿಚಾರ ತಿಳಿದ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಕಂಪನಿ ನೀಡಿದ್ದ ಸ್ವೀಟ್ ಬಾಕ್ಸ್ಗಳನ್ನು ಗುರ್ ಎಂದು ಗುರಾಯಿಸಿ ನೋಡಿದ್ದಾರೆ.
ಉದ್ಯೋಗಿಗಳ ಅರ್ಹತೆ ಹಾಗೂ ಕಾರ್ಯಕ್ಷಮತೆ ಆಧಾರದಲ್ಲಿ ಹುಂಡೈ, ಟಾಟಾ, ಮಾರುತಿ ಸುಜುಕಿ, ಸ್ಕೋಡಾ ಸೇರಿದಂತೆ ದುಬಾರಿ ಮರ್ಸಿಡೆಸ್ ಬೆಂಜ್ ಕಾರುಗಳನ್ನೂ ಕಂಪನಿ ನೀಡಿದೆಯಂತೆ. ಇಂದು ಉದ್ಯೋಗಿಗಳಿಗೆ ಕಾರು ಹಾಗೂ ಬೈಕ್ಗಳನ್ನು ವಿತರಿಸಲಾಗಿದೆ.
ನಮ್ಮ ಕಂಪನಿಯ ಸಕ್ಸಸ್ನಲ್ಲಿ ಕೆಲಸಗಾರರ ಪಾಲು ದೊಡ್ಡದು. ಅದನ್ನು ಗುರತಿಸುವುದು ನಮ್ಮ ಕರ್ತವ್ಯ. ಎಷ್ಟೋ ಉದ್ಯೋಗಿಗಳಿಗೆ ತಮ್ಮ ಜೀವನದಲ್ಲಿ ಕಾರು ಅಥವಾ ಬೈಕ್ ಖರೀದಿಸುವುದು ದೊಡ್ಡ ಕನಸು. ಹಾಗಾಗಿ ಉತ್ತಮ ಕೆಲಸ ಮಾಡಿದ ಉದ್ಯೋಗಿಗಳನ್ನು ಗುರುತಿಸಿ, ಅವರ ಕನಸು ನನಸು ಮಾಡಿದ್ದೇವೆ. ಇದು ಅವರಿಗೆ ಪ್ರೋತ್ಸಾಹವೂ ಹೌದು ಎಂದು ಕಂಪನಿ ಮುಖ್ಯಸ್ಥರು ಹೇಳಿದ್ದಾರೆ ಎಂದು ವರದಿಯಾಗಿದೆ.

ಈ ಕಂಪನಿಯ ಉದ್ಯೋಗಿಗಳಿಗೆ ಮದುವೆಯಾಗುವುದಾದರೆ 50,000 ರೂಪಾಯಿ ಪ್ರೋತ್ಸಾಧನ ಕೂಡ ನೀಡುತ್ತಿದೆಯಂತೆ. ಇದನ್ನು ಈ ವರ್ಷದಿಂದ 1 ಲಕ್ಷ ರೂಪಾಯಿಗೆ ಹೆಚ್ಚಿಸಿದೆ ಎಂದು ಹೇಳಲಾಗಿದೆ.
ಒಂಬತ್ತು ದಿನ ರಜೆ ಕೊಟ್ಟ ಮೀಶೋ: ಇ ಕಾಮರ್ಸ್ ಕ್ಷೇತ್ರದ ಮೀಶೋ ಕಂಪನಿ ತನ್ನ ಉದ್ಯೋಗಿಗಳಿಗೆ ಒಂದಲ್ಲ, ಎರಡಲ್ಲ, ಬರೋಬ್ಬರಿ 9 ದಿನಗಳವರೆಗೆ ರಜೆ ನೀಡಿ ಚಿಲ್ ಮಾಡುವಂತೆ ಹೇಳಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಣೆ ಹಂಚಿಕೊಂಡಿರುವ ಮೀಶೋ, ಯಾವುದೇ ಲ್ಯಾಪ್ಟಾಪ್ಗಳಿಲ್ಲ, ಯಾವುದೇ ಮೆಸೇಜ್, ಇಮೇಲ್ಸ್, ಮೀಟಿಂಗ್ಗಳು ಅಥವಾ ಸ್ಟಾಂಡಪ್ ಕಾಲ್ಸ್ ಕೂಡ ಇರಲ್ಲ, ಒಂಬತ್ತು ದಿನಗಳ ಕಾಲ ಕೆಲಸ ವಿಚಾರಗಳು ಏನೂ ಇಲ್ಲ ಎಂದು ಹೇಳಿದೆ.
ಅಕ್ಟೋಬರ್ 26ರಿಂದ ನವೆಂಬರ್ 3ರವರೆಗೆ ಎಲ್ಲರಿಗೂ ರೀಸೆಟ್ ಹಾಗೂ ರೀಚಾರ್ಜ್ ಬ್ರೇಕ್. ಈ ವರ್ಷ ನಾವು ವ್ಯಾಪಾರದಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದು, ಈಗ ಸಂಪೂರ್ಣವಾಗಿ ನಮ್ಮ ಬಗ್ಗೆ ಯೋಚಿಸುವ ಸಮಯ. ಈ ವಿರಾಮವು ನಮ್ಮ ಮನಸ್ಸು, ದೇಹಕ್ಕೆ ಆರಾಮ ನೀಡುವ ಜೊತೆಗೆ ಫ್ರೆಶ್ ಹಾಗೂ ಹೊಸ ಚೈತನ್ಯದಿಂದ ಮುಂದಿನ ವರ್ಷಕ್ಕೆ ಸಜ್ಜಾಗುವ ಸಮಯ ಎಂದು ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications