ಆಂಧ್ರ ಪ್ರದೇಶದಲ್ಲಿ ದೋಣಿ ದುರಂತ, ಭಾರಿ ಸಾವು-ನೋವು ಶಂಕೆ
ಅಮರಾವರಿ, ಮೇ 15: ಆಂಧ್ರ ಪ್ರದೇಶದ ಗೋದಾವರಿ ನದಿಯಲ್ಲಿ ಇಂದು ಸಂಜೆ ವೇಳೆ ಸಂಭವಿಸಿರುವ ದೋಣಿ ದುರಂತದಲ್ಲಿ 30 ಕ್ಕೂ ಹೆಚ್ಚು ಜನ ಸಾವಿಗೀಡಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಗೋದಾವರಿ ನದಿಯಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ತಲೆಕೆಳಗಾದ ಪರಿಣಾಮ ಪ್ರಯಾಣಿಕರು ನೀರ ಪಾಲಾಗಿದ್ದು ಈ ವರೆಗೆ ಕೇವಲ 17 ಜನರನ್ನಷ್ಟೆ ರಕ್ಷಿಸಲಾಗಿದ್ದು ಉಳಿದವರು ಇನ್ನೂ ದೊರೆತಿಲ್ಲ ಹೆಚ್ಚಿನ ಜನರು ದೋಣಿ ಅಡಿ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ರಕ್ಷಣಾ ಕಾರ್ಯಕಗಳು ಭರದಿಂದ ಸಾಗಿದ್ದು, ಪ್ರಯಾಣಿಕರ ರಕ್ಷಣೆಗೆ ಸತತ ಪ್ರಯತ್ನ ಮಾಡಲಾಗುತ್ತಿದೆ. ಕೇವಲ ಒಂದು ವಾರದ ಮುಂಚೆಯಷ್ಟೆ ಗೋದಾವರಿ ನದಿಯಲ್ಲಿಯೇ ದೋಣಿ ಮುಗುಚಿ ಕೆಲವರು ಸಾವನ್ನಪ್ಪಿದ್ದರು












Click it and Unblock the Notifications