8th Pay Commission: ಸರ್ಕಾರಿ ನೌಕರರ ಮೂಲ ವೇತನ ₹34,500ಗೆ ಹೆಚ್ಚಳ ನಿರೀಕ್ಷೆ
ಬೆಂಗಳೂರು, ಡಿಸೆಂಬರ್ 06: ದೇಶಾದ್ಯಂತ ಒಂದು ಕೋಟಿಗೂ ಹೆಚ್ಚು ಇರುವ ಕೇಂದ್ರ ಸರ್ಕಾರಿ ನೌಕರರ ಹಣದುಬ್ಬರವನ್ನು 7ನೇ ವೇತನ ಆಯೋಗದ ಭತ್ಯೆ ಏರಿಕೆಗಳು ನಿಭಾಯಿಸುತ್ತಿವೆ. ನೌಕರರು ಹಣದುಬ್ಬರ ನಿರ್ವಹಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಗಾಗ ಮಹತ್ವದ ನಿರ್ಧಾರ ಕೈಗೊಳ್ಳುತ್ತದೆ. 2026ರಲ್ಲಿ ಜಾರಿಯಾಗಲಿರುವ 8ನೇ ವೇತನ ಆಯೋಗದಡಿ ಮೂಲ ವೇತನ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ನೌಕರರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕೇಂದ್ರ ಸರ್ಕಾರವು ಪ್ರತಿ ಹತ್ತು ವರ್ಷಗಳಿಗೊಮ್ಮೆ ವೇತನ ಆಯೋಗ ಜಾರಿಗೊಳಿಸುತ್ತದೆ. 2016ರಲ್ಲಿ ಜಾರಿಯಾಗಿದ್ದ 7ನೇ ವೇತನ ಆಯೋಗವು ಮುಂದಿನ ಒಂದು ವರ್ಷದಲ್ಲಿ ಕೊನೆಗೊಳ್ಳಲಿದೆ. 2026ರ ಜನವರಿಯಲ್ಲಿ 8ನೇ ವೇತನ ಆಯೋಗ ಜಾರಿ ಆಗಬೇಕಿದೆ. ನಿರೀಕ್ಷೆಯಂತೆ ಶೀಪಾರಸಿನ ಪ್ರಕ್ರಿಯೆ ಪೂರ್ಣಗೊಂಡು ಅನುಷ್ಠಾನಗೊಂಡರೆ ನೌಕರರ ಮೂಲಕ ವೇತನ, ತುಟ್ಟಿಭತ್ಯೆ, ತುಟ್ಟಪಿ ಪರಿಹಾರದಲ್ಲಿ ಭಾರೀ ಬದಲಾವಣೆಗಳು ಆಗಲಿವೆ.

ಮೂಲವೇತನ 34,500 ರೂಪಾಯಿಗೆ ಹೆಚ್ಚಳ
ಸರ್ಕಾರಿ ನೌಕರರು 8ನೇ ವೇತನ ಆಯೋಗದಡಿ ಮೂಲ ವೇತನ 18,000 ರೂಪಾಯಿಯಿಂದ 34,500 ರೂಪಾಯಿಗೆ ಏರಿಕೆ ಆಗಬಹುದೆಂದು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಇಷ್ಟು ಪ್ರಮಾಣದಲ್ಲಿ ಏರಿಕೆ ಆಗಲು ಸರ್ಕಾರ ನೌಕರರು ಯೂನಿಯನ್ಗಳು ನೀಡಿರುವ ಮನವಿ ಒಪ್ಪಬೇಕು. ಅದರಂತೆ ಫಿಟ್ಮೆಂಟ್ ಅಂಶವನ್ನು 2.86ರಷ್ಟು ಪರಿಗಣಿಸಬೇಕು. ಅಂದಾಗ ಮೂಲ ವೇತನ ಗರಿಷ್ಠ ಹೆಚ್ಚಳ ಕಾಣಲಿದೆ.
ಇಲ್ಲಿ ನೌಕರರ ಬೇಸರಕ್ಕೆ ಕಾರಣವಾದ ಅಂಶವೆಂದರೆ, ಈವರೆಗೂ ಕೇಂದ್ರ ಸರ್ಕಾರ, ಸಚಿವಾಲಯವಾಗಲಿ ಅಥವಾ ಸಂಬಂಧಿಸಿದ ಕೇಂದ್ರ ಸರ್ಕಾರಿ ನೌಕರರೆ ಆಗಲಿ 8ನೇ ವೇತನ ಆಯೋಗದ ಜಾರಿ ಕುರಿತು ಅಧಿಕೃತ ಯಾವೊಂದು ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ಸರ್ಕಾರ ಯಾವ ಈ ಬಗ್ಗೆ ಘೋಷಣೆ ಮಾಡಲಿದೆ ಎಂದು ಕಾಯುತ್ತಿದ್ದಾರೆ.
ಹಣದುಬ್ಬರ ಎದುರಿಸಲು ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಭತ್ಯೆ ಏರಿಕೆಗಳ ಸೂತ್ರ ನವೀಕರಿಬಹುದು. ಈಗಾಗಲೇ ಏಳನೇ ವೇತನ ಆಯೋಗದಡಿ ಕಾಲ ಕಾಲಕ್ಕೆ ತುಟ್ಟಿಭತ್ಯೆ, ತುಟ್ಟಿ ಪರಿಹಾರ ನೀಡುತ್ತಾ ಬರಲಿದೆ. ಇವುಗಳನ್ನು ಸೂತ್ರವಾಗಿಟ್ಟುಕೊಂಡು ಎಂಟನೇ ವೇತನ ಆಯೋಗದಲ್ಲಿ ಒಂದಷ್ಟು ನವೀಕರಣ ಮಾಡಬಹುದು ಅಂತಲೂ ನೌಕರರು ಅಂದಾಜಿಸಿದ್ದಾರೆ.

ಈ ಹಿಂದೆಯು ಮೂಲ ವೇತನ ಏರಿಕೆ
ಒಂಬತ್ತು ವರ್ಷಗಳ ಹಿಂದೆ ಸರ್ಕಾರ 7ನೇ ವೇತನ ಆಯೋಗ ಪ್ರಕಟಿಸುವಬ ಹೊತ್ತಿನಲ್ಲಿ ನೌಕರರ ಮೂಲ ವೇತನವು ಶೇಕಡಾ 23ರಷ್ಟು ಏರಿಕೆ ಆಗಿತ್ತು. ಅದೇ ಪದ್ಧತಿ 8ನೇ ವೇತನ ಆಯೋಗ ಅನುಷ್ಠಾನ ಹೊತ್ತಿನಲ್ಲೂ ನಡೆಯುತ್ತದೆ ಎಂದು ನೌಕರರು ಭಾವಿಸಿದ್ದಾರೆ. ಅವರು ಅಂದುಕೊಂಡಂತೆ ಆದಲ್ಲಿ ಕನಿಷ್ಠ ಮೂಲ ವೇತನ 34,500 ರೂ.ಗೆ ಹೆಚ್ಚಾಗಬಹುದು. ಇದೆಲ್ಲದರ ಅಪ್ಡೇಟ್ಗಾಗಿ ನೌಕರರು ಕುತೂಹಲದಿಂದ ಕಾಯುತ್ತಿದ್ದಾರೆ. ಭವಿಷ್ಯದಲ್ಲಿ ಸುಧಾರಿತ ಆರ್ಥಿಕ ನಿಯಮಗಳು ಜಾರಿಗೆ ಬರಲಿವೆ ಎಂದು ನಿರೀಕ್ಷಿಸುತ್ತಿದ್ದಾರೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications