2.30 ಕೋಟಿ ಮೌಲ್ಯದ 8.3 ಕೆ.ಜಿ. ಚಿನ್ನ ವಶಕ್ಕೆ
ರಾಮೇಶ್ವರಂ, ಜನವರಿ 1: ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಭಾನುವಾರ 8.3 ಕೆ.ಜಿ. ಚಿನ್ನದ ಬಿಸ್ಕತ್ ಗಳನ್ನು ಭಾನುವಾರ ವಶಪಡಿಸಿಕೊಂಡಿದ್ದಾರೆ. 2.30 ಕೋಟಿ ರುಪಾಯಿ ಮೌಲ್ಯದ ಚಿನ್ನವನ್ನು ಶ್ರೀಲಂಕಾದಿಂದ ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಮದುರೈ-ರಾಮೇಶ್ವರಂ ಹೆದ್ದಾರಿಯಲ್ಲಿ ಚಿನ್ನದ ಕಳ್ಳಸಾಗಣೆ ನಡೆಯುತ್ತಿದೆ ಎಂದು ಖಚಿತ ಮಾಹಿತಿಯನ್ನು ಆಧರಿಸಿದ ಅಧಿಕಾರಿಗಳು, ನಾಗಚಿ ಎಂಬಲ್ಲಿ ಕಾರನ್ನು ತಪಾಸಣೆ ಮಾಡಿ, ಚಿನ್ನದ ಬಿಸ್ಕತ್ ವಶಕ್ಕೆ ಪಡೆದಿದ್ದಾರೆ. ಮುಜ್ಬುರ್ ರೆಹಮಾನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.[98 ಕೋಟಿ ರುಪಾಯಿಗೆ ನಕಲಿ ರಸೀದಿ ಸೃಷ್ಟಿಸಿ ಸಿಕ್ಕಿಬಿದ್ದ ವ್ಯಾಪಾರಿ]

ಕಾರಿನಲ್ಲಿ ಆತ ಒಬ್ಬನೇ ಇದ್ದ. ಆ ಕಾರು ಉಚಿಪುಲಿಯ ಎನ್ಮನಂಕೊಂಡಂ ಹಳ್ಳಿಯಿಂದ ಬರುತ್ತಿತ್ತು. ಶ್ರೀಲಂಕಾದಿಂದ ಕಳ್ಳಸಾಗಣೆ ಮಾಡಿದ ಚಿನ್ನವನ್ನು ತಿರುಚಿರಾಪಲ್ಲಿಗೆ ಸಾಗಿಸಲಾಗುತ್ತಿತ್ತು. ಆ ವೇಲೆ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.[ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 45 ಕೆ.ಜಿ. ಚಿನ್ನ ದೋಚಿ ಪರಾರಿ]
ಕಾರಿನಲ್ಲಿ ಚಿನ್ನದ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ನಂತರ ಹೆಚ್ಚಿನ ವಿಚಾರಣೆಗಾಗಿ ಟುಟಿಕೊರೀನ್ ಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications