ಏಳನೇ ವೇತನ ಆಯೋಗದ ಪ್ರಕಾರ ಎಚ್ಆರ್ ಎ ಬಾಕಿ ಲೆಕ್ಕ ಹಾಕೋದು ಹೀಗೆ
ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಎಚ್ಆರ್ಎ ಎಷ್ಟು ಹೆಚ್ಚಾಗಲಿದೆ. ಒಟ್ಟು ಬಾಕಿ ಮೊತ್ತ ಎಷ್ಟು ಬರಬೇಕು..ಎಂಬುದರ ಲೆಕ್ಕಾಚಾರ ತಿಳಿಯಲು ಅನುಕೂಲವಾಗಲು ಇಲ್ಲಿ ಲಿಂಕ್ ಕೊಡಲಾಗಿದೆ. ಅದನ್ನು ಬಳಸಿ ಲೆಕ್ಕಾಚಾರ ತಿಳಿಯಬಹುದು
ಬೆಂಗಳೂರು, ಮೇ 10: ಏಳನೇ ವೇತನ ಆಯೋಗದಿಂದ ಒಟ್ಟು 196 ಭತ್ಯೆಗಳನ್ನು ಕೇಂದ್ರ ಸರಕಾರಕ್ಕೆ ಶಿಫರಸು ಮಾಡಲಾಗಿದೆ. ಅದರಲ್ಲಿ ಎಚ್ ಆರ್ಎ, ತುಟ್ಟಿ ಭತ್ಯೆ ಮತ್ತಿತರ ಭತ್ಯೆಗಳು ಒಳಗೊಂಡಿವೆ. ವೇತನ ಸಮಿತಿಯು ಭತ್ಯೆಗಳ ಬಗ್ಗೆ ಮಾಡಿರುವ ವರದಿಯು ಸಂಪುಟದ ಮುಂದೆ ಬರಲು ಇನ್ನೂ ಎರಡು ವಾರ ಇದೆ.
ನಿವೃತ್ತರು, ರಕ್ಷಣಾ ವಲಯದ ನಿವೃತ್ತರು, ಕುಟುಂಬ ಪಿಂಚಣಿ ಹಾಗೂ ರಕ್ಷಣಾ ವಲಯದ ಅಂಗವಿಕಲ ಪಿಂಚಣಿಗೆ ಸಂಬಂಧಿಸಿದ ಶಿಫಾರಸುಗಳಿಗೆ ಮೇ 4ರಂದು ಸಂಪುಟವು ಅಸ್ತು ಎಂದಿತ್ತು. 2016-17ನೇ ಸಾಲಿಗೆ ವರದಿಯ ಶಿಫಾರಸಿನಿಂದ ಹೆಚ್ಚುವರಿಯಾಗಿ ಹೊರೆಯಾಗುವ 84,933 ಕೋಟಿ ರುಪಾಯಿ ಹಣಕ್ಕೆ ಸಂಪುಟವು ಕಳೆದ ಜೂನ್ ನಲ್ಲಿ ಒಪ್ಪಿಗೆ ಸೂಚಿಸಿತ್ತು. ಅದರಲ್ಲಿ 2015-16ನೇ ಸಾಲಿನ ಎರಡು ತಿಂಗಳ ಬಾಕಿ ಸಹ ಒಳಗೊಂಡಿತ್ತು.[55 ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಳ ಏರಿಕೆ]

ನಿವೃತ್ತರಿಗೆ ಸಂಬಂಧಿಸಿದ ಹಾಗೆ ಎಲ್ಲ ಪ್ರಸ್ತಾವನೆಗಳನ್ನು ಒಪ್ಪಲಾಗಿದೆ. ಜನವರಿ 1, 2016ರಿಂದ ಪೂರ್ವಾನ್ವಯ ಆಗುವಂತೆ ಬಾಕಿ ಹಣವನ್ನು ನಿವೃತ್ತರಿಗೆ ನೀಡಲಾಗುವುದು ಎಂದು ಆರ್ಥಿಕ ಸಚಿವಾಲಯ ತಿಳಿಸಿತ್ತು. ಏಳನೇ ವೇತನ ಆಯೋಗದ ಶಿಫಾರಸುಗಳಿಗೆ ಹಲವು ಮಾರ್ಪಾಟು ಮಾಡಲಾಗಿದೆ.
ಅದ್ದರಿಂದ ಎಚ್ಆರ್ಎ ಲೆಕ್ಕಾಚಾರ ತಿಳಿಯುವುದಕ್ಕೆ ಕ್ಯಾಲ್ಕುಲೇಟರ್ ಬೇಕಾಗುತ್ತದೆ. ಶಿಫಾರಸಿನ ಅನ್ವಯ ಎಷ್ಟು ಮೊತ್ತ ನಿರೀಕ್ಷಿಸಬಹುದು ಎಂಬುದಕ್ಕೆ ಏಳನೇ ವೇತನ ಆಯೋಗವೇ ಒಂದು ಕ್ಯಾಲ್ಕುಲೇಟರ್ ವ್ಯವಸ್ಥೆ ಮಾಡಿದೆ. ನೀವು ಅದಕ್ಕೆ ಒದಗಿಸುವ ಅಂಕಿಯ ಆಧಾರದಲ್ಲಿ ಹೆಚ್ಚಳವಾಗಬಹುದಾದ ಮೊತ್ತವನ್ನು ಅದು ತೋರಿಸುತ್ತದೆ.[ಮನೆ ಬಾಡಿಗೆ ಭತ್ಯೆ ಹೆಚ್ಚಳ? ಕೇಂದ್ರ ನೌಕರರಿಗೆ ಬಂಪರ್ ಕೊಡುಗೆ]
ಆ ಲೆಕ್ಕಾಚಾರ ತಿಳಿದುಕೊಳ್ಳುವುದಕ್ಕೆ ಆರನೇ ವೇತನ ಆಯೋಗದ ಮೂಲ ವೇತನ, ಅದರಲ್ಲಿ ಗ್ರೇಡ್ ಪೇ ಒಳಗೊಂಡಿರಬೇಕು. ಪೇ ಬ್ಯಾಂಡ್ ಹಾಗೂ ಗ್ರೇಡ್ ಪೇ ಆಯ್ಕೆ ಮಾಡಿಕೊಳ್ಳಬೇಕು. ಆ ನಂತರ ಎಚ್ಆರ್ಎ ಪರ್ಸೆಂಟೇಜ್ ಹಾಕಬೇಕು. ಇನ್ನು ಬಾಕಿ ಹಣದ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ, ಏಳನೇ ವೇತನ ಆಯೋಗದ ಶಿಫಾರಸಿನ ಅನ್ವಯ ಯಾವ ದಿನದಿಂದ ಪರಿಷ್ಕೃತ ವೇತನಕ್ಕೆ ನೀವು ಅರ್ಹರು ಎಂಬುದನ್ನು ತಿಳಿದುಕೊಳ್ಳಬೇಕು.
ಎಚ್ಆರ್ಎ ಲೆಕ್ಕಾಚಾರದ ಬಗ್ಗೆಯೇ ತಿಳಿದುಕೊಳ್ಳಬೇಕು ಅಂದರೆ ಈ ಲಿಂಕ್ ಕ್ಲಿಕ್ ಮಾಡಿ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications