ಲಸಿಕೆಗಾಗಿ ಮೊದಲ ದಿನವೇ 79.65 ಲಕ್ಷ ಜನರ ನೋಂದಣಿ!
ನವದೆಹಲಿ, ಏಪ್ರಿಲ್ 28; ಭಾರತದಲ್ಲಿ ಮತ್ತೊಂದು ಸುತ್ತಿನ ಲಸಿಕಾ ಅಭಿಯಾನಕ್ಕೆ ತಯಾರಿ ಆರಂಭಗೊಂಡಿದೆ. ದೇಶದಲ್ಲಿ ಮೇ 1 ರಿಂದ 18 ರಿಂದ 45 ವರ್ಷದೊಳಗಿನ ಜನರು ಲಸಿಕೆಯನ್ನು ಪಡೆಯಬಹುದಾಗಿದೆ.
ಕೋವಿಡ್ ಸೋಂಕಿನ ವಿರುದ್ಧದ ಲಸಿಕೆಯನ್ನು ಪಡೆಯುವವರು ಏಪ್ರಿಲ್ 28ರಿಂದ ನೋಂದಣಿ ಮಾಡಿಸಬಹುದು. ಆರೋಗ್ಯ ಸೇತು ಅಪ್ಲಿಕೇಶನ್, ಕೋವಿನ್ ಸೇರಿದಂತೆ ವಿವಿಧ ಅಪ್ಲಿಕೇಶನ್ ಮೂಲಕ ಆನ್ಲೈನ್ನಲ್ಲಿ ನೋಂದಣಿ ಆರಂಭಗೊಂಡಿದೆ.
ಬುಧವಾರ ಸಂಜೆ 4 ಗಂಟೆಗೆ ನೋಂದಣಿ ಆರಂಭಿಸಲಾಯಿತು. ದೇಶದ ಜನರು ಒಮ್ಮೆಲೇ ನೋಂದಣಿಗೆ ಮುಗಿಬಿದ್ದಿದ್ದರಿಂದ ಕೋವಿನ್ ಮತ್ತು ಆರೋಗ್ಯ ಸೇತು ಅಪ್ಲಿಕೇಶನ್ನಲ್ಲಿ ಕೆಲಕಾಲ ಸಮಸ್ಯೆ ಉಂಟಾಯಿತು. ಬಳಿಕ ಅದು ಸರಿ ಹೋಯಿತು.

ದೇಶದಲ್ಲಿ ಮೊದಲ ದಿನ 79.65 ಲಕ್ಷ ಜನರು ಲಸಿಕೆ ಪಡೆಯಲು ನೋಂದಣಿ ಮಾಡಿಸಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್. ಎಸ್. ಶರ್ಮಾ ಹೇಳಿದ್ದಾರೆ. ಪ್ರತಿ ಸೆಕೆಂಡ್ಗೆ 55 ಹಿಟ್ಗಳನ್ನು ಅಪ್ಲಿಕೇಶನ್ ಪಡೆದಿದ್ದು, ಅದಕ್ಕೆ ತಕ್ಕಂತೆ ಅದು ಕಾರ್ಯ ನಿರ್ವಹಣೆ ಮಾಡಿದೆ.
4 ಗಂಟೆಗೆ ನೋಂದಣಿ ಆರಂಭವಾಗುತ್ತಿದ್ದಂತೆ ಕೋವಿನ್ ಅಪ್ಲಿಕೇಶನ್ನಲ್ಲಿ ಮೊಬೈಲ್ ಓಟಿಪಿ ಬರುತ್ತಿಲ್ಲ ಎಂದು ಜನರು ದೂರಿದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಗಳು ಆರಂಭವಾಯಿತು.
There have been 79,65,720 registrations on Co-WIN today, most of these in the last three hours (16:00-19:00) and mostly of 18-44 age group. We have seen a traffic of 55,000 hits per second. System functioning as expected. pic.twitter.com/AgLt3fMB7Z
— RS Sharma (@rssharma3) April 28, 2021
"ಹಿಂದಿನ ನೋಂದಣಿಗಿಂತ ಎರಡು ಪಟ್ಟು ಜನರು ಇಂದು ನೋಂದಣಿ ಮಾಡಿಸಬಹುದು ಎಂದು ನಾವು ಅಂದಾಜಿಸಿದ್ದೆವು. ನಮ್ಮ ಸರ್ವರ್ಗಳು ವೇಗಕ್ಕೆ ತಕ್ಕಂತೆ ಕಾರ್ಯ ನಿರ್ವಹಣೆ ಮಾಡಿವೆ" ಎಂದು ಆರ್. ಎಸ್. ಶರ್ಮಾ ಹೇಳಿದರು.
ಅಪ್ಲಿಕೇಶನ್ ಮೂಲಕ ಲಾಗಿನ್ ಆಗುವ ವ್ಯಕ್ತಿ ತಾನು ಸೇರಿದಂತೆ ಕನಿಷ್ಠ ಮೂವರು ಕುಟುಂಬ ಸದಸ್ಯರ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ. ನೋಂದಣಿ ಬಳಿಕ ಹತ್ತಿರದ ಸರ್ಕಾರಿ, ಖಾಸಗಿ ಲಸಿಕಾ ಕೇಂದ್ರದ ಮಾಹಿತಿ ಜನರಿಗೆ ಸಿಗಲಿದೆ.
ಜನರು ಆನ್ಲೈನ್ ಮೂಲಕ ನೋಂದಣಿ ಮಾಡುವುದರಿಂದ ಲಸಿಕಾ ಕೇಂದ್ರಗಳ ಬಳಿ ಸಾಮಾಜಿಕ ಅಂತರ ಕಾಪಾಡುವುದು, ಜನಜಂಗುಳಿ ತಡೆಯಲು ಸಾಧ್ಯವಾಗಲಿದೆ. ಹತ್ತಿರದ ಲಸಿಕಾ ಕೇಂದ್ರದ ವಿವರ ಜನರಿಗೆ ಅಲ್ಲಿಯೇ ಸಿಗಲಿದೆ.
-
Buttermilk Summer Benefits: ಪ್ರತಿದಿನ ಮಜ್ಜಿಗೆ ಕುಡಿಯುವವರು ತಪ್ಪದೇ ತಿಳಿದುಕೊಳ್ಳಬೇಕಾದ ವಿಷಯಗಳು -
Summer Heat Alert: ಮಕ್ಕಳ ಆರೋಗ್ಯ ಕಾಪಾಡಲು ಪೋಷಕರಿಗೆ 7 ಮುಖ್ಯ ಸಲಹೆಗಳು -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು












Click it and Unblock the Notifications