Anand Mahindra: ಕೆಲಸದ ಟೈಮಿಂಗ್ಸ್ ಬಗ್ಗೆ ಆನಂದ್ ಮಹೀಂದ್ರಾ ಅಚ್ಚರಿಯ ಹೇಳಿಕೆ!
ಕೆಲಸದ ಅವಧಿಯ ಬಗ್ಗೆ ಹಾಗೂ ಭಾನುವಾರವೂ ಕೆಲಸ ಮಾಡುವ ಬಗ್ಗೆ ಮಹೀಂದ್ರಾ ಗ್ರೂಪ್ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ಭಾರತದಲ್ಲಿ ಕೆಲಸದ ಅವಧಿಯ ಬಗ್ಗೆ ಕಳೆದ ಆರೇಳು ತಿಂಗಳಿನಿಂದ ಭರ್ಜರಿ ಚರ್ಚೆ ನಡೆಯುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಯುವಕರು ವಾರಕ್ಕೆ 70 ದಿನ ಕೆಲಸ ಮಾಡಬೇಕು ಅಂತ ಹೇಳುವುದರೊಂದಿಗೆ ಪ್ರಾರಂಭವಾಯಿತು. ಅದನ್ನು ಮೀರಿಸುವಂತೆ ಎಲ್ ಆ್ಯಂಡ್ ಟಿ ಚೇರ್ಮ್ಯಾನ್ ಸುಬ್ರಮಣಿಯನ್ ಅವರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು. ಭಾನುವಾರವೂ ಕೆಲಸ ಮಾಡಿ ಎಷ್ಟು ಅಂತ ಹೆಂಡ್ತಿ ಮುಖವನ್ನು ನೋಡ್ತೀರಿ ಎಂದಿದ್ದರು. ಇದೀಗ ಈ ಚರ್ಚೆಗಳಿಗೆ ಮಹೀಂದ್ರಾ ಅವರು ಹೊಸ ತಿರುವು ಕೊಟ್ಟಿದ್ದಾರೆ. ಅವರ ಅಭಿಪ್ರಾಯವನ್ನು ಹಲವು ಉದ್ಯೋಗಿಗಳು ಮೆಚ್ಚಿಕೊಂಡಿದ್ದಾರೆ. ಆನಂದ್ ಅವರ ಮಜವಾದ ರಿಪ್ಲೈಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಕೆಲಸದ ಅವಧಿ ಎಷ್ಟಾಗಿರಬೇಕು ಎನ್ನುವ ಬಗ್ಗೆ ಚರ್ಚೆ. ವಾದ ವಿವಾದ ನಡಿಯುತ್ತಲ್ಲೇ ಇದೆ. ಕೆಲವು ಕಂಪನಿಗಳ ಮಾಲೀಕರು ಉದ್ಯೋಗಿಗಳು ಕತ್ತೆತರ ದುಡಿಯಬೇಕು.. ಗಂಟೆ ಗಟ್ಟಲೆ ಕೆಲಸ ಮಾಡಬೇಕು. ಭಾನುವಾರವೂ ಕೆಲಸ ಮಾಡಬೇಕು ಅಂತ ಹೇಳುತ್ತಿದ್ದರೆ. ಈ ರೀತಿ ಗಂಟೆಗಟ್ಟಲೆ ಕೆಲಸ ಮಾಡಿದರೆ ಉದ್ಯೋಗಿಗಳ ಪರಿಸ್ಥಿತಿ ಏನಾಗಬೇಕು. ಅವರ ಪರ್ಸನಲ್ ಲೈಫ್ ಏನಾಗಬೇಕು. ಪರ್ಸನಲ್ ಲೈಫ್ ಹಾಗೂ ವರ್ಕ್ ಲೈಫ್ಗಳ ನಡುವೆ ಬ್ಯಾಲೆನ್ಸ್ ಇರಬೇಕು ಎನ್ನುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಮುಖ್ಯವಾಗಿ ಕಂಪನಿಯ ಮಾಲೀಕರು ಹಾಗೂ ಉದ್ಯೋಗಿಗಳ ಸೌಲಭ್ಯ ಹಾಗೂ ವೇತನದ ಬಗ್ಗೆಯೂ ಚರ್ಚೆ ಆಗಿರೋದು ಇದೆ.

ಈಚೆಗೆ ಎಲ್ ಆ್ಯಂಡ್ ಟಿ ಚೇರ್ಮ್ಯಾನ್ ಸುಬ್ರಮಣಿಯನ್ ಅವರು ವಾರಕ್ಕೆ 90 ದಿನ ಕೆಲಸ ಮಾಡಿ. ಭಾನುವಾರ ರಜೆ ಯಾಕೆ ಅಂತ. ಮನೆಯಲ್ಲಿ ಹೆಂಡ್ತಿ ಮುಖನ ಎಷ್ಟೂ ಅಂತ ನೋಡ್ತೀರಿ ಅಂತೆಲ್ಲ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ಆನಂದ್ ಮಹೀಂದ್ರ ಅವರು ಮಾತನಾಡಿದ್ದಾರೆ. ವಿಕಸಿತ್ ಭಾರತ ಯುವ ನಾಯಕರ ಸಂವಾದ ಕಾರ್ಯಕ್ರಮದಲ್ಲಿ, ಫಸ್ಟ್ಪೋಸ್ಟ್ ಮ್ಯಾನೇಜಿಂಗ್ ಎಡಿಟರ್ ಪಾಲ್ಕಿ ಶರ್ಮಾ ಅವರ ಜೊತೆ ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರ ಅವರು ಮಾತನಾಡಿದ್ದು ಈ ವಿಡಿಯೋ ವೈರಲ್ ಆಗಿದೆ.
ಅದರಲ್ಲಿ ಆನಂದ್ ಅವರು, ನನ್ನ ಹೆಂಡ್ತಿ ಸುಂದರವಾಗಿದ್ದಾಳೆ ಕಂಣ್ರೀ.. ನಾನು ಅವಳನ್ನು ನೋಡುವುದಕ್ಕೆ ಇಷ್ಟಪಡುತ್ತೇನೆ ಅಂತ ಹೇಳಿದ್ದಾರೆ. ತಾಸು ಗಟ್ಟಲೆ ಕೆಲಸ ಮಾಡುವುದರ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಕೆಲಸದ ಗುಣಮಟ್ಟ ಮುಖ್ಯ: ಇನ್ನು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಇಲ್ಲ 90 ಗಂಟೆ ಕೆಲಸ ಮಾಡಬೇಕು ಎನ್ನುವ ಕಂಪನಿಗಳ ಮಾಲೀಕರ ನಡುವೆ ಆನಂದ್ ಅವರು ಕೆಲಸದ ಅವಧಿ ಬಗ್ಗೆ ಮಾತನಾಡಿರುವುದು ಸಿಕ್ಕಾಪಟ್ಟೆ ಇಷ್ಟವಾಗಿದೆ. ಅದೇನೆಂದರೆ ತಾಸುಗಟ್ಟಲೆ ದುಡಿಯೋದು ಮುಖ್ಯವಲ್ಲ. ನಾನು ಕೆಲಸ ಮಾಡುವ ಟೈಮ್ಗಿಂತ, ಕೆಲಸದ ಗುಣಮಟ್ಟವನ್ನು ನೋಡುತ್ತೇನೆ. ಅದರ ಪ್ರಾಮುಖ್ಯತೆ ಖಚಿತ ಪಡಿಸಲು ಇಷ್ಟ ಪಡ್ತೀನಿ ಅಂತ ಹೇಳಿದ್ದಾರೆ. ಗಂಟೆ ಗಟ್ಟಲೆ ದುಡಿಯೋದು ಇಂಪಾರ್ಟೆಂಟ್ ಅಲ್ಲ ಕಡಿಮೆ ಅವಧಿಯಲ್ಲಿ ಕ್ರಿಯೇಟಿವ್ ಆಗಿ ಕೆಲಸ ಮಾಡುವುದು ಇಂಪಾರ್ಟೆಂಟ್ ಅಂತ ಅವರು ಹೇಳಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications