Anand Mahindra: ಕೆಲಸದ ಟೈಮಿಂಗ್ಸ್ ಬಗ್ಗೆ ಆನಂದ್ ಮಹೀಂದ್ರಾ ಅಚ್ಚರಿಯ ಹೇಳಿಕೆ!
ಕೆಲಸದ ಅವಧಿಯ ಬಗ್ಗೆ ಹಾಗೂ ಭಾನುವಾರವೂ ಕೆಲಸ ಮಾಡುವ ಬಗ್ಗೆ ಮಹೀಂದ್ರಾ ಗ್ರೂಪ್ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ಭಾರತದಲ್ಲಿ ಕೆಲಸದ ಅವಧಿಯ ಬಗ್ಗೆ ಕಳೆದ ಆರೇಳು ತಿಂಗಳಿನಿಂದ ಭರ್ಜರಿ ಚರ್ಚೆ ನಡೆಯುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಯುವಕರು ವಾರಕ್ಕೆ 70 ದಿನ ಕೆಲಸ ಮಾಡಬೇಕು ಅಂತ ಹೇಳುವುದರೊಂದಿಗೆ ಪ್ರಾರಂಭವಾಯಿತು. ಅದನ್ನು ಮೀರಿಸುವಂತೆ ಎಲ್ ಆ್ಯಂಡ್ ಟಿ ಚೇರ್ಮ್ಯಾನ್ ಸುಬ್ರಮಣಿಯನ್ ಅವರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು. ಭಾನುವಾರವೂ ಕೆಲಸ ಮಾಡಿ ಎಷ್ಟು ಅಂತ ಹೆಂಡ್ತಿ ಮುಖವನ್ನು ನೋಡ್ತೀರಿ ಎಂದಿದ್ದರು. ಇದೀಗ ಈ ಚರ್ಚೆಗಳಿಗೆ ಮಹೀಂದ್ರಾ ಅವರು ಹೊಸ ತಿರುವು ಕೊಟ್ಟಿದ್ದಾರೆ. ಅವರ ಅಭಿಪ್ರಾಯವನ್ನು ಹಲವು ಉದ್ಯೋಗಿಗಳು ಮೆಚ್ಚಿಕೊಂಡಿದ್ದಾರೆ. ಆನಂದ್ ಅವರ ಮಜವಾದ ರಿಪ್ಲೈಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಕೆಲಸದ ಅವಧಿ ಎಷ್ಟಾಗಿರಬೇಕು ಎನ್ನುವ ಬಗ್ಗೆ ಚರ್ಚೆ. ವಾದ ವಿವಾದ ನಡಿಯುತ್ತಲ್ಲೇ ಇದೆ. ಕೆಲವು ಕಂಪನಿಗಳ ಮಾಲೀಕರು ಉದ್ಯೋಗಿಗಳು ಕತ್ತೆತರ ದುಡಿಯಬೇಕು.. ಗಂಟೆ ಗಟ್ಟಲೆ ಕೆಲಸ ಮಾಡಬೇಕು. ಭಾನುವಾರವೂ ಕೆಲಸ ಮಾಡಬೇಕು ಅಂತ ಹೇಳುತ್ತಿದ್ದರೆ. ಈ ರೀತಿ ಗಂಟೆಗಟ್ಟಲೆ ಕೆಲಸ ಮಾಡಿದರೆ ಉದ್ಯೋಗಿಗಳ ಪರಿಸ್ಥಿತಿ ಏನಾಗಬೇಕು. ಅವರ ಪರ್ಸನಲ್ ಲೈಫ್ ಏನಾಗಬೇಕು. ಪರ್ಸನಲ್ ಲೈಫ್ ಹಾಗೂ ವರ್ಕ್ ಲೈಫ್ಗಳ ನಡುವೆ ಬ್ಯಾಲೆನ್ಸ್ ಇರಬೇಕು ಎನ್ನುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಮುಖ್ಯವಾಗಿ ಕಂಪನಿಯ ಮಾಲೀಕರು ಹಾಗೂ ಉದ್ಯೋಗಿಗಳ ಸೌಲಭ್ಯ ಹಾಗೂ ವೇತನದ ಬಗ್ಗೆಯೂ ಚರ್ಚೆ ಆಗಿರೋದು ಇದೆ.

ಈಚೆಗೆ ಎಲ್ ಆ್ಯಂಡ್ ಟಿ ಚೇರ್ಮ್ಯಾನ್ ಸುಬ್ರಮಣಿಯನ್ ಅವರು ವಾರಕ್ಕೆ 90 ದಿನ ಕೆಲಸ ಮಾಡಿ. ಭಾನುವಾರ ರಜೆ ಯಾಕೆ ಅಂತ. ಮನೆಯಲ್ಲಿ ಹೆಂಡ್ತಿ ಮುಖನ ಎಷ್ಟೂ ಅಂತ ನೋಡ್ತೀರಿ ಅಂತೆಲ್ಲ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ಆನಂದ್ ಮಹೀಂದ್ರ ಅವರು ಮಾತನಾಡಿದ್ದಾರೆ. ವಿಕಸಿತ್ ಭಾರತ ಯುವ ನಾಯಕರ ಸಂವಾದ ಕಾರ್ಯಕ್ರಮದಲ್ಲಿ, ಫಸ್ಟ್ಪೋಸ್ಟ್ ಮ್ಯಾನೇಜಿಂಗ್ ಎಡಿಟರ್ ಪಾಲ್ಕಿ ಶರ್ಮಾ ಅವರ ಜೊತೆ ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರ ಅವರು ಮಾತನಾಡಿದ್ದು ಈ ವಿಡಿಯೋ ವೈರಲ್ ಆಗಿದೆ.
ಅದರಲ್ಲಿ ಆನಂದ್ ಅವರು, ನನ್ನ ಹೆಂಡ್ತಿ ಸುಂದರವಾಗಿದ್ದಾಳೆ ಕಂಣ್ರೀ.. ನಾನು ಅವಳನ್ನು ನೋಡುವುದಕ್ಕೆ ಇಷ್ಟಪಡುತ್ತೇನೆ ಅಂತ ಹೇಳಿದ್ದಾರೆ. ತಾಸು ಗಟ್ಟಲೆ ಕೆಲಸ ಮಾಡುವುದರ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಕೆಲಸದ ಗುಣಮಟ್ಟ ಮುಖ್ಯ: ಇನ್ನು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಇಲ್ಲ 90 ಗಂಟೆ ಕೆಲಸ ಮಾಡಬೇಕು ಎನ್ನುವ ಕಂಪನಿಗಳ ಮಾಲೀಕರ ನಡುವೆ ಆನಂದ್ ಅವರು ಕೆಲಸದ ಅವಧಿ ಬಗ್ಗೆ ಮಾತನಾಡಿರುವುದು ಸಿಕ್ಕಾಪಟ್ಟೆ ಇಷ್ಟವಾಗಿದೆ. ಅದೇನೆಂದರೆ ತಾಸುಗಟ್ಟಲೆ ದುಡಿಯೋದು ಮುಖ್ಯವಲ್ಲ. ನಾನು ಕೆಲಸ ಮಾಡುವ ಟೈಮ್ಗಿಂತ, ಕೆಲಸದ ಗುಣಮಟ್ಟವನ್ನು ನೋಡುತ್ತೇನೆ. ಅದರ ಪ್ರಾಮುಖ್ಯತೆ ಖಚಿತ ಪಡಿಸಲು ಇಷ್ಟ ಪಡ್ತೀನಿ ಅಂತ ಹೇಳಿದ್ದಾರೆ. ಗಂಟೆ ಗಟ್ಟಲೆ ದುಡಿಯೋದು ಇಂಪಾರ್ಟೆಂಟ್ ಅಲ್ಲ ಕಡಿಮೆ ಅವಧಿಯಲ್ಲಿ ಕ್ರಿಯೇಟಿವ್ ಆಗಿ ಕೆಲಸ ಮಾಡುವುದು ಇಂಪಾರ್ಟೆಂಟ್ ಅಂತ ಅವರು ಹೇಳಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications