ಭಾರತದಲ್ಲಿ ಮಾರ್ಚ್ 2023ರಿಂದ 5ಜಿ ಇಂಟರ್ನೆಟ್ ಸೇವೆ ಲಭ್ಯ: ಕೇಂದ್ರ ಸಚಿವ
ಬೆಂಗಳೂರು ಜೂ. 16: ಭಾರತ ದೇಶದ ಜನರು 2023ರ ಮಾರ್ಚ್ ತಿಂಗಳ ನಂತರ ವೇಗದ 5ಜಿ ಇಂಟರ್ ನೆಟ್ ಬಳಸಲಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈ ಕುರಿತು ಬುಧವಾರ 'ಭಾರತ್ ಕಾ 5ಜಿ' ಹ್ಯಾಶ್ ಟ್ಯಾಗ್ ಹಾಕಿ ಟ್ವಿಟ್ ಮಾಡಿರುವ ಅವರು, ಹಾಲಿ ನಾವು ಬಳ್ಳಸುತ್ತಿರುವ 4ಜಿ ನೆಟ್ವರ್ಕ್ಗಿಂತಲೂ ಸರಿಸುಮಾರು ಶೇ.10ರಷ್ಟು ವೇಗ ಹೊಂದಿದೆ. ಇಂತಹ ನೆಟ್ವರ್ಕ್ ಸೇವೆ 2023ರಿಂದ ಭಾರತದಲ್ಲಿ ಸಾಧ್ಯವಾಗಲಿದೆ. ಕೇಂದ್ರ ಸರ್ಕಾರ 20ವರ್ಷಗಳ ಅವಧಿಗೆ ಈ ನೂತನ ತರಂಗಾಂತರದ ಸೇವಾ ಹರಾಜಿಗೆ ಒಪ್ಪಿಗೆ ನೀಡಿದೆ. ಇದಕ್ಕೆ ಪೂರಕವಾಗಿ ಮುಂದಿನ ಜುಲೈ ಅಂತ್ಯದ ವೇಳೆಗೆ ಮೊದಲು 72 ಗಿಗಾ ಹಟ್ಸ್ಟ್ ಸ್ಪೆಕ್ಟ್ರಂ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಡಿಜಿಟಲ್ ಬಳಕೆಯಲ್ಲಿ ಪ್ರಾಥಮಿಕ ವ್ಯವಸ್ಥೆಯಾಗಿದ್ದ ಟೆಲಿಕಾಂ ಈ ವಲಯದಲ್ಲಿ ಹಂತ ಹಂತವಾಗಿ ಮಹತ್ತರ ಬದಲಾವಣೆಗ ತರಲು ಕಾರಣವಾಯಿತು. ಇದೀಗ 4ಜಿ ತರಂಗಾಂತರ ಸಂಪರ್ಕ ಸಾಧಿಸಬಲ್ಲ ಎಲ್ಲ ಬಗೆಯ ಉಪಕರಣಗಳು ಲಭ್ಯವಾಗುತ್ತಿವೆ. ಇದೇ ಮಾದರಿಯಲ್ಲಿ 5ಜಿ ಸೇವೆಯಲ್ಲಿಯು ಲಭ್ಯವಾಗುವಂತೆ ಮಾಡುವ ಗುರಿ ಹೊಂದಿದ್ದೇವೆ ಎಂದರು.

ದೇಶದಲ್ಲಿ ಹೊಸ ವೇಗದ ತರಂಗಾಂತರ ಸೇವೆ ಎಲ್ಲ ಪ್ರಾಯೋಗಿಕ ಹಂತ ದಾಟಿ ಯಶಸ್ವಿಯಾಗಿದ್ದು, ಇನ್ನೇನು ಕೆಲವು ತಿಂಗಳುಗಳಲ್ಲಿ ದೇಶಾದ್ಯಂತ ಸಂಪರ್ಕ ಸಾಧಿಸಲು ಸಜ್ಜಾಗಿದೆ.
ಹೊಸ ನೆಟ್ ವರ್ಕ ಸೇವೆ ಆರಂಭವಾದರೆ ಕೃಷಿ, ಆರೋಗ್ಯ, ಶಿಕ್ಷಣ, ಉದ್ಯಮ, ಕೈಗಾರಿಕೆ, ಮೂಲಸೌಕರ್ಯ, ತಂತ್ರಜ್ಞಾನ ಮತ್ತಿತರ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸುಧಾರಣೆಗಳು ಆಗುತ್ತವೆ. ಪ್ರತಿ ವಲಯದ ಬೆಳವಣಿಗೆಯಲ್ಲಿ ಈ ತರಂಗಾಂತರ ಸೇವೆ ಪ್ರಮುಖ ಪಾತ್ರ ವಹಿಸಲಿದೆ. ಉದ್ಯೋಗವು ಸೃಷ್ಟಿಯಾಗುತ್ತದೆ ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು ಎಂದು ಸಚಿವರು ತಿಳಿಸಿದರು.
ಪ್ರಸ್ತಾವನೆಗೆ ಒಪ್ಪಿಗೆ
ದೇಶದಲ್ಲಿ 5ಇಂಟರ್ ನೆಟ್ ಸೇವೆಗೆ ಉತ್ತಮ ಬಿಡ್ಡರ್ ಗಳಿಗೆ ಹರಾಜು ನೀಡಲು ಉದ್ದೇಶಿಸಲಾದ ದೂರಸಂಪರ್ಕ ಇಲಾಖೆ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ನಂತರವೇ ಸಂಪುಟದಲ್ಲಿ ಅಂಗೀಕಾರಗೊಂಡಿದೆ. ಇದರ ಬೆನ್ನಲ್ಲೆ ಬಿಡ್ಡರ್ ಕಂಪನಿಗಳು ಈ ವರ್ಷಾಂತ್ಯಕ್ಕೆ ಕಾರ್ಯೋನ್ಮುಖವಾಗಲಿವೆ.

6ಜಿಯಲ್ಲಿ ಭಾರತ ಅಗ್ರಗಣ್ಯ?
ಭಾರತದಲ್ಲಿ ಐದನೇ ತರಂಗಾಂತರ ಸೇವೆಯನ್ನು 'ಟೆಲಿಕಾಂ ವ್ಯವಸ್ಥೆಯಲ್ಲಿನ ' ಹೊಸ ಯುಗ ಎಂದು ಬಣ್ಣಿಸಿರುವ ಸಚಿವ ಅಶ್ವಿನಿ ವೈಷ್ಣವ್ ಅವರು, ಬರಲಿವೆ 5ಜಿ ತಂತ್ರಜ್ಞಾನದಲ್ಲಿ ಹಾಗೂ ಭವಿಷ್ಯ 6ಜಿ ನೆಟ್ ವರ್ಕ ಸೇವೆ ಬಳಕೆಯಲ್ಲಿ ಸಹ ಭಾರತ ಪ್ರಮುಖ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Recommended Video
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications