Vande Bharat Express: 50% ವಂದೇ ಭಾರತ್ ರೈಲುಗಳು ಖಾಲಿ ಓಡುತ್ತಿವೆಯೇ?
ತಿರುವನಂತಪುರಂ, ಮೇ. 09 : ದೇಶದ ಪ್ರಮುಖ ಮಾರ್ಗಗಳಲ್ಲಿ ಪ್ರಯಾಣವನ್ನು ಸುಲಭ ಮತ್ತು ಉನ್ನತ ದರ್ಜೆಗೇರಿಸುವ ದೃಷ್ಠಿಯಿಂದ ಬಂದ ರೈಲುಗಳಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ಗಳು ಪ್ರಮುಖವಾದವು. ಇಂದಿಗೂ ಹಲವು ಮಾರ್ಗಗಳಲ್ಲಿ ವಂದೇ ಭಾರತ್ಗೆ ಙೇಡಿಕೆಯಿದೆ. ಆದರೆ, ಈ ವಂದೇ ಭಾರತ್ ರೈಲುಗಳು 50% ಖಾಲಿ ಓಡುತ್ತಿವೆ ಎಂಬ ಚರ್ಚೆ ಆರಂಭವಾಗಿದೆ.
ಹೌದು.. ದೇಶದ ವಿವಿಧ ಮಾರ್ಗಗಳಲ್ಲಿ ಹರಡಿಕೊಂಡಿರುವ ವಂದೇ ಭಾರತ್ ರೈಲುಗಳು ಅತ್ಯಂತ ಹೆಚ್ಚಿನ ದರವನ್ನು ಹೊಂದಿದ್ದು, ಅವು ಖಾಲಿಯಾಗಿ ಓಡುತ್ತಿವೆ ಎಂದು ಕೇರಳ ಕಾಂಗ್ರೆಸ್ ಆರೋಪ ಮಾಡಿದೆ. ಕೇಂದ್ರ ಸರ್ಕಾರದ ವಿರುದ್ಧ ಸರಣಿ ಟ್ವೀಟ್ಗಳ ಮೂಲಕ ಕಿಡಿ ಕಾರಿದ್ದು, ಅಂಕಿ ಅಂಶಗಳನ್ನು ಕೂಡ ಹಂಚಿಕೊಂಡಿದೆ.

50% ಕ್ಕಿಂತ ಹೆಚ್ಚು ವಂದೇ ಭಾರತ್ ರೈಲುಗಳು ಖಾಲಿ ಓಡುತ್ತಿವೆ!?
ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಕೇರಳ, ಸರಣಿ ಟ್ವೀಟ್ಗಳಲ್ಲಿ, ಐಆರ್ಸಿಟಿಸಿ ಬುಕಿಂಗ್ ಡೇಟಾದ ವಿಶ್ಲೇಷಣೆಯನ್ನು ಉಲ್ಲೇಖಿಸಿದೆ. 50% ಕ್ಕಿಂತ ಹೆಚ್ಚು ವಂದೇ ಭಾರತ್ ರೈಲುಗಳು ಖಾಲಿ ಅಥವಾ ಭಾಗಶಃ ತುಂಬಿದ ಸೀಟುಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ದಾಖಲೆ ಸಮೇತ ಆಕ್ರೋಶ ಹೊರಹಾಕಿದೆ.
"ನಾವು 'ವಂದೇ ಭಾರತ್' ಎಂಬ ಗುಳ್ಳೆಯನ್ನು ಚುಚ್ಚಲು ನಿರ್ಧರಿಸಿದ್ದೇವೆ. ಐಆರ್ಸಿಟಿಸಿ ಬುಕಿಂಗ್ ಡೇಟಾದ ವಿಶ್ಲೇಷಣೆಯು 50% ಕ್ಕಿಂತ ಹೆಚ್ಚು ವಂದೇ ಭಾರತ್ ರನ್ಗಳು ಖಾಲಿ ಅಥವಾ ಭಾಗಶಃ ತುಂಬಿದ ಸೀಟುಗಳೊಂದಿಗೆ ಹಳಿಗಳಿಗೆ ಇಳಿಯುತ್ತಿವೆ ಎಂದು ತಿಳಿಸುತ್ತಿದೆ" ಎಂದು ಟ್ವೀಟ್ ಮಾಡಿದೆ.
"ರೈಲು ಹೊರಡುವ ಕೆಲವೇ ಗಂಟೆಗಳ ಮೊದಲು ಐಆರ್ಸಿಟಿಸಿ ಯಿಂದ ಪಡೆದ ಈ ಡೇಟಾವು ತತ್ಕಾಲ್ ಬುಕಿಂಗ್ ಅನ್ನು ಹೊರತುಪಡಿಸಿ ಕೇವಲ ಸಾಮಾನ್ಯ ವರ್ಗದ ಮೇಲೆ ಕೇಂದ್ರೀಕರಿಸುತ್ತದೆ. ರಜೆಯ ಸೀಸನ್ನಲ್ಲಿ ದೇಶಾದ್ಯಂತ ಕುಟುಂಬಗಳು ಹೆಚ್ಚಿನ ಪ್ರಯಾಣ ಮಾಡುತ್ತವೆ, ಅದರ ಹೊರತಾಗಿಯೂ, ವಂದೇ ಭಾರತ್ಗಾಗಿ ಬುಕ್ಕಿಂಗ್ಗಳು ಆಶ್ಚರ್ಯಕರವಾಗಿ ಕಡಿಮೆಯಾಗಿವೆ" ಎಂದು ಹೇಳಿದೆ.

"ಇದಲ್ಲದೆ, ಈ ಡೇಟಾವು ಆರ್ಥಿಕ ಅಸಮಾನತೆಗಳಿಗೆ ಸಂಬಂಧಿಸಿದ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಶ್ರೀಮಂತ ಪ್ರದೇಶಗಳ ಪ್ರಯಾಣಿಕರು ವಂದೇ ಭಾರತ್ ರೈಲುಗಳನ್ನು ಬಳಸುತ್ತಿದ್ದಾರೆ. ಆದರೆ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿನ ಪ್ರಯಾಣಿಕರು ಈ ದುಬಾರಿ ಸೇವೆಗಳನ್ನು ಪಡೆಯಲು ಹೆಣಗಾಡುತ್ತಾರೆ" ಎಂದು ಪಕ್ಷವು ಟ್ವೀಟ್ ಮಾಡಿದೆ.
ಕೇರಳ ಕಾಂಗ್ರೆಸ್ ಇತರ ರೈಲುಗಳಲ್ಲಿ ವೇಟಿಂಗ್ ಲಿಸ್ಟ್ಗಳನ್ನು ತೋರಿಸಿದೆ. ಆದರೆ ವಂದೇ ಭಾರತ್ ರೈಲುಗಳಲ್ಲಿ ಅನೇಕ ಸೀಟುಗಳು ಖಾಲಿ ಉಳಿದಿವೆ. "ಮುಂಬೈ - ಸೋಲಾಪುರ (ಸಾಲು-4) ವಂದೇ ಭಾರತ್ನಲ್ಲಿ 277 ಸೀಟುಗಳು ಖಾಲಿ ಇವೆ, ಆದರೆ ಬಹುತೇಕ ಎಲ್ಲಾ ರೈಲುಗಳು ವೇಟಿಂಗ್ ಲಿಸ್ಟ್ನಲ್ಲಿವೆ. ಇದರರ್ಥ ರೈಲುಗಳಿಗೆ ಭಾರಿ ಬೇಡಿಕೆಯಿದೆ, ಆದರೆ ಇದು ದುಬಾರಿ ಅಲ್ಲ. ಈ ಸನ್ನಿವೇಶವೊಂದೆ ಅಲ್ಲ. ಇದೇ ಮಾದರಿಗಳು ವಿವಿಧ ಮಾರ್ಗಗಳಲ್ಲಿ ಕಾಣಿಸುತ್ತವೆ" ಎಂದು ಪಕ್ಷವು ವಿಡಿಯೋವನ್ನು ಹಂಚಿಕೊಂಡಿದೆ.
ವಂದೇ ಭಾರತ್ ರೈಲುಗಳ ಟಿಕೆಟ್ ದರವನ್ನು ಗರೀಬ್ ರಥಕ್ಕೆ ಹೋಲಿಸಿದ ಪಕ್ಷವು, "ಗರೀಬ್ ರಥವು 770 ರೂಗಳಲ್ಲಿ ಟಿಕೆಟ್ಗಳನ್ನು ನೀಡಿದಾಗ, ವಂದೇ ಭಾರತ್ನ 1,720 ರೂ. ದರವನ್ನು ಸಾಮಾನ್ಯ ಪ್ರಯಾಣಿಕರಿಗೆ ವಿಧಿಸುತ್ತದೆ. ವಿಶಾಖಪಟ್ಟಣಂ ಮತ್ತು ಹೈದರಾಬಾದ್ ನಡುವಿನ ಕೌಟುಂಬಿಕ ಪ್ರವಾಸವನ್ನು ಪರಿಗಣಿಸಿ, ಅಲ್ಲಿ ಗರೀಬ್ ರಥ 6,160 ರೂಪಾಯಿಗೆ ನೀಡಿದರೆ, ವಂದೇ ಭಾರತ್ ಆಯ್ಕೆಯು 13,760 ರೂಪಾಯಿ ವೆಚ್ಚ ಬಯಸುತ್ತದೆ. ಸರಾಸರಿ ಪ್ರಯಾಣಿಕರಿಗೆ ವಂದೇ ಭಾರತ್ ಒಂದು ಸಾಧ್ಯವಾದ ಆಯ್ಕೆಯಾಗಿದೆಯೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕುತ್ತದೆ" ಎಂದು ಕಾಂಗ್ರೆಸ್ನ ಕೇರಳ ಘಟಕ ಪ್ರಶ್ನಿಸಿದೆ.
A similar fate awaits the Ahmedabad - Mumbai Bullet train constructed at the whims of one man, without any consultation. Initially budgeted at ₹1.1 lakh crore, the project's current estimate surpasses ₹1.6 lakh crore, poised to breach ₹2 lakh crore upon completion.
— Congress Kerala (@INCKerala) May 8, 2024
In… pic.twitter.com/sEfSdFlc3C
ಬಳಿಕ ಕಿಕ್ಕಿರಿದ ಪ್ರಯಾಣಿಕರ ರೈಲಿನ ವೀಡಿಯೊವನ್ನು ಸಹ ಹಂಚಿಕೊಂಡಿದ್ದು, ಭಾರತೀಯ ರೈಲ್ವೇಯು ವೈವಿಧ್ಯಮಯ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಅಗತ್ಯವಿದೆ. ಕೆಳಮಧ್ಯಮ ವರ್ಗದ ಮತ್ತು ಬಡ ಸಮುದಾಯಗಳ ಕಡೆಗೆ ರೈಲ್ವೆಯ ಮೇಲ್ವಿಚಾರಣೆ ಮಾಡಬೇಕಾಗಿದೆ ಸ್ಪಷ್ಟವಾಗಿದೆ" ಎಂದು ಹೇಳಿದೆ.
'ಯಾವುದೇ ಸಮಾಲೋಚನೆಯಿಲ್ಲದೆ ಒಬ್ಬ ವ್ಯಕ್ತಿಯ ಇಚ್ಛೆಯಂತೆ ನಿರ್ಮಿಸಲಾದ ಅಹಮದಾಬಾದ್-ಮುಂಬೈ ಬುಲೆಟ್ ರೈಲಿಗೆ ಇದೇ ರೀತಿಯ ಭವಿಷ್ಯ ಕಾದಿದೆ. ಆರಂಭದಲ್ಲಿ 1.1 ಲಕ್ಷ ಕೋಟಿಗೆ ಬಜೆಟ್ ಮಾಡಲಾಗಿದ್ದು, ಯೋಜನೆಯ ಪ್ರಸ್ತುತ ಅಂದಾಜು 1.6 ಲಕ್ಷ ಕೋಟಿಯನ್ನು ಮೀರಿದೆ, ಪೂರ್ಣಗೊಂಡ ನಂತರ 2 ಲಕ್ಷ ಕೋಟಿಯಾಗಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಭಾರತೀಯ ರೈಲ್ವೇಯು ಪ್ರತಿದಿನ 13,000 ಪ್ರಯಾಣಿಕ ರೈಲುಗಳನ್ನು ನಿರ್ವಹಿಸುತ್ತದೆ, ಕೇವಲ 51 ವಂದೇ ಭಾರತ್ ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಇದರ ಉತ್ಪಾದನಾ ವೆಚ್ಚ 4,950 ಕೋಟಿ' ಎಂದಿದೆ.
ಈ ವರ್ಷದ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಮಾರ್ಗಗಳಲ್ಲಿ 10 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ನಂತರ, ಮೇ 5 ರಂದು, ಉತ್ತರ ಪ್ರದೇಶದ ಸೀತಾಪುರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಧಿಕಾರಕ್ಕೆ ಬಂದ ನಂತರ ಉಚಿತ ಪಡಿತರ ಯೋಜನೆ ಮತ್ತು ವಂದೇ ಭಾರತ್ ರೈಲುಗಳಂತಹ ಸೌಲಭ್ಯಗಳನ್ನು ನಿಲ್ಲಿಸುವುದಾಗಿ ಪ್ರತಿಪಕ್ಷಗಳು ಹೇಳಿವೆ ಎಂದು ಆರೋಪಿಸಿದ್ದಾರೆ.












Click it and Unblock the Notifications