ಸತ್ಯ ಬಾಯಿಬಿಡಿಸಲು ಹುಡುಗರ ಕೈಗಳನ್ನು ಕುದಿಯುವ ಎಣ್ಣೆಯಲ್ಲಿ ಅದ್ದಿಸಿದ ದುಷ್ಟ
ಸ್ಥಳೀಯ ಮೂಢ ನಂಬಿಕೆಗಳಂತೆ ನಡೆದುಕೊಂಡ ನರಸಿಂಗಪಾಡಾ ಹಳ್ಳಿಯ ಛಗ್ಗನ್ ಎಂಬ ವ್ಯಕ್ತಿ; ತನ್ನ ಮಗನ ಮೊಬೈಲ್ ಕದ್ದವರನ್ನು ಪತ್ತೆ ಮಾಡಲು ರಾಕ್ಷಸನಂತೆ ನಡೆದುಕೊಂಡ ದುರುಳ.
ರತ್ನಪುರಿ (ಮಧ್ಯಪ್ರದೇಶ), ಫೆಬ್ರವರಿ 22: ತನ್ನ ಮಗನ ಮೊಬೈಲ್ ಕದ್ದಿದ್ದಾರೆಂದು ಅನುಮಾನಿಸಿದ ವ್ಯಕ್ತಿಯೊಬ್ಬ 8ರಿಂದ 9 ವರ್ಷದೊಳಗಿನ ಐವರು ಹುಡುಗರ ಕೈಗಳನ್ನು ಕುದಿಯುವ ಎಣ್ಣೆಯಲ್ಲಿ ಅದ್ದಿಸಿದ್ದಾನೆ.
ಮಧ್ಯಪ್ರದೇಶದ ರತ್ನಪುರಿಗೆ ಸೇರಿದ ನರಸಿಂಗಪಾಡಾ ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವ ಛಗ್ಗನ್ ಲಾಲ್ ವಾರಿಯಾ ಎಂಬ ವ್ಯಕ್ತಿ ತನ್ನ 13 ವರ್ಷದ ಮಗನಿಗೆ ಮೊಬೈಲ್ ಕೊಡಿಸಿದ್ದ. ಆದರೆ, ಆ ಮೊಬೈಲ್ ಇತ್ತೀಚೆಗೆ ಕಳುವಾಗಿತ್ತು.['Panic button' ಉಳ್ಳ ಭಾರತದ ಮೊದಲ ಸ್ಮಾರ್ಟ್ ಫೋನ್ ಬಿಡುಗಡೆ]

ತನ್ನ ಮಗನ ಮೊಬೈಲ್ ಕಳ್ಳತನದ ಹಿಂದೆ ಈ ಐವರು ಹುಡುಗರ ಕೈವಾಡವಿದೆಯೆಂದು ಅನುಮಾನಿಸಿದ ಛಗ್ಗನ್, ಆ ಐವರನ್ನೂ ಮಂಗಳವಾರ ಸಂಜೆ ತನ್ನ ಮನೆಗೆ ಕರೆದು ವಿಚಾರಿಸಿದ್ದಾನೆ. ಎಷ್ಟೇ ಕೇಳಿದರೂ ಆ ಹುಡುಗರು ತಾವು ಕದ್ದಿಲ್ಲವೆಂದು ಹೇಳಿರುವುದು ಆತನಿಗೆ ಕೋಪ ತರಿಸಿದೆ.
ಇದರಿಂದ ಸಿಟ್ಟಿಗೆದ್ದ ಆತ, ನೀವು ನಿರಪರಾಧಿಗಳೆಂದು ಸಾಬೀತುಪಡಿಸಬೇಕಾದಲ್ಲಿ, ಕುದಿಯುವ ಎಣ್ಣೆಯಲ್ಲಿ ಕೈಯ್ಯನ್ನು ಅದ್ದಬೇಕೆಂದು ಆದೇಶಿಸಿದ್ದಾನೆ.[ಆ್ಯಂಡ್ರಾಯ್ಡ್ ಫೋನಿನಲ್ಲಿ ಅಶ್ಲೀಲ ವೆಬ್ ಸೈಟ್ ನೋಡುವವರೇ ಎಚ್ಚರ !!!]
ಯಾರು ಸತ್ಯ ಹೇಳುತ್ತಾರೋ ಅವರು ಕುದಿಯುವ ಎಣ್ಣೆಯಲ್ಲಿ ಕೈ ಅದ್ದಿದರೂ ಅವರಿಗೆ ಏನೂ ಆಗದು ಎಂಬ ನಂಬಿಕೆ ತನ್ನ ಹಳ್ಳಿಯಲ್ಲಿ ಚಾಲ್ತಿಯಲ್ಲಿರುವುದರಿಂದ ಛಗ್ಗನ್ ಅವರಿಗೆ ಈ ಶಿಕ್ಷೆಯನ್ನು ಬಲವಂತವಾಗಿ ವಿಧಿಸಿದ್ದಾನೆ. ಹುಡುಗರನ್ನು ಬೆದರಿಸಿ ಬಲವಂತವಾಗಿ ಅವರ ಕೈಗಳನ್ನು ಎಣ್ಣೆಯಲ್ಲಿಟ್ಟಿರುವುದರಿಂದ ಅವರ ಅಂಗೈಗಳು ಬೆಂದು ಹೋಗಿವೆ.
ಕಿಟಾರನೆ ಕಿರುಚಿಕೊಂಡ ಆ ಹುಡುಗರ ನೆರವಿಗೆ ಬಂದ ಅಕ್ಕಮಕ್ಕದ ಮನೆಯ ಜನರು, ಛಗ್ಗನ್ ನನ್ನು ಬೈದು ಹುಡುಗರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯಕ್ಕೆ ರತ್ನಪುರಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಛಗ್ಗನ್ ನನ್ನು ಬಂಧಿಸಿದ್ದಾರೆ.












Click it and Unblock the Notifications