48 ಗಂಟೆಗಳಲ್ಲಿ ಯೋಗಿ ಆದಿತ್ಯನಾಥ್ ತವರಲ್ಲಿ 30 ಮಕ್ಕಳ ದಾರುಣ ಬಲಿ
ಲಕ್ನೊ, ಆಗಸ್ಟ್ 31: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತವರಲ್ಲಿ ಕಳೆದ 48 ಗಂಟೆಗಳಲ್ಲಿ 30 ಮಕ್ಕಳು ಅಸುನೀಗಿದ್ದಾರೆ. ಎನ್ಸೆಫಾಲಿಟಿಸ್ (encephalitis) ಎಂಬ ಮೆದುಳು ಸಂಬಂಧಿ ರೋಗಕ್ಕೆ ಈ ಮಕ್ಕಳು ಬಲಿಯಾಗಿದ್ದಾರೆ.
ಯೋಗಿ ಆದಿತ್ಯನಾಥ್ ಪ್ರತಿನಿಧಿಸುತ್ತಿದ್ದ ಲೋಕಸಭಾ ಕ್ಷೇತ್ರ "ಗೋರಖ್ ಪುರ್ ನ ಬಾಬ ರಾಘವ್ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ಸಾವು ಸಂಭವಿಸಿದೆ," ಎಂದು ಜಿಲ್ಲಾಧಿಕಾರಿ ರಾಜೀವ್ ರಟೇಲಾ ತಿಳಿಸಿದ್ದಾರೆ.

ಈ ಭಾಗದಲ್ಲಿ ಎನ್ಸೆಫಾಲಿಟಿಸ್ ರೋಗದ ಭಾದೆ ಹೆಚ್ಚಾಗಿದ್ದು ಈ ವರ್ಷವೊಂದರಲ್ಲೇ 114 ಜನರು ಸಾವನ್ನಪ್ಪಿದ್ದಾರೆ. ನೀರಿನ ಮೂಲಕ ಹರಡುವ ರೋಗ ಇದಾಗಿದೆ. ಇದೀಗ ಕಳೆದ 48 ಗಂಟೆಗಳಲ್ಲಿ 30 ಮಕ್ಕಳು ಸಾವನ್ನಪ್ಪಿದ್ದು ಈ ರೋಗಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.












Click it and Unblock the Notifications