ಮಾಲಿನ್ಯದಿಂದ ಭಾರತದಲ್ಲಿ ಒಂದೇ ವರ್ಷದಲ್ಲಿ 25 ಲಕ್ಷ ಜನ ಬಲಿ!
ನವದೆಹಲಿ, ಅಕ್ಟೋಬರ್ 21 : ವಿಶ್ವದ ಯಾವುದೇ ದೇಶದಲ್ಲಿ ಸಂಭವಿಸಿದ ಆಘಾತಕಾರಿ ಸುದ್ದಿಯೊಂದನ್ನು ಸಾರ್ವಜನಿಕ ಆರೋಗ್ಯದ ಜಾಗತಿಕ ಸಮಿತಿ ಹೊರಹಾಕಿದೆ.
ಭಾರತದಲ್ಲಿ 2015 ಇದೊಂದೆ ವರ್ಷದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಜನರು ಮಾಲಿನ್ಯದಿಂದಾಗಿ ಅಸುನೀಗಿದ್ದಾರೆ ಎಂದು ಸಾರ್ವಜನಿಕ ಆರೋಗ್ಯದ ಜಾಗತಿಕ ಸಮಿತಿಯೊಂದು ಹೇಳಿದೆ.
25 ಲಕ್ಷ ಸಾವನ್ನಪ್ಪಿದ ಜನರ ಪೈಕಿ ಸುಮಾರು 18 ಲಕ್ಷ ಸಾವುಗಳು ವಾಯು ಮಾಲಿನ್ಯದಿಂದಲೇ ಸಂಭವಿಸಿವೆ ಎಂದು ಭಾರತೀಯರೂ ಇದ್ದ ಈ ಸಮಿತಿಯ ಅಧ್ಯಯನದ ವರದಿಯಲ್ಲಿ ತಿಳಿಸಿದೆ.
ಏಡ್ಸ್, ಮಲೇರಿಯಾ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಶ್ವಾಸಕೋಶ ಸಂಬಂಧಿ ಖಾಯಿಲೆಗಳಿಂದ ಈ ಸಾವು ಸಂಭವಿಸಿವೆ. ದೇಶದ 75 ಸ್ಥಳಗಳಲ್ಲಿ ಕ್ಷೇತ್ರಕಾರ್ಯ ನಡೆಸಿ ಮತ್ತು ದತ್ತಾಂಶಗಳನ್ನು ಕಲೆ ಹಾಕಿ ನವದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮತ್ತು ಅಮೆರಿಕದ ಐಕಾನ್ ಸ್ಕೂಲ್ ಆಫ್ ಮೆಡಿಸಿನ್ ಸಂಸ್ಥೆಗಳು ಜಂಟಿಯಾಗಿ ಈ ಅಧ್ಯಯನ ನಡೆಸಿವೆ.
ಭಾರತದ ಪ್ರತಿ ಮೂರು ಮನೆಗಳಲ್ಲಿ ಈಗಲೂ ಸೌದೆ-ಬೆರಣಿಯ ಒಲೆಗಳನ್ನು ನೀರು ಖಾಯಿಸಲು ಮತ್ತು ಅಡುಗೆ ಮಾಡಲು ಬಳಸಲಾಗುತ್ತದೆ. ಭಾರತದಲ್ಲಿನ ವಾಯು ಮಾಲಿನ್ಯಕ್ಕೆ ಈ ಒಲೆಗಳ ಕೊಡುಗೆ ಶೇ 50ರವರೆಗೂ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ 17 ಸ್ಥಳಗಳು
ಅಧ್ಯಯನ ನಡೆಸಿದ 75 ಸ್ಥಳಗಳ ಪೈಕಿ ಕರ್ನಾಟಕದ 17 ಸ್ಥಳಗಳು ಸೇರಿವೆ. ಈ ಸ್ಥಳಗಳಲ್ಲಿನ ಗಾಳಿ ಮತ್ತು ನೀರಿನಲ್ಲಿನ ಮಾಲಿನ್ಯಕಾರಕ ಅಂಶಗಳನ್ನು ಪತ್ತೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

4 ಸಾವುಗಳಲ್ಲಿ 1 ಮಾಲಿನ್ಯದಿಂದ ಬಲಿ
ಮಾಲಿನ್ಯದ ಕಾರಣಕ್ಕೆ ಚೀನಾದಲ್ಲಿ 2015ರಲ್ಲಿ 18 ಲಕ್ಷ ಜನ ಮೃತಪಟ್ಟಿದ್ದಾರೆ. ಭಾರತ, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ, ಮಡಗಾಸ್ಕರ್ ಮತ್ತು ಕೀನ್ಯಗಳಲ್ಲಿ ಸಂಭವಿಸುವ ಪ್ರತಿ ನಾಲ್ಕು ಸಾವುಗಳಲ್ಲಿ ಒಂದು ಸಾವಿಗೆ ಮಾಲಿನ್ಯ ಕಾರಣವಾಗಿರುತ್ತದೆ. ಈ ದೇಶಗಳಲ್ಲಿ ಮಾಲಿನ್ಯಕ್ಕೆ ಬಲಿಯಾಗುವವರಲ್ಲಿ ಬಡವರ ಪ್ರಮಾಣವೇ ಹೆಚ್ಚು. ಇವರು ನೀರು, ಗಾಳಿ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ವಿಷಕಾರಿ ರಾಸಾಯನಿಕಗಳನ್ನು ಸೇವಿಸುತ್ತಾರೆ ಎಂಬುದು ಅಧ್ಯಯನದ ವೇಳೆ ಪತ್ತೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಯಾವ ಮಾಲಿನ್ಯದಿಂದ ಸಾವು?
25 ಲಕ್ಷ ಸಾವುಗಳ ಪೈಕಿ ವಾಯು ಮಾಲಿನ್ಯದಿಂದ 18 ಲಕ್ಷ ಸಾವು, ಜಲ ಮಾಲಿನ್ಯದಿಂದ 6.46 ಲಕ್ಷ, ಪರೋಕ್ಷ ಧೂಮಪಾನ ಮತ್ತು ಸೀಸದ ಸಂಪರ್ಕದಿಂದ 1.68 ಲಕ್ಷ ಸಾವುಗಳು ಸಂಭವಿಸಿವೆ.

ಸಾವಿಗೆ ಕಾರಣಗಳು
* ವಾತಾವರಣಕ್ಕೆ ದೂಳು ಮತ್ತು ಹೊಗೆ ಬಿಡುಗಡೆ ಆಗುವ ಪ್ರಮಾಣ ಭಾರತದಲ್ಲಿ ಅತಿ ಹೆಚ್ಚು
* ಒಟ್ಟು ವಾಯು ಮಾಲಿನ್ಯದ ಶೇ 25-50ರಷ್ಟಕ್ಕೆ ಮನೆಗಳಲ್ಲಿ ಬಳಸುವ ಉರುವಲಿನ ಹೊಗೆ ಕಾರಣ.
* ಮಾಲಿನ್ಯದಿಂದ ಬಡವರಿಗೆ ಹೆಚ್ಚು ತೊಂದರೆ. ಮಲಿನ ಗಾಳಿ, ನೀರು, ಮಲಿನಗೊಂಡ ಕೆಲಸದ ಸ್ಥಳಗಳು ಇದಕ್ಕೆ ಕಾರಣ
* ಬಡಜನರ ಮನೆಗಳ ಸುತ್ತ ಮುತ್ತಲೂ ಮಾಲಿನ್ಯಕಾರಕ ಅಂಶಗಳು ಇರುತ್ತವೆ.
-
ಬೆಳಿಗ್ಗೆ ನಿಂಬೆ ಹಣ್ಣಿನ ರಸ ಕುಡಿಯುತ್ತಿದ್ದೀರಾ? ಲಾಭಗಳ ಜೊತೆ ಈ ಅಪಾಯಗಳೂ ಇವೆ -
Powerful Vastu Plants: ಮನೆಗೆ ಪಾಸಿಟಿವ್ ಎನರ್ಜಿ ಬೇಕಾ? ಈ ಸಸ್ಯಗಳನ್ನು ಇಡಿ, ಜೀವನವೇ ಬದಲಾಗುತ್ತದೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
ಬಿಸಿಲಿನ ತಾಪಕ್ಕೆ ಕಳೆಗುಂದಿದೆಯೇ ಮುಖದ ಕಾಂತಿ? ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿವೆ 12 ಸರಳ ಸೂತ್ರ -
ವಾಸ್ತು ಪ್ರಕಾರ ಮನೆ ನಿರ್ಮಾಣದಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಬೇಕಾ? ಇಲ್ಲಿದೆ ಸ್ಪಷ್ಟನೆ -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು?











Click it and Unblock the Notifications