3 ರೂಪಾಯಿ ಚಿಲ್ಲರೆ ಕೊಡದ ಜೆರಾಕ್ಸ್ ಅಂಗಡಿ ಮಾಲೀಕನಿಗೆ ಬಿತ್ತು 25,000 ದಂಡ!
ಬೆಂಗಳೂರು, ಅಕ್ಟೋಬರ್ 05: ಅಂಗಡಿಗೆ ಬಂದಿದ್ದ ಗ್ರಾಹಕರೊಬ್ಬರಿಗೆ ಬರೀ 3 ರೂಪಾಯಿ ಚಿಲ್ಲರೆ ನೀಡಲು ನಿರಾಕರಿಸಿದ ಅಂಗಡಿ ಮಾಲೀಕರೊಬ್ಬರಿಗೆ ಬರೋಬ್ಬರಿ 25,000 ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಹೀಗೆ ಗ್ರಾಹಕರಿಗೆ 3 ರೂಪಾಯಿ ವಂಚಿಸಲು ಮುಂದಾದ ಮಾಲೀಕನಿಗೆ ತಕ್ಕ ಶಾಸ್ತಿಯಾಗಿದೆ.
ಒಡಿಶಾದ ಸಂಬಲ್ಪುರದ ಜೆರಾಕ್ಸ್ ಅಂಗಡಿಯ ಮಾಲೀಕರೊಬ್ಬರಿಗೆ 3 ರೂಪಾಯಿಗಳನ್ನು ಗ್ರಾಹಕರಿಗೆ ಹಿಂದಿರುಗಿಸಲು ನಿರಾಕರಿಸಿದ್ದಕ್ಕಾಗಿ 25,000 ರೂಪಾಯಿಗಳ ದಂಡವನ್ನು ಪಾವತಿಸಲು ಆದೇಶಿಸಲಾಗಿದೆ. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶದ ಪ್ರಕಾರ, ಅಂಗಡಿ ಮಾಲೀಕನ ವಿರುದ್ಧ ದೂರು ಕೊಟ್ಟವರಿಗೆ ಈ ಮೊತ್ತವು ವಾರ್ಷಿಕ 9% ಬಡ್ಡಿಯೊಂದಿಗೆ ಸಿಗುತ್ತದೆ.

ಸಂಬಲ್ಪುರ ಜಿಲ್ಲೆಯ ಬುಧರಾಜ ಪ್ರದೇಶದ ಪತ್ರಕರ್ತ ಪ್ರಫುಲ್ಲ ಕುರಾರ್ ದಾಸ್ ಅವರು 2023 ರ ಏಪ್ರಿಲ್ 28 ರಂದು ದಾಖಲೆಯ ಜೆರಾಕ್ಸ್ ಪ್ರತಿಯನ್ನು ಪಡೆಯಲು ಅಂಗಡಿಗೆ ಹೋಗಿದ್ದರು. ಪ್ರಫುಲ್ಲ ಕುರಾರ್ ದಾಸ್ ಅವರು 5 ರೂಪಾಯಿಗಳನ್ನು ನೀಡಿ 3 ರೂಪಾಯಿಗಳನ್ನು ಹಿಂದಿರುಗಿಸುವಂತೆ ಅಂಗಡಿಯವರಿಗೆ ತಿಳಿಸಿದ್ದರು. ಜೆರಾಕ್ಸ್ ಪ್ರತಿಯ ದರ 2 ರೂ. ಆದರೆ, ಅಂಗಡಿಯ ಮಾಲೀಕರು ಹಣವನ್ನು ಹಿಂದಿರುಗಿಸಲು ನಿರಾಕರಿಸಿದಲ್ಲದೆ ದೂರುದಾರರನ್ನು ನಿಂದಿಸಿದನು.
ಪದೇ ಪದೇ ಮನವಿ ಮಾಡಿಕೊಂಡ ನಂತರವೂ ಅಂಗಡಿಯವನು ಹಣವನ್ನು ಭಿಕ್ಷುಕನಿಗೆ ದಾನ ಮಾಡು ಎಂದು ಹೇಳಿ ದಾಸ್ಗೆ 5 ರೂಪಾಯಿನ್ನು ಹಿಂದಿರುಗಿಸಿದನು. ಅಂಗಡಿಯವನು ಯಾವುದೇ ರಸೀದಿ ಅಥವಾ ಬಿಲ್ ನೀಡಲಿಲ್ಲ, ಇದು ಅಕ್ರಮ ವ್ಯಾಪಾರ ಕ್ರಮವಾಗಿದ್ದು, ಇದರಿಂದಾಗಿ ಆರ್ಥಿಕ ನಷ್ಟದ ಹೊರತಾಗಿ ಸಾಕಷ್ಟು ಮಾನಸಿಕ ಸಂಕಟ, ಕಿರುಕುಳ ಅನುಭವಿಸಿದನು. ಬಳಿಕ ದಾಸ್ ಗ್ರಾಹಕ ನ್ಯಾಯಲಯದ ಮೆಟ್ಟಿಲೇರಿದನು.
ಇದು ಕೇವಲ ವೈಯಕ್ತಿಕ ಪ್ರಕರಣವಲ್ಲ. ಇದು ಎಲ್ಲಾ ಗ್ರಾಹಕರ ಹಕ್ಕುಗಳ ಪರವಾಗಿ ನನಗೆ ಅವಮಾನವಾಗಿದೆ. ಆದ್ದರಿಂದ ನಾನು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದೆನು. ನ್ಯಾಯಾಲಯದ ಮಧ್ಯಸ್ಥಿಕೆಯಿಂದ ನ್ಯಾಯವನ್ನು ಪಡೆದುಕೊಂಡಿದ್ದೇನೆ ಎಂದು ದಾಸ್ ಹೇಳಿದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications