Get Updates
Get notified of breaking news, exclusive insights, and must-see stories!

ಬಿಜೆಪಿ- ಶಿಂಧೆ ಸರ್ಕಾರದಲ್ಲಿ ಅಸಮಾಧಾನದ ಬೆಂಕಿ: ಮೈತ್ರಿಕೂಟ ತೊರೆಯಲು ಮುಂದಾದ 22 ಶಾಸಕರು, 9 ಸಂಸದರು?

ಮುಂಬೈ, ಮೇ 30: ಮಹಾರಾಷ್ಟ್ರ ಸರ್ಕಾರದಲ್ಲಿ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ 22 ಶಾಸಕರು ಮತ್ತು ಒಂಬತ್ತು ಲೋಕಸಭಾ ಸಂಸದರು ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಅತೃಪ್ತರಾಗಿದ್ದಾರೆ. ಅಸಾಮಾಧಾನಗೊಂಡವರು ಪಕ್ಷವನ್ನು ತೊರೆಯಲು ಬಯಸಿದ್ದಾರೆ ಎಂದು ಶಿವಸೇನಾ (ಯುಬಿಟಿ) ಪಕ್ಷದ ಮುಖವಾಣಿ ಸಾಮ್ನಾ ಹೇಳಿಕೊಂಡಿದೆ.

ಶಿವಸೇನೆ (ಯುಬಿಟಿ) ಸಂಸದ ವಿನಾಯಕ ರಾವುತ್ ಅವರು ಶಾಸಕರು ತಮ್ಮ ಪಕ್ಷದ ಸಂಪರ್ಕದಲ್ಲಿದ್ದಾರೆ ಮತ್ತು ಅವರ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿಯಾಗದ ಕಾರಣ ಶಿಂಧೆ ನೇತೃತ್ವದ ಪಕ್ಷವನ್ನು ತೊರೆಯಲು ಬಯಸಿದ್ದಾರೆ ಎಂದು ತಿಳಿಸಿದ್ದಾರೆ.

22 MLAs, 9 MPs Rebels Against Eknath Shinde: Threatening to Leave Shiv Sena Party

ಹಮ್ ಹಿ ಶಿವಸೇನೆ ಎಂಬ ಘೋಷಣೆಗಳನ್ನು ಕೂಗಿದ ಶಿವಸೇನೆಯ ಹಿರಿಯ ನಾಯಕ ಗಜಾನನ ಕೀರ್ತಿಕರ್ ಅವರು ಬಿಜೆಪಿಯ ವರ್ತನೆಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸಾಮ್ನಾ ಸೋಮವಾರ ಹೇಳಿದೆ.

ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ-ಶಿವಸೇನೆ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂದು ತಿಳಿಸಿದ ಕೀರ್ತಿಕರ್, ಬಿಜೆಪಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ನಾವು 13 ಸಂಸದರಿದ್ದೇವೆ. ನಾವೀಗ ಎನ್‌ಡಿಎ ಭಾಗವಾಗಿದ್ದೇವೆ ಮತ್ತು ನಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದ್ಯತೆಯ ಆಧಾರದ ಮೇಲೆ ಪರಿಹರಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ ಅದು ಸಂಭವಿಸುತ್ತಿರುವುದನ್ನು ನಾವು ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

22 MLAs, 9 MPs Rebels Against Eknath Shinde: Threatening to Leave Shiv Sena Party

ತಮ್ಮ ಪಕ್ಷವು ರಾಜ್ಯದಲ್ಲಿ 22 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸುತ್ತದೆ ಎಂದು ಕೀರ್ತಿಕರ್ ಹೇಳಿಕೊಂಡಿದ್ದಾರೆ.

'ಸ್ವಾಭಿಮಾನ ಮತ್ತು ಗೌರವವನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತಮ್ಮ ಪಕ್ಷವು ರಾಜ್ಯದಲ್ಲಿ 22 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸುತ್ತದೆ' ಎಂದು ಕೀರ್ತಿಕರ್ ಹೇಳಿಕೊಂಡಿದ್ದಾರೆ. ಅಂದರೆ, ಅವರು ಬಿಜೆಪಿಯಿಂದ ಸೀಟು ಕೇಳಿದ್ದಾರೆ. ಆದರೆ, ಈ ಗುಂಪಿಗೆ ಐದು-ಏಳು ಸ್ಥಾನಗಳನ್ನೂ ನೀಡಲು ಬಿಜೆಪಿ ಸಿದ್ಧವಿಲ್ಲ ಎಂದು ಸಾಮ್ನಾ ವರದಿ ಮಾಡಿದೆ.

ಶಿಂಧೆ ಬಣದ ಶಾಸಕರು ಉಸಿರುಗಟ್ಟಿದ್ದಾರೆ ಎಂದು ಸಚಿವ ಶಂಭುರಾಜ್ ದೇಸಾಯಿ ಅವರು 15 ದಿನಗಳ ಹಿಂದೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಸಂದೇಶವನ್ನು ರವಾನಿಸಿದ್ದರು ಎಂದು ರಾವತ್ ಹೇಳಿದ್ದಾರೆ.

22 MLAs, 9 MPs Rebels Against Eknath Shinde: Threatening to Leave Shiv Sena Party

ದೇಸಾಯಿ ಮಾತ್ರವಲ್ಲ, ತಾನಾಜಿ ಸಾವಂತ್ ಮತ್ತು ಗಜಾನನ್ ಕೀರ್ತಿಕರ್ ಕೂಡ ಹೇಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ ಎಂದು ರಾವತ್ ತಿಳಿಸಿದ್ದಾರೆ. ಪಕ್ಷದ ಮಿತ್ರ ಪಕ್ಷವಾದ ಬಿಜೆಪಿಯ ಲೋಕಸಭಾ ಚುನಾವಣಾ ಯೋಜನೆಗಳ ಬಗ್ಗೆ ಶಿಂಧೆ ನೇತೃತ್ವದ ಶಿವಸೇನೆಯು ಅಸಮಾಧಾನವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಆದಾಗ್ಯೂ, ದೇಸಾಯಿ ಅವರು ಉದ್ಧವ್ ಅವರನ್ನು ಸಂಪರ್ಕಿಸಿರುವುದನ್ನು ನಿರಾಕರಿಸಿದ್ದಾರೆ. ರಾವುತ್ ಅವರು ಕ್ಷಮೆಯಾಚಿಸಲು ಒತ್ತಾಯಿಸಿದ್ದಾರೆ.

'ಇದೆಲ್ಲ ತಪ್ಪು ಮಾಹಿತಿ. ನಾನು ಠಾಕ್ರೆಗಳನ್ನು ಸಂಪರ್ಕಿಸಿಲ್ಲ ಅಥವಾ ಸಂವಹನ ನಡೆಸಿಲ್ಲ. ಕ್ಷಮೆ ಕೇಳಲು ರಾವುತ್‌ಗೆ ಎರಡು ದಿನಗಳ ಕಾಲಾವಕಾಶ ನೀಡುತ್ತಿದ್ದೇನೆ. ಇಲ್ಲದಿದ್ದರೆ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸುತ್ತೇನೆ' ಎಂದು ಸಚಿವರು ಹೇಳಿದ್ದಾರೆ.

22 MLAs, 9 MPs Rebels Against Eknath Shinde: Disagreement among the MLAs and MPs in Shiv Sena (UBT) party rebels against the party | Know the list of MLAs and MPs who want to leave Eknath Shinde Alliance,

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+