ಐಎಸ್ಐಎಸ್ ಸೇರಲು ಮುಂದಾಗಿದ್ದ 21 ಯುವಕರಿಗೆ ತಡೆ
ಬೆಂಗಳೂರು, ಮೇ. 6: ಐಎಸ್ಐಎಸ್ ಉಗ್ರ ಸಂಘಟನೆಯನ್ನು ಸೇರಲು 21 ಜನ ಭಾರತೀಯ ಯುವಕರು ಮುಂದಾಗಿದ್ದರು. ತೆಲಂಗಾಣದ 15 ಮತ್ತು ಮಧ್ಯ ಪ್ರದೇಶದ 6 ಜನ ಸಂಘಟನೆಗೆ ಸೇರಲು ಮುಂದಾಗದ್ದರು ಎಂದು ಗುಪ್ತಚರದಳ ಮಾಹಿತಿ ನೀಡಿದೆ.
ತೆಲಂಗಾಣದ ಯುವಕರಿಗೆ ದೇಶದಿಂದ ಹೊರಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಪೊಲೀಸರು ಮತ್ತು ಗುಪ್ತಚರದಳದ ಕಾರ್ಯಾಚರಣೆ ಇವರಿಗೆ ತಡೆ ಹಾಕಿದೆ.[ಹುಷಾರ್... ಬೆಂಗಳೂರು, ಕೊಲ್ಕತ್ತಾ ಉಗ್ರರ ತಾಣ]

ತೆಲಂಗಾಣದಲ್ಲಿ ಏನಾಗುತ್ತಿದೆ?
ತೆಲಂಗಾಣ ವಿಮಾನ ನಿಲ್ದಾಣಗಳಲ್ಲಿ ಅನೇಕ ಜನರು ಅನುಮಾನಾಸ್ಪದ ಪ್ರಯಾಣಕ್ಕೆ ಮುಂದಾಗಿರುವುದು ಕಂಡುಬಂದಿದೆ. ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಇರಿಸಿಕೊಂಡಿರುವ ಬಗ್ಗೆ ಮಾಹಿತಿಯೂ ದೊರೆಯುತ್ತಿದೆ.
ಈ ಎಲ್ಲ 15 ಪ್ರಕರಣಗಳನ್ನು ಅವಲೋಕಿಸಿದಾಗ ಒಂದು ಸಂಗತಿ ಬಹಿರಂಗವಾಗುತ್ತಿದೆ. ಇವರೆಲ್ಲ ಯುನೈಟೆಡ್ ಕಿಂಗ್ ಡಮ್ ಅಥವಾ ಗಲ್ಫ್ ರಾಷ್ಟ್ರಗಳಿಗೆ ತೆರಳಿ ಅಲ್ಲಿಂದ ಇರಾಕ್ ಅಥವಾ ಸಿರಿಯಾಕ್ಕೆ ತೆರಳಿ ಸಂಘಟನೆಗಳೊಂದಿಗೆ ಕೈ ಜೋಡಿಸಬೇಕು ಎಂದುಕೊಂಡಿದ್ದರು. ಅಲ್ಲದೇ ಇವರು ದೇಶದ ಗಡಿಯನ್ನು ದಾಟಲು ಪರವಾನಗಿಯನ್ನು ಪಡೆದುಕೊಂಡಿದ್ದರು. ಗುಪ್ತಚರದಳಕ್ಕೆ ಮತ್ತಷ್ಟು ಮಾಹಿತಿಯೂ ಲಭ್ಯವಾಗಿದ್ದು ಇವರು ಅಂತರ್ಜಾಲಕ್ಕೆ ಸಂಬಂಧಿಸಿ ಅಪಾರ ತಿಳಿವಳಿಕೆ ಹೊಂದಿದ್ದರು.[ಐಎಸ್ಐಎಸ್ ಸೇರಲು ಹೊರಟವರು ಭಾರತಕ್ಕೆ ಗಡೀಪಾರು]
ಮಧ್ಯಪ್ರದೇಶದ ಯುವಕರ ಕತೆ ಏನು?
ಮಧ್ಯ ಪ್ರದೇಶದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದ ಆರು ಜನ ಯುವಕರು ಉಗ್ರರೊಂದಿಗೆ ಕೈ ಜೋಡಿಸಲು ಮುಂದಾಗಿದ್ದರು. ಸಿರಿಯಾದಲ್ಲಿ ಉತ್ತೀಚೆಗೆ ಎನ್ ಕೌಂಟರ್ ಗೆ ಬಲಿಯಾದ ಸುಲ್ತಾನ್ ಅರ್ಮರ್ ಎಂಬಾತನ ಜತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದರು. ಈತ ಭಾರತೀಯ ಯುವಕರನ್ನು ಸೇರಿಸಿಕೊಳ್ಳುವ ಕೆಲಸ ಮಾಡುತ್ತಿದ್ದ.
ಮಧ್ಯ ಪ್ರದೇಶದಲ್ಲಿ ಇರ್ಫಾನ್ ಖಾನ್ ಎಂಬಾತ ಯುವಕರ ಗುಂಪಿನ ನಾಯಕತ್ವ ವಹಿಸಿಕೊಂಡಿದ್ದ. ಇವರು ಕೇವಲ ಸಂಘಟನೆ ಸೇರುವುದು ಮಾತ್ರವಲ್ಲ, ಭಾರತದಲ್ಲಿ ದಾಳಿ ಮಾಡಲು ಮುಂದಾಗಿದ್ದರು ಎಂದು ಗುಪ್ತಚರ ದಳ ಮಾಹಿತಿ ನೀಡಿದೆ.['ಜಾಣ' ಮೆಹದಿ ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ?]
ಸಿರಿಯಾದಲ್ಲಿ ಹನೀಫ್ ವಾಸೀಂ ಸಾವು
ಸಿರಿಯಾದಲ್ಲಿ ಹೈದರಾಬಾದ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಹನೀಫ್ ವಾಸೀಂ(25ವರ್ಷ) ಸಾವನ್ನಪ್ಪಿರುವುದಾಗಿ ಗುಪ್ತಚರ ಮೂಲಗಳು ತಿಳಿಸಿವೆ. ಹನೀಫ್ ವಾಸೀಂ 2014ರ ನವೆಂಬರ್ ನಲ್ಲಿ ಇಂಜಿನಿಯರಿಂಗ್ ಕಲಿಯಲು ಲಂಡನ್ ಗೆ ತೆರಳಿದ್ದ. ಬಳಿಕ ವಾಸೀಂ ಲಂಡನ್ ನಿಂದ ಸಿರಿಯಾಕ್ಕೆ ತೆರಳಿ ಇಸಿಸ್ ಸಂಘಟನೆ ಸೇರಿದ್ದ.
ಯುವಕರ ಮನವೊಲಿಕೆ ನಿರಂತರ
ತೆಲಂಗಾಣದ ಬಹುತೇಕ ಪ್ರಕರಣಗಳಲ್ಲಿ ಅವರನ್ನು ಮನವೊಲಿಸಿ ವಿಮಾನ ನಿಲ್ದಾಣದಿಂದ ಕರೆತರಲಾಗಿದೆ. ಅಲ್ಲದೇ ನಿರಂತರವಾಗಿ ಕೌನ್ಸಲಿಂಗ್ ಮಾಡಲಾಗಿದೆ. ಮತ್ತೆ ಯುವಕರು ಭಾರತದಿಂದ ಹೊರ ಹೋಗಬಾರದು ಎಂಬುದು ಇದರ ಮುಖ್ಯ ಉದ್ದೇಶ.
ಗುಪ್ತಚರದಳ ಇಂಥ ಪ್ರಕರಣಗಳ ಕುರಿತು ನಿರಂತರ ಮಾಹಿತಿ ಕಲೆ ಹಾಕುತ್ತಿದ್ದರೂ ವಿವಿಧ ವಾಮಮಾರ್ಗಗಳ ಮೂಲಕ ಯುವಕರನ್ನು ಸೆಳೆಯುವ ಯತ್ನ ನಡೆಯುತ್ತಲೇ ಇದೆ. ಇನ್ನು ಇದೇ ಬಗೆಯಲ್ಲಿ ಅದೆಷ್ಟು ಯುವಕರು ಉಗ್ರರ ಮಾತಿಗೆ ಮರುಳಾಗಿದ್ದಾರೋ ಎಂಬ ಸಂಗತಿ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
-
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? -
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು? -
ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್ಗೆ ಬಂಪರ್ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: 'ಸಂಗೀತ' ರಾತ್ರಿಯ ನೆನಪುಗಳನ್ನು ಹಂಚಿಕೊಂಡ ನಟಿ -
RCB: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳ ಆಯೋಜನೆಗೆ ಆರ್ಸಿಬಿ ಒಪ್ಪಿಗೆ -
Dharavi Slum: ಏಷ್ಯಾದ ದೊಡ್ಡ ಕೊಳಗೇರಿ ಧಾರಾವಿಯಲ್ಲಿ ಬಡತನವೂ ಬಂಡವಾಳ, ಧಾರಾವಿ ಸಂಪೂರ್ಣ ವಿವರ ಇಲ್ಲಿದೆ -
ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್ -
ಇರಾನ್-ಇಸ್ರೇಲ್ ಸಂಘರ್ಷ: ಕತಾರ್ನಲ್ಲಿ LNG ಉತ್ಪಾದನೆ ಸ್ಥಗಿತ: ಗಗನಕ್ಕೇರಿದ ತೈಲ ಮತ್ತು ಅನಿಲ ಬೆಲೆ












Click it and Unblock the Notifications