ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರು ಶಿವಸೇನಾ ನಾಯಕರ ಹತ್ಯೆ: NCP ಶಾಸಕ ಸೇರಿ ನಾಲ್ವರ ಬಂಧನ

|
Google Oneindia Kannada News

ಅಹ್ಮದಾಬಾದ್ ನಗರ, ಏಪ್ರಿಲ್ 09: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಂದ ಒಂದು ಗಂಟೆಯಲ್ಲಿ ಇಬ್ಬರು ಶಿವಸೇನಾ ಮುಖಂಡರನ್ನು ಕೊಲೆ ಮಾಡಿದ ಘಟನೆ ಏ.07 ರಂದು ನಡೆದಿದ್ದು ಆತಂಕ ಸೃಷ್ಟಿಸಿದೆ.

ಮೃತರನ್ನು ಸಂಜಯ್ ಕೊಟ್ಕರ್(35) ಮತ್ತು ವಸಂತ್ ಆನಂದ್ ಥುಬೆ (40) ಎಂದು ಗುರುತಿಸಲಾಗಿದೆ.

ಬಿಜೆಪಿ ಮುಖಂಡ ಈಶ್ವರ್ ಕಟೀಲ್ ಕೊಲೆಗೆ ಸಂಚು ? ಮೂವರ ಬಂಧನಬಿಜೆಪಿ ಮುಖಂಡ ಈಶ್ವರ್ ಕಟೀಲ್ ಕೊಲೆಗೆ ಸಂಚು ? ಮೂವರ ಬಂಧನ

ಘಟನೆಗೆ ಸಂಬಂಧಿಸಿದಂತೆ ನ್ಯಾಶ್ನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ) ಶಾಸಕ ಅಂಗ್ರಾಮ್ ಜಗತ್ ಮತ್ತು ಮೂವರನ್ನು ಬಂಧಿಸಲಾಗಿದೆ.

2 Shiv Sena leaders shot dead in Maharashtra

ಶನಿವಾರ ಸಂಜೆ ಸುಮಾರು 5:15 ರ ಸಮಯದಲ್ಲಿ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಹ್ಮದಾಬಾದ್ ನಗರದ ಕೆಡಗಾಂವ್ ನ ಶಾಹುನಗರ ಪ್ರದೇಶದಲ್ಲಿ ಈ ಇಬ್ಬರು ಶಿವಸೇನಾ ಮುಖಂಡರ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶಕ್ಕೂ, ಈ ಕೊಲೆಗೂ ಸಮಬಂಧವಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ. ಕೊಲೆ ರಾಜಕೀಯ ಪ್ರೇರಿತ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳನ್ನು ಏಪ್ರಿಲ್ 12 ರಂದು ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

English summary
Two Shiv Sena leaders – Sanjay Kotkar (35) and Vasant Anand Thube (40) – were allegedly – shot dead in Maharastra's Ahmednagar on April 9th. An NCP MLA and 3 others are arrested by police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X