ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ, ಮೂವರು ಬಲಿ
ಚಿತ್ರಕೂಟ (ಉತ್ತರ ಪ್ರದೇಶ), ನವೆಂಬರ್, 24: ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಶುಕ್ರವಾರ ಬೆಳಗ್ಗೆ ಪಾಟ್ನಾ- ಗೋವಾ ಮಾರ್ಗದಲ್ಲಿ ವಾಸ್ಕೋಡಿಗಾಮ ಪಾಟ್ನಾ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದೆ.
ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ರೈಲು, 32 ಜನರಿಗೆ ಗಾಯ
2 dead and 8 injured in Vasco De Gama Patna express train accident near UP’s Banda pic.twitter.com/czKOweWz8e
— ANI (@ANI) November 24, 2017
ಉತ್ತರ ಪ್ರದೇಶದ ಬಂಡ ಜಿಲ್ಲೆಯ ಚಿತ್ರಕೂಟದ ಬಳಿ ವಾಸ್ಕೋಡಿಗಾಮ ಪಾಟ್ನಾ ಎಕ್ಸ್ ಪ್ರೆಸ್ ರೈಲು ಇಂದು (ಶುಕ್ರವಾರ) ಬೆಳಗ್ಗೆ ಹಳಿ ತಪ್ಪಿದೆ. ಸಧ್ಯದ ಮಾಹಿತಿ ಪ್ರಕಾರ ಈ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು, 9 ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ತಳಕು ಬಳಿ ಆ್ಯಂಬುಲೆನ್ಸ್ ಗೆ ರೈಲು ಡಿಕ್ಕಿ: ಬಾಣಂತಿ ಸೇರಿ 4 ಸಾವು
ಪಾಟ್ನಾ -ಗೋವಾ ಮಾರ್ಗದಲ್ಲಿ ಸಂಚರಿಸುವ ವಾಸ್ಕೋಡಗಾಮ ಎಕ್ಸ್ ಪ್ರೆಸ್ ಬಂಡ ಜಿಲ್ಲೆಯ ಚಿತ್ರಕೂಟದ ಬಳಿ ಸಂಚರಿಸುವಾಗ ಹಳಿತಪ್ಪಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಪಘಾತದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಬದಲಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ರೈಲು ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಕೇಂದ್ರ ರೈಲ್ವೆ ಸಚಿವ ಪಿಯುಶ್ ಗೋಯಲ್ ಮಾಹಿತಿ ಪಡೆದಿದ್ದಾರೆ.
ಪರಿಹಾರ ಘೋಷಣೆ: ವಾಸ್ಕೋಡಿಗಾಮ ರೈಲು ದುರಂತದಲ್ಲಿ ಸಾವನ್ನಪ್ಪಿದ ಮೂವರು ಕುಟುಂಬಗಳಿಗೆ ತಲಾ 5 ಲಕ್ಷ ರು., ತೀವ್ರವಾಗಿ ಗಾಯಗೊಂಡವರಿಗೆ 1 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 50 ಸಾವಿರು ರು. ಪರಿಹಾರ ನೀಡುವುದಾಗಿ ಪಿಯುಶ್ ಗೋಯಲ್ ಪೋಷಿಸಿದರು.