ಪಾಕ್ ಉದ್ದಟತನಕ್ಕೆ ಮತ್ತೆ ತಕ್ಕ ಉತ್ತರ: 15 ಪಾಕ್ ಸೈನಿಕರ ಹತ್ಯೆ?
ಪಾಕಿಸ್ತಾನದ ಉದ್ದಟತನಕ್ಕೆ ಸರಿಯಾದ ಪಾಠ ಕಲಿಸಿದ್ದು, ಇದುವರೆಗೆ ಹದಿನೈದಕ್ಕೂ ಹೆಚ್ಚು ಸೈನಿಕರೂ ಸೇರಿದಂತೆ ಪಾಕ್ ರೇಂಜರ್ ಗಳನ್ನು ಹತ್ಯೆ ಮಾಡಲಾಗಿದೆ ಎಂದು ಗಡಿ ರಕ್ಷಣಾ ದಳ (ಬಿಎಸ್ಎಫ್) ಶುಕ್ರವಾರ (ಅ 28) ಹೇಳಿದೆ.
ನವದೆಹಲಿ, ಅ 28 (ಪಿಟಿಐ): ಪಾಕಿಸ್ತಾನದ ಉದ್ದಟತನಕ್ಕೆ ಸರಿಯಾದ ಪಾಠ ಕಲಿಸಿದ್ದು, ಇದುವರೆಗೆ ಹದಿನೈದಕ್ಕೂ ಹೆಚ್ಚು ಸೈನಿಕರೂ ಸೇರಿದಂತೆ ಪಾಕ್ ರೇಂಜರ್ ಗಳನ್ನು ಹತ್ಯೆ ಮಾಡಲಾಗಿದೆ ಎಂದು ಗಡಿ ರಕ್ಷಣಾ ಪಡೆ (ಬಿಎಸ್ಎಫ್) ಶುಕ್ರವಾರ (ಅ 28) ಹೇಳಿದೆ.
ಆದರೆ, ತನ್ನ ಆಂತರಿಕ ಸಮಸ್ಯೆಗಳನ್ನು ಬೇರಡೆ ಸೆಳೆಯಲು ಅಲ್ಲಿನ ಸೇನೆ ನಿರಾಧಾರ ಹೇಳಿಕೆ ನೀಡುತ್ತಿದ್ದು, ನಮ್ಮ ಯಾವ ಯೋಧರು ಸಾವನ್ನಪ್ಪಿಲ್ಲ ಎಂದು ಪಾಕ್ ಸೇನೆ ಬಿಎಸ್ಎಫ್ ಹೇಳಿಕೆಗೆ ತಿರುಗೇಟು ನೀಡಿದೆ. (ಪಾಕ್ ಅಧಿಕಾರಿಗಳಿಗೆ ಭಾರತ ಬಿಟ್ಟು ಹೋಗುಲು ಸೂಚನೆ)
ಜಮ್ಮು ಮತ್ತು ಕಾಶ್ಮೀರ ಗಡಿಭಾಗದಲ್ಲಿ ಕದನವಿರಾಮ ಉಲ್ಲಂಘಿಸಿದ ಮತ್ತು ಅಪ್ರಚೋದಿತ ದಾಳಿ ನಡೆಸಿದ ಪಾಕಿಸ್ತಾನದ ಸೇನೆಗೆ ನಮ್ಮ ಯೋಧರು ತಕ್ಕ ಉತ್ತರ ನೀಡಿದ್ದಾರೆ.

ನಮ್ಮ ಸೈನಿಕರು ನಡೆಸಿದ ಪ್ರತಿದಾಳಿಗೆ ಇದುವರೆಗೆ ಕನಿಷ್ಠವೆಂದರೂ ಸುಮಾರು 15 ಪಾಕ್ ರೇಂಜರ್ / ಸೈನಿಕರು ಹತ್ಯೆಯಾಗಿರಬಹುದು ಎಂದು ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿ ಅರುಣ್ ಕುಮಾರ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಒಂದು ವಾರದ ಹಿಂದೆ ಅಂತಾರಾಷ್ಟ್ರೀಯ ಗಡಿಯಲ್ಲಿ ಏಳು ಪಾಕ್ ಸೈನಿಕರನ್ನು ಹತ್ಯೆಗೈಯ್ಯಲಾಗಿದೆ. ಇದುವರೆಗೆ ಎರಡು ಸೈನಿಕರು ಮತ್ತು 13 ರೇಂಜರ್ಸುಗಳು ನಮ್ಮ ಪ್ರತಿದಾಳಿಗೆ ಬಲಿಯಾಗಿದ್ದಾರೆ ಎಂದು ಬಿಎಸ್ಎಫ್ ಅಧಿಕಾರಿಗಳು ಹೇಳಿದ್ದಾರೆ.
ಕಾಶ್ಮೀರದ ಜೊತೆ ಆಂತರಿಕ ಸಮಸ್ಯೆಯ ವಿಷಯದಿಂದ ಭಾರತೀಯರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಭಾರತ ಈ ರೀತಿಯ ಹೇಳಿಕೆ ನೀಡುತ್ತಿದೆ. ಭಾರತದ ಗಡಿ ರಕ್ಷಣಾ ಪಡೆಯ ಅಧಿಕಾರಿಗಳ ಹೇಳಿಕೆ ಸತ್ಯಕ್ಕೆ ದೂರವಾದದು ಎಂದು ಪಾಕ್ ಸೇನೆ ಹೇಳಿಕೊಂಡಿದೆ.












Click it and Unblock the Notifications