ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿ ಪರಿಪೂರ್ಣಾನಂದ-ದಕ್ಷಿಣದ ಯೋಗಿ ಆದಿತ್ಯನಾಥ್ ಬಿಜೆಪಿಗೆ?

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 06: ದಕ್ಷಿಣದ ಯೋಗಿ ಆದಿತ್ಯನಾಥ್ ಎಂದೇ ಕರೆಸಿಕಳ್ಳುವ ಶ್ರೀಪೀಠದ ಸ್ವಾಮಿ ಪರಿಪೂರ್ಣಾನಂದ ಬಿಜೆಪಿಗೆ ಸೇರುವುದು ಬಹುತೇಕ ಖಚಿತವಾಗಿದೆ.

'ನನ್ನ ಸಿದ್ಧಾಂತಗಳು ಮತ್ತು ಬಿಜೆಪಿ ಸಿದ್ಧಾಂತಗಳು ಹೊಂದಿಕೆಯಾದರೆ ಖಂಡಿತ ಬಿಜೆಪಿಗೆ ಸೇರುತ್ತೇನೆ. ನನ್ನಲ್ಲಿ ಆ ಸಾಮರ್ಥ್ಯವಿದ್ದರೆ ಪಕ್ಷವೇ ನನ್ನು ಆರಿಸುತ್ತದೆ' ಎಂದು ತೆಲಂಗಾಣದ ಖ್ಯಾತ ಸ್ವಾಮೀಜಿ ಪರಿಪೂರ್ಣಾನಂದ ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ ಜೀವನಗಾಥೆ ಪುಸ್ತಕ ಭಾರಿ ಮಾರಾಟಯೋಗಿ ಆದಿತ್ಯನಾಥ ಜೀವನಗಾಥೆ ಪುಸ್ತಕ ಭಾರಿ ಮಾರಾಟ

ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಪರಿಪೂರ್ಣಾನಂದ ಅವರನ್ನು ಆರು ತಿಂಗಳ ಕಾಲ ಹೈದರಾಬಾದಿನಿಂದ ಗಡಿಪಾರು ಮಾಡಲಾಗಿತ್ತು. ನಂತರ ಅವರು ಹೈಕೋರ್ಟ್ ಗೆ ಮನವಿ ಸಲ್ಲಿಸಿದ ಪರಿಣಾಮ ಅವರ ಗಡಿಪಾರನ್ನು ತೆರವುಗೊಳಿಸಲಾಗಿತ್ತು.

Will possibly join BJP if ideologies match: Paripoornanada

ದಕ್ಷಿಣ ಭಾರತದ ಯೋಗಿ ಆದಿತ್ಯನಾಥ್ ಎಂದೇ ಪೂರ್ಣಾನಂದ ಅವರನ್ನು ಕರೆಯಲಾಗುತ್ತದೆ. ಆದರೆ ತಮ್ಮನ್ನು ಹಾಗೆ ಕರೆಯುವುದನ್ನು ವಿರೋಧಿಸುವ ಪೂರ್ಣಾನಂದ, 'ಯೋಗಿ ಆದಿತ್ಯನಾಥ್ ಅವರು ರಾಜಕೀಯದಲ್ಲಿ ಪಳಗಿದವರು. ನಾವಿಬ್ಬರೂ ಒಂದೇ ಹಿನ್ನೆಲೆಯಿಂದ ಬಂದವರು, ನಮ್ಮಿಬ್ಬರ ವಯಸ್ಸೂ ಒಂದೇ. ಆದರೆ ಅವರು ರಾಜಕೀಯ ಕ್ಷೇತ್ರದಲ್ಲಿ ನನಗಿಂತ ಪರಿಣಿತರು. ಅವರ ವೈಚಾರಿಕತೆ ಮತ್ತು ಕಾರ್ಯಶೈಲಿ ಭಿನ್ನವಾದುದು. ನಾಲ್ಕು ಬಾರಿ ಸಂಸದರಾದ ಅನುಭವ ಉಳ್ಳವರು. ಆದ್ದರಿಂದ ಈ ಕ್ಷೇತ್ರದಲ್ಲಿ ನಾನು ಅವರಿಗಿಂತ ಬಹಳ ಚಿಕ್ಕವನು' ಎಂದು ವಿಧೇಯವಾಗಿ ಹೇಳುತ್ತಾರೆ.

ಯೋಗಿ ವಿಚಾರಣೆ ಏಕೆ ನಡೆಸಬಾರದು? 4 ವಾರದಲ್ಲಿ ವರದಿ ಕೇಳಿದ ಸುಪ್ರೀಂ ಯೋಗಿ ವಿಚಾರಣೆ ಏಕೆ ನಡೆಸಬಾರದು? 4 ವಾರದಲ್ಲಿ ವರದಿ ಕೇಳಿದ ಸುಪ್ರೀಂ

ಎಲ್ಲವೂ ಅಂದುಕೊಂಡಂತೆ ಆದರೆ ಪೂರ್ಣಾನಂದ ಅವರು ಬಿಜೆಪಿಗೆ ಸೇರುವುದು ನಿಶ್ಚಿತ.

English summary
Sripeetam seer, Swami Paripoornananda, said that he would possibly join the Bharatiya Janata Party (BJP) if their ideologies match. Earlier, reports were doing the rounds that the pontiff, who is being seen as the Yogi Adityanath of Telangana will join the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X