ಸರ್ಜಿಕಲ್ ಸ್ಟ್ರೈಕ್ 2: ನಾವು ಭಾರತ ಸರ್ಕಾರದ ಜೊತೆಗಿದ್ದೇವೆ ಎಂದ ಓವೈಸಿ
ಹೈದರಾಬಾದ್, ಫೆಬ್ರವರಿ 27: 'ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಯನ್ನು ಸ್ವಾಗತಿಸಿರುವ ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ, 'ನಾವು ಭಾರತ ಸರ್ಕಾರದ ಪರವಾಗಿದ್ದೇವೆ' ಎಂದಿದ್ದಾರೆ.
"ಪುಲ್ವಾಮಾ ಘಟನೆ ನಡೆದ 2-3 ದಿನಗಳಲ್ಲಿಯೇ ಭಾರತ ಪಾಕಿಸ್ತಾನದ ವಿರುದ್ಧ ದಾಳಿ ನಡೆಸಬಹುದು ಎಂದು ನಾನು ನಿರೀಕ್ಷಿಸಿದ್ದೆ. ಈಗಲೂ ನಾವು ಭಾರತ ಸರ್ಕಾರದ ಪರವಾಗಿದ್ದೇವೆ" ಎಂದು ಅವರು ಹೇಳಿದ್ದಾರೆ.
"ಈಗ ಭಾರತ ಮೋಸ್ಟ್ ವಾಂಟೆಡ್ ಉಗ್ರರಾದ ಹಫೀಸ್ ಸಯ್ಯದ್ ಮತ್ತು ಮಸೂದ್ ಅಜರ್ ಅವರನ್ನು ಮುಗಿಸಲು ಪ್ರಯತ್ನಿಸಬೇಕು. ಒಂದು ದೇಶ ತನ್ನ ಸ್ವರಕ್ಷಣೆಗಾಗಿ ಶತ್ರು ರಾಷ್ಟ್ರದ ವಿರುದ್ಧ ಹೋರಾಡದೆ ಇದ್ದರೆ ಆ ದೇಶ ಅಸಮರ್ಥ ಎಂದೇ ಅರ್ಥವಾಗುತ್ತದೆ. ಆದ್ದರಿಂದ ಭಾರತದ ಹೋರಾಟಕ್ಕೆ ನಮ್ಮ ಬೆಂಬಲವಿದೆ" ಎಂದರು.

ಫೇಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ 44 ಭಾರತೀಯ ಯೋಧರು ಹುತಾತ್ಮರಾದ ನಂತರ ಭಾರತ ಮಂಗಳವಾರದಂದು ಪಾಕಿಸ್ತಾನದ ಉಗ್ರನೆಲೆಯ ಮೇಲೆ ವೈಮಾನಿಕ ದಾಳಿ ನಡೆಸಿ, ಉಗ್ರನೆಲೆಯನ್ನು ಧ್ವಂಸಗೊಳಿಸಿದೆ.












Click it and Unblock the Notifications