ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ, 18 ಮಂದಿ ಸಾವು
ರಾಜಮಂಡ್ರಿ, ಸೆ. 14: ಪೂರ್ವ ಗೋದಾವರಿ ಜಿಲ್ಲೆಯ ಗುಂಡಪಲ್ಲಿ ಸಮೀಪದ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸುಮಾರು 18 ಮಂದಿ ಸ್ಥಳದಲ್ಲೇ ಸಾವನನ್ನಪ್ಪಿರುವ ದುರ್ಘಟನೆ ನಡೆದಿದೆ. ಮೃತಪಟ್ಟವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ.
ಕಾರ್ಮಿಕರು
ಚಿಂತಪೂಡಿ
ಎಂಬಲ್ಲಿಗೆ
ಕೂಲಿ
ಕೆಲಸಕ್ಕೆ
ಲಾರಿಯೊಂದರಲ್ಲಿ
ತೆರಳುತ್ತಿದ್ದರು.
ಆಂಧ್ರದ
ಪೂರ್ವ
ಗೋದಾವರಿ
ಜಿಲ್ಲೆಯ
ಗುಂಡಪಲ್ಲಿ
ಸಮೀಪ
ತಿರುವೊಂದರಲ್ಲಿ
ಲಾರಿ
ಪಲ್ಟಿ
ಹೊಡೆದ
ಪರಿಣಾಮ
ಮಂದಿ
ಸ್ಥಳದಲ್ಲೇ
ಸಾವನ್ನಪ್ಪಿದ್ದು,
16
ಕೂಲಿ
ಕಾರ್ಮಿಕರಿಗೆ
ಗಾಯಗಳಾಗಿದ್ದು,
ಗಾಯಾಳುಗಳನ್ನು
ರಾಜಮಂಡ್ರಿ
ಆಸ್ಪತ್ರೆಗೆ
ದಾಖಲಿಸಲಾಗಿದೆ.
ಮೃತರು
ತೊಂಡಂಗಿ,
ಅನ್ನಾವರಂ
ಗ್ರಾಮದ
ನಿವಾಸಿಗಳಾಗಿದ್ದಾರೆ.
ಘಟನಾ ಸ್ಥಳಕ್ಕೆ ಹಣಕಾಸು ಸಚಿವ ವೈ ರಾಮಕೃಷ್ಣುಡು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತಿವೇಗ, ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದೆ. ಘಟನಾ ಸ್ಥಳದಿಂದ ಲಾರಿ ಚಾಲಕ, ಕ್ಲೀನರ್ ಪರಾರಿಯಾಗಿದ್ದಾರೆ.ಕೂಲಿ ಕಾರ್ಮಿಕರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಆಂಧ್ರ ಪ್ರದೇಶ ಸರಕಾರ ಘೋಷಿಸಿದೆ. ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ವಿಪಕ್ಷ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿ ಮುಂತಾದವರು ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.