ಚಿತ್ರಗಳಲ್ಲಿ : ಕೃಷ್ಣಾ ನದಿ ಪುಷ್ಕರೋತ್ಸವ ಸಂಭ್ರಮ
ವಿಜಯವಾಡ, ಆಗಸ್ಟ್ 16: ಶ್ರಾವಣ ಮಾಸದಲ್ಲಿ ಕೃಷ್ಣಾ ನದಿಯಲ್ಲಿ ತೀರ್ಥಸ್ನಾನ ಮಾಡುವ 'ಪುಷ್ಕರೋತ್ಸವ'ಕ್ಕೆ ದೇಶದೆಲ್ಲೆಡೆಯಿಂದ ಜನಸಾಗರ ಹರಿದು ಬರುತ್ತಿದೆ.12 ದಿನಗಳ ಈ ಪವಿತ್ರ ಸ್ನಾನ ಹಬ್ಬ ಆರಂಭವಾಗಿ ಮೂರು ದಿನ ಕಳೆದರೂ ಲಕ್ಷಾಂತರ ಭಕ್ತರ ಸಮೂಹದ ಪಾಪಗಳನ್ನು 'ಕೃಷ್ಣೆ' ತೊಳೆದಿದ್ದಾಳೆ.
ವಿಜಯವಾಡಾದ ದುರ್ಗಾ ಘಾಟ್ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಳೆದ ಶುಕ್ರವಾರ ಬೆಳಗ್ಗೆ ಪುಷ್ಕರಾಲು ಉತ್ಸವಕ್ಕೆ ಚಾಲನೆ ನೀಡಿದರು. 2 ವಾರ ನಡೆಯಲಿರುವ ಉತ್ಸವದಲ್ಲಿ ಸುಮಾರು 3.5 ಕೋಟಿ ಜನ ಪಾಲ್ಗೊಂಡು ಪವಿತ್ರ ತೀರ್ಥಸ್ನಾನ ಮಾಡುವ ನಿರೀಕ್ಷೆ ಇದೆ. ಈಗಾಗಲೇ ದೇಶದೆಲ್ಲೆಡೆಯಿಂದ 25 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಕೃಷ್ಣಾ ನದಿ ಸ್ನಾನ ಮಾಡಿದ್ದಾರೆ ಎಂದು ಆಂಧ್ರಸರ್ಕಾರ ಪ್ರಕಟಿಸಿದೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]
ಗುರುಗ್ರಹ ಕನ್ಯಾ ರಾಶಿ ಪ್ರವೇಶಿಸುವ ಸಂದರ್ಭದಲ್ಲಿ ಕೃಷ್ಣಾ ನದಿಗೆ ಗಂಗೆಯ ಪಾವಿತ್ರ್ಯ ಬರುತ್ತದೆ ಎಂಬ ನಂಬಿಕೆ ಭಕ್ತ ರಲ್ಲಿದೆ. ಪಥ ಬದಲಾಗುವ ದಿನದಂದು ಕೃಷ್ಣಾ ನದಿ ದಡದ ಪ್ರದೇಶಗಳಲ್ಲಿ ಪುಷ್ಕರೋತ್ಸವ ಆರಂಭವಾಗುತ್ತದೆ. ಈ ವೇಳೆ ಭಕ್ತರು ಕೃಷ್ಣೆಯಲ್ಲಿ ತೀರ್ಥಸ್ನಾನ ಮಾಡುತ್ತಾರೆ.[ಗ್ಯಾಲರಿ: ಪುಷ್ಕರೋತ್ಸವದಲ್ಲಿ ಮಿಂದೆದ್ದ ಭಕ್ತಾದಿಗಳು]

12 ದಿನಗಳ ಈ ಪವಿತ್ರ ಸ್ನಾನ ಹಬ್ಬ
ವಿಜಯವಾಡ ದುರ್ಗಾ ಘಾಟ್ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಳೆದ ಶುಕ್ರವಾರ ಬೆಳಗ್ಗೆ ಪುಷ್ಕರಾಲು ಉತ್ಸವಕ್ಕೆ ಚಾಲನೆ ನೀಡಿದರು.

ಕಂಚಿ ಮಠ ಶ್ರೀಗಳಿಂದ ಪವಿತ್ರ ಸ್ನಾನ
ಕಂಚಿಯ ಶಂಕರಾಚಾರ್ಯ ಪೀಠದ ಮಠಾಧೀಶ ಜಯೇಂದ್ರ ಸರಸ್ವತಿ ಸ್ವಾಮೀಜಿಗಳು ಕೃಷ್ಣಾನದಿಯಲ್ಲಿ ಪವಿತ್ರ ಸ್ನಾನ ಕೈಗೊಂಡರು.

3.5 ಕೋಟಿ ಜನ ಪಾಲ್ಗೊಳ್ಳುವ ನಿರೀಕ್ಷೆ
2 ವಾರ ನಡೆಯಲಿರುವ ಉತ್ಸವದಲ್ಲಿ ಸುಮಾರು 3.5 ಕೋಟಿ ಜನ ಪಾಲ್ಗೊಂಡು ಪವಿತ್ರ ತೀರ್ಥಸ್ನಾನ ಮಾಡುವ ನಿರೀಕ್ಷೆ ಇದೆ. ಈಗಾಗಲೇ ದೇಶದೆಲ್ಲೆಡೆಯಿಂದ 25 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಕೃಷ್ಣಾ ನದಿ ಸ್ನಾನ ಮಾಡಿದ್ದಾರೆ ಎಂದು ಆಂಧ್ರಸರ್ಕಾರ ಪ್ರಕಟಿಸಿದೆ.

ಕರ್ನಾಟಕದಲ್ಲೂ ಪುಷ್ಕರೋತ್ಸವ ನಡೆಯುತ್ತದೆ
ದೇಶದ ಅನೇಕ ಜೀವ ನದಿಗಳು ಗಂಗೆಯ ಪಾವಿತ್ರ್ಯ ಹೊಂದುತ್ತವೆ ಎಂಬುದು ಭಕ್ತರ ನಂಬಿಕೆಯಿದೆ. ಅದರಂತೆ ರಾಜ್ಯದ ಕೋಲಾರ, ಚಿಕ್ಕೋಡಿ, ಕೂಡಲಸಂಗಮ ಮತ್ತಿತರ ಪ್ರದೇಶಗಳಲ್ಲೂ ಪುಷ್ಕರೋತ್ಸವ ಆಚರಿಸಲಾಗುತ್ತದೆ.

ಏನಿದು ಪುಷ್ಕರೋತ್ಸವ
ಗುರುಗ್ರಹ ಕನ್ಯಾ ರಾಶಿ ಪ್ರವೇಶಿಸುವ ಸಂದರ್ಭದಲ್ಲಿ ಕೃಷ್ಣಾ ನದಿಗೆ ಗಂಗೆಯ ಪಾವಿತ್ರ್ಯ ಬರುತ್ತದೆ ಎಂಬ ನಂಬಿಕೆ ಭಕ್ತ ರಲ್ಲಿದೆ. ಪಥ ಬದಲಾಗುವ ದಿನದಂದು ಕೃಷ್ಣಾ ನದಿ ದಡದ ಪ್ರದೇಶಗಳಲ್ಲಿ ಪುಷ್ಕರೋತ್ಸವ ಆರಂಭವಾಗುತ್ತದೆ. ಈ ವೇಳೆ ಭಕ್ತರು ಕೃಷ್ಣೆಯಲ್ಲಿ ತೀರ್ಥಸ್ನಾನ ಮಾಡುತ್ತಾರೆ.
ಗುರುಗ್ರಹ ವಿವಿಧ ರಾಶಿ ಪ್ರವೇಶಿಸಿದ ಸಂದರ್ಭದಲ್ಲಿ ಆಯಾ ರಾಶಿಗನುಗುಣವಾಗಿ ದೇಶದ ಇತರ 12 ನದಿಗಳ ತಟದಲ್ಲೂ ಪುಷ್ಕರೋತ್ಸವ ಆಯೋಜಿಸಲಾಗುತ್ತದೆ. ಚಿತ್ರದಲ್ಲಿ ತೆಲಂಗಾಣ ಸಿಎಂ ಚಂದ್ರಶೇಖರ್

ಟಿಟಿಡಿಯಿಂದ ಸಕಲ ವ್ಯವಸ್ಥೆ
ಪುಷ್ಕರೋತ್ಸವದ ಸಂದರ್ಭ ಪ್ರತಿ ದಿನ ಸುಮಾರು ಒಂದು ಲಕ್ಷ ಜನರಿಗೆ ಉಚಿತವಾಗಿ ಆಹಾರ ವಿತರಿಸಲಾಗುತ್ತದೆ.ತಿರುಪತಿ ವೆಂಕಟೇಶ್ವರ ದೇಗುಲದ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ತೀರ್ಥಸ್ನಾನದ ನಿರ್ವಹಣೆ, ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಮುಂದಾಗಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications