ಮುತ್ತಿನ ನಗರಿಯ ಮತ್ತೇರಿಸಿದ ಚೆಲುವೆ ಇವಾಂಕಾ ಟ್ರಂಪ್!
ಹಲವುದಿನಗಳಿಂದ ಅಪರೂಪದ ಅತಿಥಿಯೊಬ್ಬರನ್ನು ಬರಮಾಡಿಕೊಳ್ಳಲು ಮುತ್ತಿನ ನಗರಿ ಹೈದರಾಬಾದ್ ತವಕದಿಂದ ಕಾಯುತ್ತಿತ್ತು. ಆ ತವಕಕ್ಕೆ, ಕಾತರಕ್ಕೆ ಅಂತೂ ಮುಹೂರ್ತ ಕೂಡಿಬಂದಿದೆ. ಮುತ್ತಿನ ನಗರಿಗೆ ತಮ್ಮ ನಗುವಿನಿಂದಲೇ ಮತ್ತೇರಿಸಲು ಇಂದು(ನ.28) ಬೆಳಿಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಆಗಮಿಸಿದ್ದಾರೆ.
ಗ್ಯಾಲರಿ : ಮುತ್ತಿನನಗರಿಯಲ್ಲಿ ಟ್ರಂಪ್ ಪುತ್ರಿ ಇವಾಂಕಾ
'ಪ್ರಥಮ ಪುತ್ರಿ'ಯ ಆಗಮನಕ್ಕಾಗಿ ಹೈದರಾಬಾದಿನ ಗಲ್ಲಿಗಲ್ಲಿಗಳು ಸಿಂಗರಿಸಿಕೊಂಡಿವೆ, ರಸ್ತೆಗಳು ಹೊಸ ಒನಪು ಪಡೆದಿವೆ. ಇಲ್ಲಿ ನಡೆಯಲಿರುವ ಜಾಗತಿಕ ಉದ್ಯಮಶೀಲ ಶೃಂಗಸಭೆಯಲ್ಲಿ ಪಾಲಗೊಳ್ಳುವುದಕ್ಕಾಗಿ ಆಗಮಿಸಿರುವ ಇವಾಂಕಾ, ಈ ಮೊದಲದು ಹಲವು ಬಾರಿ ಭಾರತಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು.
ಈ ಶೃಂಗಸಭೆಯಲ್ಲಿ 127 ಕ್ಕೂ ಅಧಿಕ ದೇಶದ 1200 ಯುವ ಉದ್ಯಮಿಗಳು ಭಾಗವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಇವಾಂಕಾ ಟ್ರಂಪ್ ಮಾತನಾಡಲಿದ್ದಾರೆ.
ಇವಾಂಕ್ ಟ್ರಂಪ್ ಈಗಾಗಲೇ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದು, ಇವಾಂಕಾ ಟ್ರಂಪ್ ರನ್ನು ಹಲವರು ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.
|
ಪ್ರತಿತಿಂಗಳೂ ಯಾವುದಾದರೂ ಸೆಲೆಬ್ರಿಟಿಗಳು ಬರುತ್ತಿರಬೇಕು!
ಇವಾಂಕಾ ಟ್ರಂಪ್ ಬಂದಂತೆಯೇ ಪ್ರತಿತಿಂಗಳೂ ಭಾರತದ ಬೇರೆ ಬೇರೆ ಪ್ರದೇಶಕ್ಕೆ ವಿದೇಶದ ಯಾರಾದರೂ ಸೆಲೆಬ್ರಿಟಿಗಳು ಬರುತ್ತಿರಬೇಕು. ಆಗ ಮಾತ್ರ ಎಲ್ಲ ಕಡೆ ಸ್ವಚ್ಛವಾಗಿರುತ್ತದೆ ಎಂದು ಶಿವಾನಂದ್ ಚಾವನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಭಾರತಕ್ಕೆ ಸ್ವಾಗತ
ಇವಾಂಕಾ ಟ್ರಂಪ್ ಅವರಿಗೆ ಭಾರತಕ್ಕೆ ಸ್ವಾಗತ. ನಿಮ್ಮ ಭೇಟಿ ನಮ್ಮ ಹೈದರಾಬಾದ್ ಅನ್ನು ಮತ್ತಷ್ಟು ಸುಂದರ, ಶುದ್ಧ, ಭದ್ರಗೊಳಿಸಿದೆ ಎಂದು ಗಲ್ಲೇರಿ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಇವಾಂಕಾ ಬಳೆ ಬೇಕಾ..?!
ಭಾರತ-ಅಮೆರಿಕ ಬಾಂಧವ್ಯದ ಸಂಕೇತವಾಗಿ ಹೈದರಾಬಾದಿನ ಲಾಡ್ ಬಜಾರ್ ನಲ್ಲಿ ತಯಾರಿಸಿದ ಬಳೆಗಳಿಗೆ ಇವಾಂಕಾ ಬಳೆ ಎಂದು ಹೆಸರಿಡಲಾಗಿದೆ!
|
ಸಮಸ್ತ ಹೈದರಾಬಾದಿಗಳಿಂದ ಇವಾಂಕಾಗೆ ಕೃತಜ್ಞತೆ
ಸಮಸ್ತ ಹೈದರಾಬಾದಿಗಲಿಂದ ಇವಾಂಕಾ ಟ್ರಂಪ್ ಅವರಿಗೆ ಧನ್ಯವಾದಗಳು. ನಿಮ್ಮ ಆಗಮನದಿಂದಾಗಿ ನಮ್ಮ ರಸ್ತೆಗಳು ಸುಂದರವಾಗಿವೆ, ರಸ್ತೆಗುಂಡಿಗಳು ಮುಚ್ಚಿವೆ, ಟ್ರಅಫಿಕ್ ಸಮಸ್ಯೆ ಕಡಿಮೆಯಾಗಿದೆ! ನಗರ ಅಲಂಕಾರಗೊಂಡಿದೆ ಎಂದು ನರೇಶ್ ಬಾಬು ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಬಣ್ಣಗಳನ್ನು ತಂದ ಇವಾಂಕಾ
ಇವಾಂಕಾ ಟ್ರಂಪ್, ಹೈದರಾಬಾದಿಗೆ ಆಗಮಿಸುತ್ತಿದ್ದಂತೆಯೇ ತಮ್ಮೊಂದಿಗೆ ನಮ್ಮ ನಗರಕ್ಕೂ ಸಾಕಷ್ಟು ಬಣ್ಣಗಳನ್ನು ತಂದಿದ್ದಾರೆ ಎಂದು ತೆಲಗು ಇಂಡಸ್ಟ್ರಿ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications