ಹುಬ್ಬಳ್ಳಿ; ಚರಂಡಿ ನೀರಿನ ನಡುವೆಯೇ ದೇವರ ದರ್ಶನ ಪಡೆದ ಭಕ್ತರು

ಹುಬ್ಬಳ್ಳಿ, ಅಕ್ಟೋಬರ್ 9: ನಿನ್ನೆ ರಾತ್ರಿ‌ ಸುರಿದ ಮಳೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರಿ ಅವಾಂತರವನ್ನೇ ಸೃಷ್ಟಿ ಮಾಡಿದೆ. ನಗರದ ತುಳಜಾ ಭವಾನಿ ದೇವಸ್ಥಾನದಲ್ಲಿ ಮಳೆಯಿಂದ ಚರಂಡಿ ನೀರು ನುಗ್ಗಿ, ಕಸ ತುಂಬಿಕೊಂಡು ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ವಿಜಯ ದಶಮಿ ಹಾಗೂ ಬನ್ನಿ‌ ಹಬ್ಬದಂದು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ. ಆದರೆ ಚರಂಡಿ ‌ನೀರು ದೇವಸ್ಥಾನಕ್ಕೆ‌ ನುಗ್ಗಿದ್ದರಿಂದ ದೇವಸ್ಥಾನದ ಒಳಗೆ ಬರಲು ಪರದಾಡಿದರು. ಈ ಮಧ್ಯೆಯೂ ಮೊಳಕಾಲಿನವರೆಗಿನ ಆ ಚರಂಡಿ ನೀರಿನಲ್ಲಿಯೇ ನಿಂತು ದೇವರ ದರ್ಶನ ಪಡೆದುಕೊಂಡರು.‌

Temple In Hubballi Filled With Drain Water From Rain

ಮಹಾನಗರ ಪಾಲಿಕೆಯವರು ಸರಿಯಾಗಿ ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದೇ ಪ್ಲಾಸ್ಟಿಕ್ ಹಾಗೂ ಕಸ ಕಟ್ಟಿಕೊಂಡು ಒಳಚರಂಡಿ‌ ನೀರು ದೇವಸ್ಥಾನಕ್ಕೆ ನುಗ್ಗಲು ಕಾರಣ. ಇದಕ್ಕೆ ಮಹಾನಗರ ಪಾಲಿಕೆ‌ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+