South Western Railway: ಪ್ರಯಾಣಿಕರು, ಸರಕು ಸೇವೆಯಲ್ಲಿ ಆದಾಯ ಏರಿಕೆ, ಅಂಕಿ-ಸಂಖ್ಯೆ
ಹುಬ್ಬಳ್ಳಿ, ಆಗಸ್ಟ್ 02: ಭಾರತೀಯ ರೈಲ್ವೆ ವ್ಯಾಪ್ತಿಯ ನೈಋತ್ಯ ರೈಲ್ವೆಯು (ಹುಬ್ಬಳ್ಳಿ) ಲಕ್ಷಾಂತರ ಜನರಿಗೆ ಸೇವೆ ನೀಡುತ್ತಿದೆ. ಮಾರ್ಗಗಳು ಸುಧಾರಣಗೊಂಡಿವೆ. ರಾಜ್ಯ, ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ವಲಯವು ಕಳೆದ ತಿಂಗಳ ಜುಲೈನಲ್ಲಿ ಅತ್ಯಧಿಕ ಆದಾಯ ದಾಖಲಿಸಿದೆ.
ಹುಬ್ಬಳ್ಳಿ ನೈರುತ್ಯ ರೈಲ್ವೆ (SWR) ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಅವರು ಆದಾಯ ಏರಿಕೆಯ ಮಾಹಿತಿ ನೀಡಿದ್ದಾರೆ. ರೈಲ್ವೆಯು ಪ್ರಯಾಣಿಕರ ಸೇವೆಯಲ್ಲಿ 2024ರ ಜುಲೈ ತಿಂಗಳಲ್ಲಿ 286.28 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದು ಕಳೆದ ವರ್ಷದ ಜುಲೈ ತಿಂಗಳಿಗಿಂತಲೂ ಶೇಕಡಾ 7.51ರಷ್ಟು ಆದಾಯದಲ್ಲಿ ಏರಿಕೆ ಕಂಡಿದೆ ಎಂದು ಅವರು ಹೇಳಿದ್ದಾರೆ.

ಇನ್ನೂ ಈ ನೈಋತ್ಯ ರೈಲ್ವೆ ಪಾರ್ಸೆಲ್ ವಿಭಾಗದ ಆದಾಯವು ಇದೇ 2024ರ ಜುಲೈ ತಿಂಗಳಲ್ಲಿ 14.19 ಕೋಟಿ ರೂಪಾಯಿಗೆ ಹೆಚ್ಚಳ ಕಂಡಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಬರೀ 12.83 ಕೋಟಿ ರೂಪಾಯಿ ಗಳಿಸಿತ್ತು. ಅದಕ್ಕಿಂತಲೂ ಈ ವರ್ಷ ಶೇಕಡಾ 10.60ರಷ್ಟು ಪ್ರಗತಿ ಆದಾಯದಲ್ಲಿ ಸಾಧ್ಯವಾಗಿದೆ. ವಿವಿಧ ವಿಭಾಗಗಳಲ್ಲಿ ನೈಋತ್ಯ ರೈಲ್ವೆ ತನ್ನ ಆದಾಯ ಹೆಚ್ಚಿಸಿಕೊಂಡು ಗಣನೀಯ ಬೆಳವಣಿಗೆ ಸಾಧಿಸಿದೆ ಎಂದರು.
ಒಂದೇ ವರ್ಷದಲ್ಲಿ ಆದಾಯದಲ್ಲಿ ಭಾರೀ ಏರಿಕೆ
ಪ್ರಯಾಣಿಕರ ಆದಾಯವು ಈ ಬಾರಿ 286.28 ಕೋಟಿ ರೂ.ಗೆ ತಲುಪಿದ್ದರೆ, ಕಳೆದ ಬಾರಿ ಇದೇ ಜುಲೈ (2023) ಅವಧಿಯಲ್ಲಿ 266.27 ಕೋಟಿ ರೂಪಾಯಿ ಗಳಿಸಿತ್ತು. ಸದ್ಯ ಈ ವರ್ಷ ಪ್ರಯಾಣಿಕರ ಆದಾಯದಲ್ಲಿ 20.01 ಕೋಟಿ ರೂಪಾಯಿ ಏರಿಕೆ ಆಗಿದೆ ಎಂದ ಅವರು ಪುನರುಚ್ಚರಿಸಿದರು.
ನೈಋತ್ಯ ರೈಲ್ವೆಯ ಇತರ ಕೋಚಿಂಗ್ ಆದಾಯವು ಕಳೆದ ವರ್ಷ 23.67 ಕೋಟಿ ರೂ.ಗಳಷ್ಟಿದ್ದರೆ, ಈ ಸಲ 25.01 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಅಧಿಕಾರಿ, ಸಿಬ್ಬಂದಿ ಹಾಗೂ ರೈಲ್ವೆಯ ಉಪಕ್ರಮಗಳಿಂದಾಗಿ ಈ ವರ್ಷ ಹೆಚ್ಚುವರಿಯಾಗಿ 1.34 ಕೋಟಿ ರೂ ಸಂಗ್ರವಾಗಿದೆ. ಈ ಕೋಚಿಂಗ್ ಆದಾಯದಲ್ಲಿ ರೈಲ್ವೆ ಶೇಕಡಾ 5.66ರಷ್ಟು ಏಳಿಗೆ ಸಾಧಿಸಿದೆ.

ಇನ್ನೂ ಪಾರ್ಸೆಲ್ ಸೇವೆಗಳ ವಿಭಾಗದಲ್ಲಿ ಮೇಲೆ ತಿಳಿಸಿದಂತೆ ಈ ವರ್ಷ 14.19 ಕೋಟಿ ರೂ. ಗಳಿಕೆ ಮೂಲಕ ಶೇಕಡಾ 10.6ರಷ್ಟು ಪ್ರಗತಿ ಸಾಧಿಸಲಾಗಿದೆ.
ಪ್ರಯಾಣಿಕರ ಸಂಖ್ಯೆ 13.25 ಮಿಲಿಯನ್ಗೆ ಏರಿಕೆ
ಕಳೆದ ಒಂದೇ ತಿಂಗಳಲ್ಲಿನಲ್ಲಿ ನೈಋತ್ಯ ರೈಲ್ವೆಗಳಲ್ಲಿ ಒಟ್ಟು 13.25 ಮಿಲಿಯನ್ ಇದೆ. ಹಿಂದಿಗಿಂತ ಈ ವರ್ಷ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 1.92ರಷ್ಟು ಹೆಚ್ಚಾಗಿದೆ. ಇನ್ನೂ ಟಿಕೆಟ್ ಪರಿಶೀಲನಾಕಾರರ ಪರಿಣಾಮಕಾರಿ ಟಿಕೆಟ್ ತಪಾಸಣಾ ಕಾರ್ಯದಿಂದಾಗಿ ಈ ವಲಯದಲ್ಲಿ 0.42 ಲಕ್ಷ ಪ್ರಕರಣ ಪತ್ತೆ ಆಗಿದೆ. ಟಿಕೆಟ್ ರಹಿತ ಪ್ರಯಾಣಿಕರಿಂದ ಜುಲೈ ಒಂದೇ ತಿಂಗಳಲ್ಲಿ ಒಟ್ಟು2.37 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಸಂಗ್ರಹವಾಗಿದೆ.
ಸರಕು ಆದಾಯವು 329.68 ಕೋಟಿ ರೂ.
ಜುಲೈ 2024 ರಲ್ಲಿ ಸರಕು ಆದಾಯವು 329.68 ಕೋಟಿ ರೂ.ಗಳಾಗಿದೆ. ಇದು ನೈಋತ್ಯ ರೈಲ್ವೆಯ ಒಟ್ಟಾರೆ ಆದಾಯಕ್ಕೆ ಗಮನಾರ್ಹ ಕೊಡುಗೆ ನೀಡಿದೆ. ಇದರೊಂದಿಗೆ ನೈಋತ್ಯ ವಲಯವು ಇತರ ಎಲ್ಲ ವಿಭಾಗಗಳಲ್ಲಿ ಇನ್ನಷ್ಟು ಆರ್ಥಿಕ ಪ್ರಗತಿ ಸಾಧಿಸಲು ಶ್ರಮಿಸಲಿದೆ. ಒಂದೇ ತಿಂಗಳಲ್ಲಿ ಕಂಡು ಬಂದ ಈ ಆರ್ಥಿಕ ಕಾರ್ಯಕ್ಷಮತೆಯು ರೈಲ್ವೆಯ ಸೇವೆಗಳು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸಾರಿಗೆ ಹೇಳುತ್ತದೆ. ಸೇವೆಯಲ್ಲಿನ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ
ನೈಋತ್ಯ ರೈಲ್ವೆಯು ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸಲು ಮತ್ತು ಗ್ರಾಹಕರ ಅಗತ್ಯಗಳನ್ನು ಪೂರೈಸಲು ಮುಂದೆಯೂ ಬದ್ಧವಾಗಿದೆ ಎಂದ ಕನಮಡಿ ಅವರು, ಈ ಸಾಧನೆ ಮಾಡಿದ್ದಕ್ಕಾಗಿ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಅರವಿಂದ್ ಶ್ರೀವಾಸ್ತವ ಅವರು ವಲಯದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಇದೇ ರೀತಿ ಕಾರ್ಯ ಮುಂದುವರಿಸುಂತೆ ಹುರಿದುಂಬಿಸಿದರು.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications