ಯಡಿಯೂರಪ್ಪ, ಸಿದ್ದರಾಮಯ್ಯ ಭೇಟಿ, ಹೊಸ ರಾಜಕೀಯ ಆಟಕ್ಕೆ ಮುನ್ನುಡಿಯೇ?

Recommended Video

      ಯಡಿಯೂರಪ್ಪ, ಸಿದ್ದರಾಮಯ್ಯ ಭೇಟಿ, ಹೊಸ ರಾಜಕೀಯ ಆಟಕ್ಕೆ ಮುನ್ನುಡಿಯೇ? | Oneindia Kannada

      ಹುಬ್ಬಳ್ಳಿ, ಫೆಬ್ರವರಿ 25: ನಿತ್ಯವೂ ಒಂದಲ್ಲಾ ಒಂದು ವಿಷಯದಲ್ಲಿ ಟ್ವಿಟ್ಟರ್ ಸೇರಿದಂತೆ ಸಂದರ್ಭ ಸಿಕ್ಕಾಗಲೆಲ್ಲಾ ಒಬ್ಬರನ್ನೊಬ್ಬರ ಕಾಲೆಳೆಯುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದರು.

      ಅವರಿಬ್ಬರನ್ನು ನೋಡಿ ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ, ಇವರ ಭೇಟಿಯಿಂದ ಹೊಸ ರಾಜಕೀಯ ಆಟ ಪ್ರಾರಂಭವಾಗಬಹುದೇ ಎಂಬ ಸಂದೇಹ ಬಂದಿದ್ದಂತೂ ಸತ್ಯ.

      ಬೆಂಗಳೂರಿನಿಂದ ಒಂದೇ ವಿಮಾನದಲ್ಲಿ ಆಗಮಿಸಿದ ಉಭಯ ನಾಯಕರು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಉಭಯ ಕುಶಲೋಪರಿ ವಿನಿಮಯ ಮಾಡಿಕೊಂಡರು. ಬೇರೆ ಬೇರೆ ಕಾರ್ಯಕ್ರಮಗಳಿಗೆ ತೆರಳಬೇಕಿದ್ದ ಕಾರಣ ಉಭಯ ನಾಯಕರು ತಕ್ಷಣ ಸ್ಥಳದಿಂದ ತೆರಳಿದರು.

      ಇದಕ್ಕೂ ಮುನ್ನ ದಲಿತರಿಗೆ ಅನ್ಯಾಯ ಆಗಿದೆ ಎಂಬುದನ್ನು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ಅವರೇ ಒಪ್ಪಿಕೊಂಡಿದ್ದಾರೆ.

      ಕಾಂಗ್ರೆಸ್​ನಲ್ಲಿ ಪ್ರತಿ ಬಾರಿ ದಲಿತರಿಗೆ ಅನ್ಯಾಯ ಆಗುತ್ತಲೇ ಇದೆ. ಕಾಂಗ್ರೆಸ್​ನ ಹಳೆಯ ವಿಚಾರವನ್ನು ಪರಮೇಶ್ವರ್​ ಅವರು ಈಗ ಹೇಳಿದ್ದಾರೆ ಎಂದು ಬಿಎಸ್​ವೈ ತಿಳಿಸಿದರು.

      Siddaramaiah and bs yeddyurappa met in Hubballi airport

      ಈ ಸಂದರ್ಭದಲ್ಲಿ ತಮ್ಮ ಉಭಯ ನಾಯಕರ ಭೇಟಿ ಮತ್ತು ಅವರ ನಡುವೆ ನಡೆದ ಮಾತುಕತೆ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಸಿದ್ದರಾಮಯ್ಯ ಅವರನ್ನು ಕೇಳಿ ಎಂದು ಬಿಎಸ್​ ಯಡಿಯೂರಪ್ಪ ಅಲ್ಲಿಂದ ತೆರಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+