Get Updates
Get notified of breaking news, exclusive insights, and must-see stories!

'ಮಹದಾಯಿ' ಯೋಜನೆ ಆರಂಭಿಲಾಗುವುದು, ನಾಳೆಯೇ ಜಲಾನಯನಕ್ಕೆ ಭೇಟಿ: ಪ್ರಹ್ಲಾದ್ ಜೋಶಿ ಕೊಟ್ರು ಅಪ್ಡೇಟ್

ಹುಬ್ಬಳ್ಳಿ, ಜುಲೈ 02: ಉತ್ತರ ಕರ್ನಾಟಕದ ಜನರ ಜೀವನಾಡಿಯಾಗಿರುವ ಮಹಾದಾಯಿ ನದಿ ಯೋಜನೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಪ್ರವಾಹ ತಂಡ ಯೋಜನಾ ಸ್ಥಳಕ್ಕೆ ಭೇಟಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಯೋಜನೆ ಆರಂಭವಾಗುವ ಕುರಿತು ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೇ ಅಪ್ಡೇಟ್ ನೀಡಿದ್ದಾರೆ.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಳಸಾ- ಬಂಡೂರಿ ತಿರುವು ಯೋಜನೆಗೆ ಯಾವುದೇ ಅಡ್ಡಿಪಡಿಸುವ ಕೆಲಸ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಗೋವಾ ಸರ್ಕಾರದ ಆಗ್ರಹದ ಮೇರೆಗೆ ಕೇಂದ್ರ ಸರ್ಕಾರ ರಚನೆ 'ಪ್ರವಾಹ' ಆಗಿಲ್ಲ. ಇದೊಂದು ಎಲ್ಲ ಜಲವಿವಾದಕ್ಕೆ ಸಂಬಂಧಿಸಿದ ಪ್ರವಾಹ ತಂಡ ಅಷ್ಟೇ ಎಂದರು.

Pralhad Joshi Clarifies on Mahadayi River Project Begins and He Urges Muda Scam Handover to CBI

ಯಾವುದೇ ಜಲವಿವಾದ ಇದ್ದರು ಪರಿಶೀಲನೆ ಮಾಡುತ್ತದೆ. ಇದೊಂದು Progressive River Authority For Water and Harmony ತಂಡ ಎಂದು ಅವರು ಹೇಳಿದರು.

ಜುಲೈ 7ಕ್ಕೆ ಮಹದಾಯಿ ಜಲಾನಯನಕ್ಕೆ ಭೇಟಿ

ಇದೇ ವಿಚಾರವಾಗಿ ನಾಳೆ ಜುಲೈ 7 ರಂದು ಮಹದಾಯಿ ಜಲಾನಯನಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಲಾಗುತ್ತದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ ಮುಂದಾಳತ್ವ ವಹಿಸಿಲ್ಲ. ಕಳಸಾ- ಬಂಡೂರಿ ಯೋಜನೆಗೆ ಒಳಪಟ್ಟ 12 ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಸಂಜೆ 6ಕ್ಕೆ ಬೆಳಗಾವಿಯಲ್ಲಿ ವಾಸ್ತವ್ಯ ಮಾಡುವರು'. ಮುಖ್ಯವಾಗಿ ಇದರಲ್ಲಲಿ ಯಾವುದೇ ಸರ್ಕಾರದ ಪಾತ್ರ ಇರುವುದಿಲ್ಲ ಎಂದು ತಿಳಿಸಿದರು.

Pralhad Joshi Clarifies on Mahadayi River Project Begins and He Urges Muda Scam Handover to CBI

ಮಹದಾಯಿ ನದಿ ನೀರಿನ ಹಂಚಿಕೆ ಮಾಡಿ ನ್ಯಾಯಮೂರ್ತಿ ಪಂಚಾಲ ನ್ಯಾಯ ಮಂಡಳಿಯು 2018ರ ಆಗಸ್ಟ್ 14ರಂದು ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ 2020ರ ಫೆಬ್ರುವರಿ 20ರಂದು ತೀರ್ಪು ನೀಡಿತ್ತು. ಇದರ ಅನ್ವಯ ಹಂಚಿಕೆಯ ನೀರನ್ನು ಬಳಸಲು ಪರವಾನಗೆ ಸಿಕ್ಕಿದೆ.

ಕಳಸಾ ಪ್ರದೇಶದಲ್ಲಿ ಅರಣ್ಯ ಪ್ರದೇಶ ಕುರಿತು ಸಹ ಪರಿಶೀಲನೆ ಆಗಲಿದೆ ಎಂದರು.

ಮುಡಾ ಹಗರಣ ಸಿಬಿಐಗೆ ವಹಿಸಲು ಜೋಶಿ ಆಗ್ರಹ

ಮುಡಾ ಹಗರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿದೆ. ಇದು ಸಂಪೂರ್ಣವಾಗಿ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ಇದ್ದೆ ಆಗಿರುವ ಹಗರಣ ಎಂದು ಆರೋಪಿಸಿರುವ ಅವರು, ಜಾಗ ವರ್ಗಾವಣೆ ರ್ಧಾರ ಆಗಿದ್ದು 2017ರಲ್ಲಿ. ಆದರೆ 2014 ರಿಂದ 2018 ರಲ್ಲಿ ಇದರ ಪ್ರಮುಖ ಬೆಳವಣಿಗೆ ನಡೆದಿದೆ. ಏನು ಮಾಡಿಲ್ಲ ಅಂದರೆ ತರಾತುರಿಯಲ್ಲಿ ಜಿಲ್ಲಾಧಿಕಾರಿಯನ್ನು ಏಕೆ ವರ್ಗಾವಣೆ ಮಾಡಲಾಗಿದೆ ಎಂದ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಮತ್ತು ಅವರ ಮಗನ ಅನುಮತಿ ಇಲ್ಲದೆ ಇದು ನಡೆಯಲು ಸಾಧ್ಯವಿಲ್ಲ. ಸ್ವಂತಕ್ಕೆ ಲಾಭ ಮಾಡಿಕೊಳ್ಳಲು ನಡೆದ ದೊಡ್ಡ ಪ್ರಮಾಣದಲ್ಲಿ ನಡೆದ ಭ್ರಷ್ಟಾಚಾರ ಹೀಗಾಗಿ ಪ್ರಕರಣದ ತನಿಖೆಗೆ ಸಿಬಿಐ ಗೆ ವಹಿಸಿಬೇಕು ಎಂದು ಅವರು ಒತ್ತಾಯಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+