ಎಗ್ ರೈಸ್ ನಲ್ಲಿ ಉಳಾಗಡ್ಡಿಯೇ ಇಲ್ಲ; ಈರುಳ್ಳಿ ಬಲು ಕಾಸ್ಟ್ಲಿ!
ಹುಬ್ಬಳ್ಳಿ, ಡಿಸೆಂಬರ್: 08 ಎಗ್ ರೈಸ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ವೆಜ್, ನಾನ್-ವೆಜ್ ಮಂದಿಯೂ ಕೂಡಾ ಎಗ್ ರೈಸ್ ನ್ನು ಇಷ್ಟಪಟ್ಟು ತಿನ್ನುವಂತಾಗಿದೆ. ಹೀಗೆ ನಾನ್ ವೆಜ್ ಇಷ್ಟಪಟ್ಟ ತಪ್ಪಿಗೆ ಜನರ ಜೇಬಿಗೆ ಈಗ ಕತ್ತರಿ ಬೀಳುತ್ತಿದೆ.
ಹೌದು, ಸ್ಪೆಶಲ್ ಎಗ್ಗ್ ರೈಸ್ ಅಂದ್ರೆ ಹೊಟ್ಟೆ ತುಂಬಾ ಊಟ ಮಾಡಿದರಾಯಿತು ಅನ್ನುವ ಜನರೇ ಹೆಚ್ಚು. ಅದರಲ್ಲೂ ಉತ್ತರ ಕರ್ನಾಟಕ ಮಂದಿಗೆ ಎಗ್ ರೈಸ್ ಎಂದರೆ ಪಂಚಪ್ರಾಣ ಅನ್ನುವ ಮಾತಿದೆ. ಆದರೆ ಇದೀಗ ಈ ಮಂದಿಗಷ್ಟೇ ಅಲ್ಲ, ಎಗ್ ರೈಸ್ ಮಾಲೀಕರಿಗೆ ಉಳ್ಳಾಗಡ್ಡಿ ಬೆಲೆ ಏರಿಕೆಯಿಂದ ಭಾರಿ ಹೊಡೆತ ಬೀಳುತ್ತಿದೆ.
ಉತ್ತರ ಕರ್ನಾಟಕ ಎಗ್ ರೈಸ್ ಅಂಗಡಿಗೆ ಹೋಗುವ ಗ್ರಾಹಕರು ಉಳ್ಳಾಗಡ್ಡಿಯೇ ಇಲ್ಲದ ಎಗ್ ರೈಸ್ ನೋಡಿ ನಿರಾಶರಾಗುತ್ತಿದ್ದಾರೆ. ಅಚ್ಚರಿ ಅನಿಸಿದರೂ ಇದು ಸತ್ಯ ಘಟನೆ. ಏಕೆಂದರೆ, ಎಗ್ ರೈಸ್ ಜೊತೆ ಸವಿಯಲು ಅವರಿಗೆ ಸಿಗ್ತಾ ಇರೋದು ಕ್ಯಾಬೇಜ್ ತುರಿ ಮಾತ್ರ.


ಎಗ್ ರೈಸ್ ಇದೆ, ಈರುಳ್ಳಿಯೇ ಇಲ್ಲ!
ಉತ್ತರ ಕರ್ನಾಟಕದ ಮಂದಿಗೆ ಉಳ್ಳಾಗಡ್ಡಿ ಇಲ್ಲದಿದ್ದರೆ ಯಾವ ಆಹಾರವೂ ರುಚಿ ಕೊಡುವುದಿಲ್ಲ. ಹೀಗಿರುವಾಗ ಎಗ್ ರೈಸ್ ನ್ನು ಈರುಳ್ಳಿ ಇಲ್ಲದೇ ತಿನ್ನುವುದಕ್ಕೆ ಆಗುತ್ತಾ. ಹುಬ್ಬಳ್ಳಿ- ಧಾರವಾಡದ ಮಂದಿಗೆ ಎಗ್ ರೈಸ್ ಲಘು ಉಪಹಾರವೂ ಹೌದು, ಕೆಲವರಿಗೆ ಅದು ಊಟವೂ ಹೌದು.

ಡಬಲ್ ಸೆಂಚೂರಿಯತ್ತ ಉಳಾಗಡ್ಡಿ ಬೆಲೆ
ಎಗ್ ರೈಸ್ ಮೇಲೆ ಹೆಚ್ಚಿದ ಉಳ್ಳಾಗಡ್ಡಿ ಉದುರಿಸಿಕೊಂಡು ತಿಂದರೆ ಅದರ ಮಜವೇ ಬೇರೆ. ಆದ್ರೆ, ಸದ್ಯದ ಮಟ್ಟಿಗೆ ಇದು ಸಾಧ್ಯವಿಲ್ಲ. ಏಕೆಂದರೆ ಉಳ್ಳಾಗಡ್ಡಿ ಬೆಲೆ ಈಗಾಗಲೇ ಮುಗಿಲು ಮುಟ್ಟಿದೆ. ಕೆಜಿ ಉಳಾಗಡ್ಡಿಗೆ 100 ಮತ್ತು ಉತ್ತಮ ಉಳಾಗಡ್ಡಿಗೆ 200 ರೂಪಾಯಿಯಷ್ಟಿದೆ. ಈರುಳ್ಳಿ ದರ ಹೆಚ್ಚಳಕ್ಕೆ ಎಗ್ ರೈಸ್ ವ್ಯಾಪಾರಿಗಳು ಹಾಗೂ ಗ್ರಾಹಕರು ದಂಗಾಗಿದ್ದಾರೆ. ಏಕೆಂದರೆ, ಈಗಾಗಲೇ ವ್ಯಾಪಾರ ಕೂಡಾ ಕುಂಠಿತವಾಗಿದ್ದು ವ್ಯಾಪಾರಸ್ಥರು ಥಂಡಾ ಹೊಡೆದಿದ್ದಾರೆ.

ರೈತರಿಗೆ ಹಣ ಕೊಟ್ಟರೆ ಏನಾಗುತ್ತೆ ಬಿಡ್ರಿ
ಬಹಳ ವರ್ಷಗಳ ನಂತರ ಉಳ್ಳಾಗಡ್ಡಿಗೆ ಒಳ್ಳೆಯ ಬೆಲೆ ಬಂದಿದೆ. ಬೆಲೆ ಇಲ್ಲದಾಗ ರೈತ ನಷ್ಟ ಅನುಭವಿಸಿಲ್ವಾ..? ಈಗ ಬೆಲೆ ಬಂದಿದೆ ಲಾಭ ಮಾಡಿಕೊಳ್ಳಲಿ ಬಿಡಿ ಎನ್ನುವುದು ಕೆಲವರ ವಾದವಾಗಿದೆ. ಆದರೆ, ತುರ್ತು ಹಸಿವು ನೀಗಿಸಿಕೊಳ್ಳಲು ಅಗ್ಗದ ದರಕ್ಕೆ ಸಿಗುವ ಎಗ್ ರೈಸ್ ಅವಲಂಭಿಸಿರುವ ಸಾಮಾನ್ಯರ ಜೇಬಿಗೆ ಇದರಿಂದ ಕತ್ತರಿ ಬೀಳುತ್ತಿದೆ.

ಈರುಳ್ಳಿ ಹಾಕಿದ ಎಗ್ ರೈಸ್ ತಿನ್ನೋದ್ಯಾವಾಗ?
ಉಳ್ಳಾಗಡ್ಡಿ ಬೆಲೆ ಎಫೆಕ್ಟ್ ಈಗ ಅವಳಿ ನಗರದ ಜನರ ನೆಚ್ಚಿನ ಭೋಜನದ ಮೇಲೂ ಪ್ರಭಾವ ಬೀರಿದೆ. ಏನೇ ಆದ್ರೂ ಈರುಳ್ಳಿ ಬೆಲೆ ಕಡಿಮೆ ಆಗೋವರೆಗೂ ಗ್ರಾಹಕರು ಉಳ್ಳಾಗಡ್ಡಿ ಇಲ್ಲದ ಎಗ್ ರೈಸ್ ಸವಿಯೋದು ಅನಿವಾರ್ಯವಾಗಿ ಬಿಟ್ಟಿದೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications