ಭಿಕ್ಷೆ ಬೇಡುವುದನ್ನು ನನ್ನ ವೀರ ಗಂಡ ಕಲಿಸಿಲ್ಲ : ಮಹಾದೇವಿ
ಸರಕಾರಿ ಕೆಲಸ ಕೊಡುತ್ತೇನೆಂದು ಭರವಸೆ ನೀಡಿದ್ದೇ ರಾಜ್ಯ ಸರಕಾರ. ಆ ಮಾತನ್ನು ಉಳಿಸಿಕೊಳ್ಳಬೇಕೆಂದು ಹೇಳುತ್ತೇನಷ್ಟೇ ನಾನು. ಭಿಕ್ಷೆ ಬೇಡುವುದನ್ನು ನನ್ನ ಗಂಡ ನನಗೆ ಕಲಿಸಿಕೊಟ್ಟಿಲ್ಲ. ನಾನು ಯಾರಲ್ಲೂ ಭಿಕ್ಷೆ ಬೇಡುವುದೂ ಇಲ್ಲ.
ಹುಬ್ಬಳ್ಳಿ, ಫೆಬ್ರವರಿ 22 : 'ಕಂಗಳು ತುಂಬಿರಲು ಕಂಬನಿ ಧಾರೆಯಲಿ, ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ, ಮೇಣದ ದೀಪದಂತೆ ನೊಂದು ನೊಂದು ನೀರಾದೇ..' ಚಂದನದ ಗೊಂಬೆಯ ಈ ಹಾಡನ್ನು ವೀರ ಯೋಧ ಹನುಮಂತಪ್ಪನ ಹೆಂಡತಿ ಮಹಾದೇವಿಗಾಗಿಯೇ ಬರೆಯಲಾಗಿದೆಯಾ?
ಒಂದೆಡೆ ದೇಶಸೇವೆ ಮಾಡುತ್ತಿದ್ದ ಗಂಡ ಹನುಮಂತಪ್ಪನನ್ನು ಕಳೆದುಕೊಂಡಾಗಿದೆ, ಕರುಳಬಳ್ಳಿ ನೇತ್ರಾಳ ಭವಿಷ್ಯತ್ತಿನ ಬಗ್ಗೆ ಚಿಂತಿಸಬೇಕಾಗಿದೆ. ಮತ್ತೊಂದೆಡೆ ಈಡೇರದ ಸರಕಾರದ ಭರವಸೆಗಳು, ಅದಕ್ಕಾಗಿ ಕಚೇರಿಕಚೇರಿಗಳಿಗೆ ಅಲೆದಾಟ. ಸಾಲದೆಂಬಂತೆ ಸುಳ್ಳುಸುದ್ದಿಗಳ ಹರಿದಾಟ.
ಹನುಮಂತಪ್ಪ ಮಣ್ಣಾದ ದಿನವೇ ಸಿದ್ದರಾಮಯ್ಯನವರು ಮಹಾದೇವಿಗೆ ರಾಜ್ಯ ಸರಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಮಹಾದೇವಿಗೆ 25 ಲಕ್ಷ ರುಪಾಯಿ ಮತ್ತು ನಾಲ್ಕೆಕರೆ ಜಮೀನನ್ನು ನೀಡಲಾಗಿದೆಯಾದರೂ ಉದ್ಯೋಗದ ಭರವಸೆ ಇನ್ನೂ ಮರೀಚಿಕೆಯಾಗಿದೆ. [ನೆಲ ಗುಡಿಸಿ ಒರೆಸುವುದಕ್ಕೂ ಸಿದ್ಧ : ಯೋಧ ಹನುಮಂತಪ್ಪನ ಹೆಂಡತಿ]

ಕೆಲಸದ ಭಿಕ್ಷೆ ಬೇಡಲಾರೆ : ಸರಕಾರಿ ಕೆಲಸ ಕೊಡುತ್ತೇನೆಂದು ಭರವಸೆ ನೀಡಿದ್ದೇ ರಾಜ್ಯ ಸರಕಾರ. ಆ ಮಾತನ್ನು ಉಳಿಸಿಕೊಳ್ಳಬೇಕೆಂದು ಹೇಳುತ್ತೇನಷ್ಟೇ ನಾನು. ಭಿಕ್ಷೆ ಬೇಡುವುದನ್ನು ನನ್ನ ಗಂಡ ನನಗೆ ಕಲಿಸಿಕೊಟ್ಟಿಲ್ಲ. ನಾನು ಯಾರಲ್ಲೂ ಭಿಕ್ಷೆ ಬೇಡುವುದೂ ಇಲ್ಲ ಎಂದು ಸ್ವಾಭಿಮಾನದ ಮಾತನ್ನು ಒನ್ಇಂಡಿಯಾ ಕನ್ನಡದ ಜೊತೆ ಮಹಾದೇವಿ ಆಡಿದರು.
ಇನ್ನೊಂದು ತಿಂಗಳಲ್ಲಿ ಕೆಲಸ ಕೊಡುತ್ತೇವೆಂದು ರಾಜ್ಯ ಸರಕಾರ ಭರವಸೆ ನೀಡಿದೆ. ಅದಕ್ಕಾಗಿ ನಾನು ರಾಜ್ಯ ಸರಕಾರಕ್ಕೆ ಆಭಾರಿಯಾಗಿದ್ದೇನೆ. ನನಗೀಗ ಕೆಲಸದ ಅಗತ್ಯವಿರಲಿಕ್ಕಿಲ್ಲ. ಆದರೆ, ಮಗಳ ಭವಿಷ್ಯದ ದೃಷ್ಟಿಯಿಂದ ಕೆಲಸ ಬೇಕೇಬೇಕು. ನನಗೆ ರಾಜ್ಯ ಸರಕಾರ ಹಣ ಕೊಟ್ಟಿದೆ ನಿಜ. ಆದರೆ, ಕೂತು ತಿಂದರೆ ಕುಡಿಕೆ ಹೊನ್ನೂ ಸಾಲುವುದಿಲ್ಲ ಎಂಬ ನುಡಿಯನ್ನು ಎಂದೂ ಮರೆಯುವುದಿಲ್ಲ ಎಂದು ಅವರು ಹೇಳಿದರು. [ದೇಶ ಕಾದ ಯೋಧನ ಪತ್ನಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಲ್ಲವೆ?]
ರಾಜಕೀಯ ಸೇರಲಾರೆ : ವೀರಯೋಧನ ಪತ್ನಿ ಎಂಬ ಸಂಗತಿಯನ್ನೇ ಬಂಡವಾಳ ಮಾಡಿಕೊಂಡು ನಾನು ಯಾವ ರಾಜಕೀಯ ಚಟುವಟಿಕೆಯಲ್ಲೂ ಪಾಲ್ಗೊಂಡಿಲ್ಲ. ಗೌರವಯುತವಾಗಿ ಬದುಕುವುದು ಹೇಗೆ ಅಂತ ನನಗೆ ಗೊತ್ತು. ಯಾವುದೋ ರಾಜಕೀಯ ಪಕ್ಷದೊಡನೆ ಅಡ್ಡಾಡುತ್ತಿದ್ದೇನೆ ಎಂಬ ಸುದ್ದಿ ಶುದ್ಧ ಸುಳ್ಳು ಎನ್ನುತ್ತಾರೆ ಮಹಾದೇವಿ.
ಹೌದು, ರಾಜಕೀಯ ಸೇರಿ, ಗ್ರಾಮ ಪಂಚಾಯತಿ ಚುನಾವಣೆ ಸ್ಪರ್ಧಿಸಿ ಎಂಬ ಆಗ್ರಹ ಬಂದಿದ್ದು ನಿಜ. ನನ್ನ ಕೆಲ ಹಿತೈಷಿಗಳೇ ಈ ಸಲಹೆ ನೀಡಿದ್ದರು. ಆದರೆ, ನನಗೆ ಜೀವನ ಮಾಡಲು ರಾಜಕೀಯ ಸೇರುವ ಅಗತ್ಯವಿಲ್ಲ. ನನ್ನ ಗಂಡ ಯಾವ ಪಕ್ಷಕ್ಕೂ ಸೇರಿದವರಾಗಿರಲಿಲ್ಲ. ಅವರ ನೆರಳಿನಲ್ಲಿಯೇ ನಾನು ಸಾಗಬಯಸುತ್ತೇನೆ ಎಂದು ಮಹಾದೇವಿ ಹೆಮ್ಮೆಯಿಂದ ಹೇಳಿದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications